spot_img

ಕರ್ತವ್ಯ ಲೋಪ: ಕುಂದಾಪುರ ಉಪವಿಭಾಗಾಧಿಕಾರಿ ಕೆ. ಮಹೇಶ್ಚಂದ್ರ ಅಮಾನತು

Date:

ಉಡುಪಿ: ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ, ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿ ಕೆ. ಮಹೇಶ್ಚಂದ್ರ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಅವರಿಗೆ ಉಪವಿಭಾಗಾಧಿಕಾರಿ ಹುದ್ದೆಯ ಪ್ರಭಾರವನ್ನು ವಹಿಸಲಾಗಿದೆ.

ಭೂ ಬಳಕೆ ಬದಲಾವಣೆಯಲ್ಲಿ ಗಂಭೀರ ಅಕ್ರಮ?
ಮಹೇಶ್ ಚಂದ್ರ ಅವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದಾಗ, ಬಡಾನಿಡಿಯೂರು ಗ್ರಾಮದಲ್ಲಿ ವಾಣಿಜ್ಯ ರೆಸಾರ್ಟ್ ನಿರ್ಮಾಣ ಸಂಬಂಧ ಭೂ ಉಪಯೋಗ ಬದಲಾವಣೆಗೆ ಸಂಬಂಧಿಸಿದ ಕಡತದಲ್ಲಿ ಅಕ್ರಮ ದಾಖಲೆ ಸೃಷ್ಟಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಉಡುಪಿ ಶಾಸಕರು ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಅಸಮಾಧಾನಕರ ಸಮಜಾಯಿಷಿ, ಅಮಾನತು ಆದೇಶ
ಇದೀಗ ಈ ಪ್ರಕರಣದ ಬಗ್ಗೆ ಮಹೇಶ್ ಚಂದ್ರರಿಂದ ಸಮಜಾಯಿಷಿ ಕೇಳಲಾಗಿತ್ತು. ಆದರೆ, ಅವರ ಉತ್ತರ ತೃಪ್ತಿಕರವಾಗಿಲ್ಲ ಎಂಬ ಕಾರಣದಿಂದ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿಯವರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮರು ನೇಮಕಗೊಂಡ ರಶ್ಮಿ
ಈ ಹಿಂದೆ ಕುಂದಾಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಉಪವಿಭಾಗಾಧಿಕಾರಿ ರಶ್ಮಿ ಅವರನ್ನು ಸರಕಾರ ಪುನರ್ ನೇಮಕ ಮಾಡಲು ಆದೇಶ ಹೊರಡಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇತಿಹಾಸದ ಕ್ಷಣ: 1971ರ ಬಳಿಕ ಮತ್ತೆ ಕರಾಚಿ ಬಂದರಿಗೆ ನೇರ ದಾಳಿ ನಡೆಸಿದ ಭಾರತೀಯ ನೌಕಾಪಡೆ!

INS ವಿಕ್ರಾಂತ್ ನಿಂದ ಉಡಾಯಿಸಲಾದ MIG-29 ಯುದ್ಧ ವಿಮಾನಗಳು ಪಾಕಿಸ್ಥಾನದ ಪ್ರಮುಖ ನೌಕಾ ನೆಲೆಯಾದ ಕರಾಚಿ ಬಂದರಿಗೆ ನೇರ ದಾಳಿ ನಡೆಸಿದ್ದು, ಈ ದಾಳಿ ಅರೇಬಿಯನ್ ಸಮುದ್ರದ ಮಾರ್ಗದಿಂದ ನಡೆದಿರುವುದು ಗಮನಾರ್ಹ.

ದೇಶದ ಭದ್ರತೆ ವಿಚಾರದಲ್ಲೂ ಗೋಸುಂಬೆಗಳ ತರಹ ವರ್ತಿಸುವ ಕಾಂಗ್ರೆಸ್: ರಾಕೇಶ್ ಶೆಟ್ಟಿ ಕುಕ್ಕುಂದೂರು

ಕಾಶ್ಮಿರದ ಪೆಹಲ್ಗಾಮ್ ನಲ್ಲಿ ಹಿಂದೂಗಳ ಹತ್ಯೆ ದೇಶದ ಭದ್ರತೆ ಮತ್ತು ಭಯೋತ್ಪಾದಕರ ವಿರುದ್ಧದ ಕಠಿಣ ನಿರ್ಧಾರಗಳ ಕುರಿತು ಕಾಂಗ್ರೆಸ್ ಪಕ್ಷ ಗೋಸುಂಬೆ ರೀತಿ ವರ್ತಿಸುತ್ತಿದೆ.

ಪಾಕಿಸ್ತಾನಕ್ಕೆ ರಾಜನಾಥ್ ಎಚ್ಚರಿಕೆ: ಭಾರತದ ತಾಳ್ಮೆ ಪರೀಕ್ಷಿಸಿದರೆ ಗುಣಮಟ್ಟದ ಪ್ರತಿಕ್ರಿಯೆ ಅನಿವಾರ್ಯ!

ಭಾರತದ ತಾಳ್ಮೆಯನ್ನು ಪಾಕಿಸ್ತಾನ ಮತ್ತೆ ಪರೀಕ್ಷಿಸುವ ಪ್ರಯತ್ನ ಮಾಡಿದರೆ, ಇದು ದೇಶದಿಂದ 'ಗುಣಮಟ್ಟದ ಪ್ರತಿಕ್ರಿಯೆ'ಗೆ ದಾರಿ ಮಾಡಿಕೊಡುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ದಿನ ವಿಶೇಷ – ಯುರೋಪ್ ದಿನ

ಪ್ರತಿ ವರ್ಷ ಮೇ 9 ರಂದು ಯುರೋಪ್ ದಿನವನ್ನು ಆಚರಿಸಲಾಗುತ್ತದೆ, ಇದು ಯುರೋಪಿನಲ್ಲಿ ಶಾಂತಿ ಮತ್ತು ಏಕತೆಯನ್ನು ಆಚರಿಸುತ್ತದೆ.