
ಭುವನೇಶ್ವರ: ನಕ್ಸಲರು ಮತ್ತೊಮ್ಮೆ ಧೈರ್ಯದ ಹದ್ದನ್ನು ದಾಟಿದ್ದಾರೆ! ಒಡಿಶಾದ ಸುಂದರ್ಗಢ ಜಿಲ್ಲೆಯ ಕಲ್ಲು ಕೋರೆಯೊಂದರಲ್ಲಿ ಇರಿಸಲಾಗಿದ್ದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಬಳಕೆ ಮಾಡಬಹುದಾದ ಶಂಕೆಯ ನಡುವೆಯೇ, ಶಸ್ತ್ರಸಜ್ಜಿತರಾಗಿ ಬಂದ 25-30 ನಕ್ಸಲ್ ಸದಸ್ಯರು ಮಂಗಳವಾರ ಟ್ರಕ್ವೊಂದನ್ನು ಲೂಟಿ ಮಾಡಿದ್ದಾರೆ. ಟ್ರಕ್ನಲ್ಲಿ ಸುಮಾರು 4 ಟನ್ ಸ್ಫೋಟಕ ವಸ್ತುಗಳಿದ್ದವು.
ಈ ಲೂಟಿ ನಡೆದ ನಂತರ, ನಕ್ಸಲರು ಟ್ರಕ್ಕನ್ನು ಝಾರ್ಖಂಡ್ ಗಡಿಗೆ ಕೊಂಡೊಯ್ದು ಅಲ್ಲಿಯೇ ಸ್ಫೋಟಕಗಳನ್ನು ಇಳಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಇತ್ತೀಚೆಗೆ ನಾಯಕ ಬಸವರಾಜು ಭದ್ರತಾ ಪಡೆಗಳಿಂದ ಹತ್ಯೆಗೊಳಗಾದ ಬಳಿಕ, ನಕ್ಸಲ್ ಸಂಘಟನೆ ಭಾರಿ ಆಘಾತ ಅನುಭವಿಸಿದ್ದು, ಈ ಕೃತ್ಯವನ್ನು ಅವರು ಸೇಡು ತೀರಿಸಿಕೊಳ್ಳುವ ದಿಟ್ಟ ಹೆಜ್ಜೆಯಾಗಿ ಬಳಸಿರಬಹುದು ಎಂಬ ಅಂದಾಜನ್ನು ಭದ್ರತಾ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಝಾರ್ಖಂಡ್ನ ನಕ್ಸಲ್ ಸದಸ್ಯರುಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಒಡಿಶಾ ಪೊಲೀಸರಿಂದ ಬಂದಿದೆ. ಪರಿಣಾಮವಾಗಿ, ಝಾರ್ಖಂಡ್-ಒಡಿಶಾ ಗಡಿಚಾಲನೆ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಗಸ್ತು ಪರಿಶೀಲನೆಗೂ ಬಿಗಿ ಕ್ರಮ ಕೈಗೊಳ್ಳಲಾಗಿದೆ.