spot_img

ಲಯನ್ಸ್ ಕ್ಲಬ್ ಹಿರಿಯಡ್ಕ ಕ್ಕೆ ಲಯನ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ

Date:

ದಿನಾಂಕ 30-03-2025ನೇ ಆದಿತ್ಯವಾರದಂದು ಲಯನ್ಸ್ ಕ್ಲಬ್ ಹಿರಿಯಡ್ಕದವರ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮವು ಹಿರಿಯಡ್ಕ ಅಂಜಾರಿನ ನಾರಾಯಣಗುರು ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಹಿರಿಯಡ್ಕದ ಅಧ್ಯಕ್ಷರಾದ ಲಯನ್ ಸುಧೀರ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಹಿರಿಯಡ್ಕದವರು ಮಾಡಿದ್ದ ಸೇವಾ ಚಟುವಟಿಕೆಗಳನ್ನು ವೀಕ್ಷಿಸಲು ಆಗಮಿಸಿದ್ದ ಜಿಲ್ಲಾ ರಾಜ್ಯಪಾಲರಾದ ಲಯನ್ ಮೊಹಮ್ಮದ್ ಹನೀಫ್ ರವನ್ನು ಬೆಳಿಗ್ಗೆ 10 ಗಂಟೆಗೆ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಹಿರಿಯಡ್ಕ ದೇವಸ್ಥಾನದಲ್ಲಿ ಸ್ವಾಗತಿಸಿದರು. ವೀರಭದ್ರ ದೇವರನ್ನು ಪ್ರಾರ್ಥಿಸಿ ಬಳಿಕ ಮುತ್ತೂರಿನ ಒಬ್ಬರು ಅನಾರೋಗ್ಯ ಪೀಡಿತ ಮಹಿಳೆಗೆ ಕ್ಲಬ್ ವತಿಯಿಂದ ಧನಸಹಾಯ ಮಾಡಿ ಮುಂದೆ ಲಯನ್ ಕ್ಲಬ್ ಹಿರಿಯಡ್ಕದವರಿಂದ ನಿರ್ಮಿಸಲ್ಪಟ್ಟು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಅಂಜಾರಿನ ಹೊಸ ಪ್ರಯಾಣಿಕರ ತಂಗುದಾನವನ್ನು ಜಿಲ್ಲಾ ರಾಜ್ಯಪಾಲರು ಉದ್ಘಾಟಿಸಿದರು.

ಮುಂದೆ ಲಯನ್ಸ್ ಕ್ಲಬ್ ಹಿರಿಯಡ್ಕದವರು ನಿರ್ಮಿಸಿದ್ದ 2 ದಾರಿ ಫಲಕಗಳನ್ನು ಜಿಲ್ಲಾ ರಾಜ್ಯಪಾಲರು ವೀಕ್ಷಿಸಿ ನಂತರ ಅತ್ರಾಡಿಯಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಒಂದು ಕುಟುಂಬಕ್ಕೆ ಹೋಮ್ ಫಾರ್ ಹೋಮ್ ಲೆಸ್ ಕಾರ್ಯಕ್ರಮದಡಿ ಮನೆ ನವೀಕರಣಕ್ಕೆ ಧನ ಸಹಾಯವನ್ನು ಕ್ಲಬ್ ವತಿಯಿಂದ ನೀಡಲಾಯಿತು. ನಂತರ ಮಣಿಪಾಲದ ರಾಜಥಾದ್ರಿಯಲ್ಲಿರುವ ಲಯನ್ಸ್ ಕ್ಲಬ್ ಹಿರಿಯಡ್ಕ ದವರು ನಿರ್ಮಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದ ಪ್ರಯಾಣಿಕರ ತಂಗುದಾನವನ್ನು ಜಿಲ್ಲಾ ರಾಜ್ಯಪಾಲರು ವೀಕ್ಷಿಸಿದರು, ಮಧ್ಯಾಹ್ನ ಕ್ಲಬ್ ಅಧ್ಯಕ್ಷರ ಮನೆಯಲ್ಲಿ BOD ಮೀಟಿಂಗ್ ನ್ನು ನಡೆಸಿ ಬೆಳಿಗ್ಗಿನ ಕಾರ್ಯಕ್ರಮವನ್ನು ಮುಕ್ತಯಗೊಳಿಸಲಾಯಿತು.

ಸಂಜೆ 7-00 ಗಂಟೆಗೆ ಕ್ಲಬ್ ಅಧ್ಯಕ್ಷರಾದ ಲಯನ್ ಸುಧೀರ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಾರಾಯಣಗುರು ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಹಿರಿಯಡ್ಕಕ್ಕೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮವು ನಡೆಯಿತು, ಜಿಲ್ಲಾ ರಾಜ್ಯಪಾಲರಾದ ಲಯನ್ ಮೊಹಮ್ಮದ್ ಹನೀಫ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಪ್ರಥಮ ಉಪ ಜಿಲ್ಲಾ ರಾಜ್ಯಪಾಲರಾದ ಲಯನ್ ಸಪ್ನಾ ಸುರೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಗಿರೀಶ್ ರಾವ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಲಯನ್ ಶ್ರೀನಿವಾಸ್ ಪೈ, ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ವಿಶ್ವನಾಥ ಶೆಟ್ಟಿ ಪ್ರಾಂತ್ಯ ಅಧ್ಯಕ್ಷರಾದ ಲಯನ್ ಹರೀಶ್ ಪೂಜಾರಿ, ವಲಯ ಅಧ್ಯಕ್ಷರಾದ ಲಯನ್ ಪ್ರಕಾಶ್ ಶೆಟ್ಟಿ, ಲಯನ್ಸ್ ಕ್ಲಬ್ ಹಿರಿಯಡ್ಕದ ಕಾರ್ಯದರ್ಶಿ ಲಯನ್ ವಸಂತ ಶೆಟ್ಟಿ, ಕೋಶಾಧಿಕಾರಿ ಲಯನ್ ಬಾಲಕೃಷ್ಣ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ ಅನುಷಾ ಪ್ರಾರ್ಥನೆಯನ್ನು ಮಾಡಿದರು,
ಅಧ್ಯಕ್ಷರಾದ ಲಯನ್ ಸುಧೀರ್ ಹೆಗ್ಡೆಯವರು ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯದರ್ಶಿ ಲಯನ್ ವಸಂತ ಶೆಟ್ಟಿಯವರು ಕ್ಲಬ್ ಸೇವಾ ಚಟುವಟಿಕೆಗಳ ವರದಿಯನ್ನು ಓದಿದರು, ಜಿಲ್ಲಾ ರಾಜ್ಯಪಾಲರು ಲಯನ್ಸ್ ಕ್ಲಬ್ ಹಿರಿಯಡ್ಕದ ಸೇವಾ ಚಟುವಟಿಗಳಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು, ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಲಯನ್ಸ್ ಕ್ಲಬ್ ಹಿರಿಯಡ್ಕಕ್ಕೆ ಶುಭ ಹಾರೈಸಿದರು, ಕಾರ್ಯದರ್ಶಿ ಲಯನ್ ವಸಂತ ಶೆಟ್ಟಿಯವರು ಆಗಮಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು. ಕ್ಲಬ್ ನ ಹಿರಿಯ ಸದಸ್ಯ ಲಯನ್ ಬಾಲಕೃಷ್ಣ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಐಪಿಎಲ್ ಗೆಲುವಿಗೆ ದೇವರ ಆಶೀರ್ವಾದ? ವಿರಾಟ್-ಅನುಷ್ಕಾ ಭಕ್ತಿಯ ಹಿನ್ನಲೆ ಇದೀಗ ಚರ್ಚೆಗೆ ಕಾರಣ

ಐಪಿಎಲ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಭಾವುಕರಾದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಜೋಡಿ ಪಂದ್ಯಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದ ವಿಚಾರವೂ ಇದೀಗ ಮತ್ತೆ ಬೆಳಕಿಗೆ ಬಂದಿದೆ.

ಆರ್‌ಸಿಬಿ ಅಭಿಮಾನಿ ಮೂಲ್ಕಿ ಮೂಲದ ಅಕ್ಷತಾ ಕಾಲ್ತುಳಿತದಿಂದ ಸಾವು: ಟೀಶರ್ಟ್‌ನಿಂದ ಗುರುತು ಹಚ್ಚಿದ ಪತಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಿದ್ದಾಪುರದ ಅಕ್ಷತಾ (27) ಮೃತಪಟ್ಟಿದ್ದಾರೆ. ಆರ್‌ಸಿಬಿ ಟೀಶರ್ಟ್‌ನಿಂದ ಪತ್ನಿಯ ಗುರುತನ್ನು ಗಂಡ ಆಶಯ್ ಪತ್ತೆ ಹಚ್ಚಿದರು.

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ11 ಮಂದಿ ಮೃತ್ಯು : ಸಿಎಂ ಸಿದ್ದರಾಮಯ್ಯರವರಿಂದ ₹10 ಲಕ್ಷ ಪರಿಹಾರ ಘೋಷಣೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, ಸಿದ್ದರಾಮಯ್ಯಮೃತಪಟ್ಟ 11 ಮಂದಿ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.

“ಇನ್ನು ಕೆಲದಿನ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆ” : ಅಭಿಮಾನಿಗಳಿಗೆ ಶಾಕ್ ಕೊಟ್ಟ ಶೋಭಾ ಶೆಟ್ಟಿ

ಬಿಗ್ ಬಾಸ್ ಖ್ಯಾತಿಯ ನಟಿ ಹಾಗೂ ಕನ್ನಡ-ತೆಲುಗು ಚಿತ್ರರಂಗದಲ್ಲಿ ಚಿರಪರಿಚಿತರಾದ ಶೋಭಾ ಶೆಟ್ಟಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ “ನಾನು ಕೆಲವು ದಿನಗಳವರೆಗೆ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆ” ಎಂಬ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.