ನಮ್ಮ ಪ್ರಧಾನಿ ನಮ್ಮ ಹೆಮ್ಮೆ.ಉಗ್ರರ ವಿರುದ್ಧದ ಆಪರೇಷನ್ ಸಿಂಧೂರ ಶ್ಲಾಘನೀಯ: ರಮಿತಾ ಶೈಲೇಂದ್ರ ಕಾರ್ಕಳ

Date:

spot_img

ಸಿಂಧೂರ ಹೇಳುವಂತದ್ದು ಭಾರತೀಯ ಮಹಿಳೆಯರ ಮುತ್ತೈದೆ ಸೌಭಾಗ್ಯ.

15 ದಿನಗಳ ಹಿಂದೆ ಪಹಲ್ಗಾಮನಲ್ಲಿ ಪ್ರವಾಸಕ್ಕೆ ತೆರಳಿದ್ದ ಭಾರತೀಯರ ಮೇಲೆ ನಡೆದಿರುವ ದಾಳಿಯಿಂದಾಗಿ 26 ತಾಯಂದಿರು ವಿಧವೆ ಆಗುವಂತಹ ಸನ್ನಿವೇಶ ಎದುರಾಗಿದ್ದು ಇದು ನಮ್ಮ ನೆರೆಯ ರಾಷ್ಟ್ರವಾಗಿರುವ ಪಾಕಿಸ್ತಾನದ ಷಡ್ಯಂತರವೆಂಬುವಂತದ್ದು ನಾಚಿಕೆಯ ವಿಷಯವಾಗಿತ್ತು. ಇಡೀ ಭಾರತದ ಜನತೆಗೆ ಇದು ಆತಂಕ ಕೆಡಿಸುವ ವಿಷಯವಾಗಿದ್ದರೂ ಸಮರ್ಥ ನಾಯಕನಿದ್ದರೆ ಪ್ರಜೆಗಳ ಹಿತಾಶಕ್ತಿಯನ್ನು ಬಯಸುವಂತಹ ಪ್ರಧಾನಿ ಇದಕ್ಕೆ ಪ್ರತ್ಯುತ್ತರವನ್ನು ನೀಡುವ ಮೂಲಕ ಸಿಂಧೂರ ಕಳಕೊಂಡವರ ಸಹೋದರನಾಗಿ ನಿಂತು ಭಾರತೀಯ ಸೇನೆಯಿಂದ ಉತ್ತರ ಕೊಟ್ಟಿದ್ದಾರೆ. ಇಡೀ ಭಾರತೀಯರು ಅಲ್ಲದೆ ಪ್ರಪಂಚದ ಇತರ ರಾಷ್ಟ್ರಗಳು ಭಾರತದತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದಂತು ಸುಳ್ಳಲ್ಲ, ಪಾಕ್ ನ ಉಗ್ರರನ್ನು ಸದೆಬಡೆಯುವ ಮೂಲಕ ಭಾರತೀಯ ಸೇನೆಯ ಶೌರ್ಯವನ್ನು ತೋರಿಸಿಕೊಟ್ಟರೆ ,ಇನ್ನೊಂದು ಕಡೆಯಲ್ಲಿ ಭಾರತೀಯ ಹೆಣ್ಣುಮಕ್ಕಳ ತಂಟೆಗೆ ಬಂದಲ್ಲಿ ಅವರ ಸ್ಥಿತಿಗತಿಗಳು ಏನಾಗುತ್ತದೆ ಎಂಬುವಂತ ಪರಂಪರೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಭಾರತದ ಹೆಣ್ಣು ಮಕ್ಕಳ ನಾರಿ ಶಕ್ತಿಯನ್ನು ಯುದ್ಧದ ಮಾಹಿತಿ ಪತ್ರಿಕಾಗೋಷ್ಠಿಯಲ್ಲಿ ಸಿಂಹಿಣಿಯರ ಮೂಲಕ ಹೇಳಿಸಿರುವಂತದ್ದು ಭಾರತದ ಪ್ರತಿಯೊಂದು ಮಹಿಳೆಯು ಹೆಮ್ಮೆಪಡುವಂತಹ ವಿಷಯ. ನಮ್ಮ ಆಯ್ಕೆಗಳು ಸ್ಪಷ್ಟವಾಗಿದ್ದಲ್ಲಿ ಒಬ್ಬ ಸಮರ್ಥ ನಾಯಕ ದೇಶವನ್ನಾಳಲು ಸಾಧ್ಯ.

ರಮಿತಾ ಶೈಲೇಂದ್ರ ಕಾರ್ಕಳ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.