spot_img

ಹನಿಮೂನ್‌ಗೆ ಹೋಗಿದ್ದ ನವವಿವಾಹಿತ ದಂಪತಿ ನಾಪತ್ತೆ !

Date:

spot_img

ಶಿಲ್ಲಾಂಗ್ (ಮೇಘಾಲಯ): ಹನಿಮೂನ್‌ಗಾಗಿ ಮೇಘಾಲಯದ ಶಿಲ್ಲಾಂಗ್‌ಗೆ ತೆರಳಿದ್ದ ಮಧ್ಯಪ್ರದೇಶದ ನವವಿವಾಹಿತ ದಂಪತಿ ನಾಪತ್ತೆಯಾಗಿರುವ ಘಟನೆ ಅಲ್ಲಿನ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ಸುತ್ತ ಮುತ್ತಲಿನ ನಿಗೂಢತೆ ಗಾಢವಾಗಿದೆ.

ಇಂದೋರ್‌ನ ರಾಜಾ ರಘುವಂಶಿ ಹಾಗೂ ಪತ್ನಿ ಸೋನಮ್ ಅವರು ಮೇ 11ರಂದು ವಿವಾಹವಾಗಿದ್ದು, ಮೇ 20ರಂದು ಹನಿಮೂನ್ ಪ್ರಯಾಣ ಆರಂಭಿಸಿದ್ದರು. ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ದಂಪತಿ ಶಿಲ್ಲಾಂಗ್‌ಗೆ ಬಂದಿದ್ದರು. ಶಿಲ್ಲಾಂಗ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಚಿರಾಪುಂಜಿಗೆ (ಸೊಹ್ರಾ) ಭೇಟಿ ನೀಡಲು ದ್ವಿಚಕ್ರ ವಾಹನ ಬಾಡಿಗೆಗೆ ತೆಗೆದುಕೊಂಡಿದ್ದರು.

ಮೇ 23ರಂದು ರಾಜಾ ತನ್ನ ತಾಯಿಯೊಂದಿಗೆ ಕೊನೆಯ ಬಾರಿ ದೂರವಾಣಿ ಸಂಭಾಷಣೆ ನಡೆಸಿದ್ದು, ನಂತರದಿಂದ ಅವರಿಬ್ಬರ ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ. ಮೇ 24ರಿಂದ ಅವರೊಡನೆ ಸಂಪರ್ಕ ದೊರೆತಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮಾಲೀಕನ ಹೇಳಿಕೆಯಂತೆ, ಬಾಡಿಗೆಗೆ ಪಡೆದ ಆಕ್ಟಿವಾ ಸ್ಕೂಟರ್ ಸೊಹ್ರಾರಿಮ್ ಎಂಬ ಹಳ್ಳಿಯ ಹಳ್ಳದ ಸಮೀಪ ಪತ್ತೆಯಾಗಿದೆ, ಆದರೆ ದಂಪತಿಯು ಎಲ್ಲೂ ಪತ್ತೆಯಾಗಿಲ್ಲ.

ಇದಕ್ಕೂ ಮುನ್ನ ಈಸ್ಟ್ ಖಾಸಿ ಹಿಲ್ಸ್‌ ಬಳಿ ಹಂಗೇರಿಯ ಪ್ರವಾಸಿಗ ಪುಸ್ಕಾಸ್ ಝೂಲ್ಡ್ ಶವವಾಗಿ ಪತ್ತೆಯಾದದ್ದು ಈಗ ಈ ದಂಪತಿಗಳ ನಾಪತ್ತೆ ಪ್ರಕರಣ ಪ್ರವಾಸಿಗರ ಸುರಕ್ಷತೆ ಬಗ್ಗೆ ಗಂಭೀರ ಆತಂಕವನ್ನು ಎಬ್ಬಿಸಿದೆ. ಇದೀಗ ನವ ದಂಪತಿಯ ನಾಪತ್ತೆ ಪ್ರಕರಣ ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಪ್ರಸ್ತುತ ಪೊಲೀಸರು, ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಸಂಯುಕ್ತ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆ ಸಂಭವಿಸಿದ ಪ್ರದೇಶದಲ್ಲಿ ದಟ್ಟ ಕಾಡುಗಳು, ಇಳಿಜಾರು ಪ್ರದೇಶ ಹಾಗೂ ಆಳವಾದ ಹಳ್ಳಗಳಿದ್ದ ಕಾರಣ ಕಾರ್ಯಾಚರಣೆ ಸವಾಲಿನ ಕಾಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ದಂಪತಿ ಯಾವುದಾದರೂ ರೆಸಾರ್ಟ್‌ನಲ್ಲಿ ತಂಗಿದ್ದಾರಾ ಅಥವಾ ಅಪರಾಧ ಚಟುವಟಿಕೆಗಳಿಗೆ ಬಲಿಯಾದರಾ ಎಂಬುದು ಇನ್ನೂ ಪತ್ತೆಯಾಗಿಲ್ಲ. ಘಟನೆ ಸಂಬಂಧಿಸಿದಂತೆ ಸ್ಥಳೀಯ ರೆಸಾರ್ಟ್‌ಗಳಿಗೂ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ರಾಹುಲ್ ಗಾಂಧಿಯವರ ತ್ಯಾಗ ದೇಶದ ಯುವಕರಿಗೆ ಮಾದರಿಯಾಗಬೇಕು”: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಲೋಕಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಷ್ಟ ಮತ್ತು ತ್ಯಾಗ ದೇಶದ ಯುವಕರಿಗೆ ಮಾದರಿಯಾಗಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಇತಿಹಾಸ ನಿರ್ಮಿಸಿದ ದಿವ್ಯಾ ದೇಶಮುಖ್: ಮಹಿಳಾ ಚೆಸ್ ವಿಶ್ವಕಪ್ ಗೆದ್ದು ಗ್ರಾಂಡ್‌ಮಾಸ್ಟರ್ ಪಟ್ಟಕ್ಕೆ!

ಜಾರ್ಜಿಯಾದ ಬಟುಮಿಯಲ್ಲಿ ಇಂದು (ಜುಲೈ 28, 2025) ನಡೆದ FIDE ಮಹಿಳಾ ವಿಶ್ವಕಪ್ 2025 ರಲ್ಲಿ, ನಾಗಪುರದ 19 ವರ್ಷದ ಪ್ರತಿಭಾವಂತ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.

ಆ್ಯಸಿಡಿಟಿ, ಮಲಬದ್ಧತೆ, ಅಲ್ಸರ್‌ಗೆ ರಾಮಬಾಣ ‘ಓಂಕಾಳು’: ಇಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು!

ಓಂಕಾಳು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದ್ದರೂ, ಇದರ ಸೇವನೆಯಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ.

ಧರ್ಮಸ್ಥಳ, ಉಡುಪಿ, ಕೊಲ್ಲೂರು ಕ್ಷೇತ್ರಗಳ ಬಗ್ಗೆ ವಿವಾದಾತ್ಮಕ ವಿಡಿಯೋ : ಇಬ್ಬರು ಕೇರಳ ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲು!

ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ, ಮತ್ತು ಕೊಲ್ಲೂರು ಬಗ್ಗೆ ಅವಹೇಳನಕಾರಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಕೇರಳದ ಇಬ್ಬರು ವ್ಯಕ್ತಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.