spot_img

“ನಕ್ಸಲ್ ಶರಣಾಗತಿ ಪ್ರಕ್ರಿಯೆ: ಶರಣಾಗತಿಗಳಿಗೆ ಸೌಲಭ್ಯ, ಕಾನೂನು ಕ್ರಮ ಮತ್ತು ನಿಗಾ ಕ್ರಮಗಳ ವಿವರ”

Date:

spot_img

    ಶರಣಾಗತಿಯ ನಂತರ ನಡೆಯುವ ಪ್ರಕ್ರಿಯೆ

    1. ಮಾಹಿತಿ ಪೂರೈಕೆ:
      ಶರಣಾಗತರು ಶರಣಾಗತಿಯಾಗಿ ಬಂದ ನಂತರ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.
      2. ಸಾರ್ವಜನಿಕ ಘೋಷಣೆ:
      ಶರಣಾಗತರು ಮಾಧ್ಯಮಗಳ ಮುಂದೆ ಸ್ವಇಚ್ಛೆಯಿಂದ ಶರಣಾಗತಿಯಾಗಿರುವ ಬಗ್ಗೆ ಸ್ಪಷ್ಟ ಮತ್ತು ಸಾರ್ವಜನಿಕ ಪ್ರಕಟಣೆ ನೀಡಬೇಕು.
      3. ತಮ್ಮ ಸಹಚರರ ಮಾಹಿತಿ:
      ಶರಣಾಗತರು ತಮ್ಮೊಂದಿಗೆ ಭೂಗತವಾಗಿ ಕೆಲಸ ಮಾಡುತ್ತಿದ್ದ ಎಲ್ಲಾ ಸಹಚರರ ಹೆಸರುಗಳನ್ನು ಬಹಿರಂಗ ಪಡಿಸಬೇಕು.
      4. ವೀಡಿಯೋ ದಾಖಲೆ:
      ಶರಣಾಗತ ವ್ಯಕ್ತಿಯ ಹೇಳಿಕೆಯನ್ನು ವಿಡಿಯೋ ಮೂಲಕ ದಾಖಲಿಸಬೇಕು.
      5. ರಾಜ್ಯ ಶರಣಾಗತಿ ಸಮಿತಿಯಿಂದ ಅನುಮೋದನೆ:
      ಜಿಲ್ಲಾ ಶರಣಾಗತಿ ಸಮಿತಿಯಿಂದ ದಾಖಲಾದ ವರದಿಯನ್ನು ರಾಜ್ಯ ಶರಣಾಗತಿ ಸಮಿತಿಗೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.
      6. ಶರಣಾಗತಿ ಸೌಲಭ್ಯಗಳು:
      ಶರಣಾಗತಿಗೆ ಸರ್ಕಾರದ ನಿಯಮಾವಳಿಯ ಪ್ರಕಾರ ಸೌಲಭ್ಯಗಳನ್ನು ನೀಡಲು ಜಿಲ್ಲಾ ಶರಣಾಗತಿ ಸಮಿತಿಯು ಮುಂದಾಗುತ್ತದೆ.
      7. ನಿಗಾ ಅವಧಿ:
      ಶರಣಾಗತ ವ್ಯಕ್ತಿಯ ಮೇಲೆ ಎರಡು ವರ್ಷಗಳ ಕಾಲ ವಿಶೇಷ ನಿಗಾ ಇಡಲಾಗುತ್ತದೆ.
      8. ಸಂಪರ್ಕಾಧಿಕಾರಿ:
      ಡಿವೈಎಸ್‌ಪಿ ಶ್ರೇಣಿಯ ಆಂತರಿಕ ಭದ್ರತಾ ಅಧಿಕಾರಿಯನ್ನು ಶರಣಾಗತಿಗಳ ಸಂಪರ್ಕಾಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ. ಈ ಅಧಿಕಾರಿ ಶರಣಾಗತ ವ್ಯಕ್ತಿಯ ಚಲನವಲನವನ್ನು ನಿಗ್ರಹಿಸಿ ತಿಂಗಳಿಗೆ ಒಂದು ಬಾರಿ ವರದಿ ಸಲ್ಲಿಸುತ್ತಾರೆ.
      9. ಶರಣಾಗತಿ ವರದಿ ತಯಾರಿ:
      ಶರಣಾಗತಿ ವರದಿಯನ್ನು ತಯಾರಿಸಿ, ಜಿಲ್ಲಾ ಶರಣಾಗತಿ ಸಮಿತಿಯ ಮುಂದೆ ಮಂಡಿಸಬೇಕು.

    ಕಾನೂನು ಪ್ರಕ್ರಿಯೆ

    ಪ್ರಕರಣಗಳ ಪರಿಶೀಲನೆ:
    ಶರಣಾಗತ ವ್ಯಕ್ತಿಯ ಮೇಲೆ ಇದ್ದ ಪ್ರಕರಣಗಳನ್ನು ರಾಜ್ಯ ಶರಣಾಗತಿ ಸಮಿತಿ ಪರಿಶೀಲಿಸಿ, ಅವುಗಳನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಮನವಿ ಸಲ್ಲಿಸಬಹುದು.

    ಸಂಪುಟದ ಅನುಮತಿ:
    ಪ್ರಕರಣ ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟದ ಅನುಮತಿ ಅಗತ್ಯವಿರುತ್ತದೆ.

    ಕೋರ್ಟ್‌ನಲ್ಲಿ ಅರ್ಜಿ:
    ಸರ್ಕಾರದ ಅಭಿಯೋಜಕರು ಸಂಬಂಧಪಟ್ಟ ಕೋರ್ಟ್‌ನಲ್ಲಿ ಪ್ರಕರಣ ವಾಪಸ್ ಪಡೆಯಲು ಅರ್ಜಿ ಸಲ್ಲಿಸಬೇಕು.

    ಕೋರ್ಟ್ ನಿರ್ಧಾರ:
    ಕೋರ್ಟ್ ಪರಿಗಣನೆ ಮಾಡಿದ ನಂತರ, ಪ್ರಕರಣ ವಾಪಸ್ ಮಾಡಲು ಅನುಮತಿ ನೀಡಬಹುದು.

    ಕೇಂದ್ರದ ಶರಣಾಗತಿ ಪ್ರಕ್ರಿಯೆ:
    ರಾಜ್ಯದಿಂದ ಶಿಫಾರಸು ಪ್ರಕ್ರಿಯೆ ಪೂರ್ಣಗೊಂಡ ನಂತರ, ಅದು ಕೇಂದ್ರ ನಕ್ಸಲ್ ಶರಣಾಗತಿ ಸಮಿತಿಗೆ ಕಳುಹಿಸಲಾಗುತ್ತದೆ.

    ಅಂತಿಮ ನಿರ್ಧಾರ:
    ಶರಣಾಗತಿ ಪ್ರಕ್ರಿಯೆಗೆ ಕೇಂದ್ರ ಗೃಹ ಇಲಾಖೆಯ ಒಪ್ಪಿಗೆ ಪಡೆಯಲಾಗುತ್ತದೆ, ಇದು ರಾಷ್ಟ್ರೀಯ ಭದ್ರತಾ ಸಲಹೆಗಾರರ ಮೂಲಕ ಕೇಂದ್ರ ಸಚಿವ ಸಂಪುಟಕ್ಕೆ ಕಳುಹಿಸಲಾಗುತ್ತದೆ. ಎಲ್ಲಾ ಹಂತಗಳಲ್ಲಿ ಅನುಮೋದನೆ ಪಡೆದ ನಂತರ, ಕೋರ್ಟ್ ತೀರ್ಮಾನದೊಂದಿಗೆ ಪ್ರಕರಣ ವಾಪಸ್ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

    ಈ ಎಲ್ಲಾ ಹಂತಗಳು ಶರಣಾಗತಿಯ ನಂತರ ಶರಣಾಗತ ವ್ಯಕ್ತಿ ಮತ್ತು ಸರ್ಕಾರ ನಡುವಿನ ಪ್ರಕ್ರಿಯೆಗಳನ್ನು ನಿರ್ವಹಿಸಲು ಸಹಾಯಕರವಾಗಿವೆ.

    share this
    spot_img
    spot_img
    spot_img
    spot_img
    spot_img
    spot_img
    spot_img
    spot_img
    spot_img
    spot_img
    spot_img
    spot_img
    spot_img
    spot_img
    spot_img
    spot_img

    Popular

    More like this
    Related

    ಹಿರ್ಗಾನ ಸಂತ ಮರಿಯ ಗೊರೆಟ್ಟಿ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ: ಸದೃಢ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಕರೆ

    ಬೈಲೂರು ವಲಯದ ಹಿರ್ಗಾನ ಕಾರ್ಯಕ್ಷೇತ್ರದ ಸಂತ ಮರಿಯ ಗೊರೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಗಳ ಜಂಟಿ ಆಶ್ರಯದಲ್ಲಿ "ಸ್ವಾಸ್ಥ್ಯ ಸಂಕಲ್ಪ" ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

    ಧಾರ್ಮಿಕ ಸೌಹಾರ್ದಕ್ಕೆ ಬೈಲೂರು ಮಾದರಿ: ಭಜನಾ ಪರಿಕರ ವಿತರಣಾ ಸಮಾರಂಭಕ್ಕೆ ಸಿದ್ಧತೆ

    ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಸಕ್ರಿಯವಾಗಿರುವ ಭಜನಾ ಮಂಡಳಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಭಜನಾ ಮಂಡಳಿಗಳ ಒಕ್ಕೂಟ ಹಾಗೂ ಕರಾವಳಿ ಭಜನಾ ಸಂಸ್ಕಾರ ವೇದಿಕೆ

    ಮೈಕ್ರೋಸಾಫ್ಟ್ ಶೇರ್‌ಪಾಯಿಂಟ್‌ಗೆ ಸೈಬರ್ ದಾಳಿ: ರಾಷ್ಟ್ರ-ಪ್ರಾಯೋಜಿತ ಹ್ಯಾಕರ್‌ಗಳಿಂದ ಸೂಕ್ಷ್ಮ ಡೇಟಾ ಸೋರಿಕೆ!

    ಮೈಕ್ರೋಸಾಫ್ಟ್‌ನ ಶೇರ್‌ಪಾಯಿಂಟ್ ಪ್ಲಾಟ್‌ಫಾರ್ಮ್ ಮೇಲೆ ಇತ್ತೀಚೆಗೆ ಪ್ರಮುಖ ಭದ್ರತಾ ಘಟನೆಯೊಂದು ಪರಿಣಾಮ ಬೀರಿದೆ.

    ಜು.28ರ ‘ಏಕ ವಿನ್ಯಾಸ’ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ ಯಶಸ್ವಿಗೊಳಿಸಲು ಕುತ್ಯಾರು ಕರೆ

    ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳುವ ಈ ಪ್ರತಿಭಟನೆಯನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸದ್ರಿ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಸೇರಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.