ಜನಸಾಮಾನ್ಯರಿಗೆ ಜಿಎಸ್‌ಟಿ ಬಂಪರ್: ಅಗತ್ಯ ವಸ್ತುಗಳು ಅಗ್ಗ, ಆರೋಗ್ಯ ಸೇವೆ ತೆರಿಗೆ ಮುಕ್ತ

Date:

spot_img

ನವದೆಹಲಿ: ಜನಸಾಮಾನ್ಯರಿಗೆ ದೊಡ್ಡ ಮಟ್ಟದ ಪರಿಹಾರ ನೀಡುವ ಉದ್ದೇಶದಿಂದ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ನಿರ್ಧರಿಸಲಾಗಿದೆ. ಈ ಹೊಸ ಜಿಎಸ್‌ಟಿ ನೀತಿಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದ್ದು, ದೇಶದ ತೆರಿಗೆ ವ್ಯವಸ್ಥೆಯಲ್ಲಿ ಒಂದು ದೊಡ್ಡ “ಸೆಪ್ಟೆಂಬರ್ ಕ್ರಾಂತಿ”ಯನ್ನು ಸೃಷ್ಟಿಸಲಿವೆ ಎಂದು ವಿತ್ತ ಸಚಿವರು ಘೋಷಿಸಿದರು.

ಈ ಸುಧಾರಣೆಗಳ ಪ್ರಮುಖಾಂಶಗಳು ಹೀಗಿವೆ:

  • ತೆರಿಗೆ ದರಗಳ ಸರಳೀಕರಣ: ಈ ಮೊದಲು ಜಿಎಸ್‌ಟಿಯಲ್ಲಿದ್ದ ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ದರ ಸ್ಲಾಬ್‌ಗಳನ್ನು ರದ್ದುಪಡಿಸಿ, ಕೇವಲ ಶೇ. 5 ಮತ್ತು ಶೇ. 18ರ ಎರಡು ಸ್ಲಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
  • ಬಹುತೇಕ ಅಗತ್ಯ ವಸ್ತುಗಳಿಗೆ ತೆರಿಗೆ ಇಲ್ಲ: ಜೀವನ ರಕ್ಷಕ ಔಷಧಗಳು, ಕ್ಯಾನ್ಸರ್ ಮತ್ತು ಅಪರೂಪದ ರೋಗಗಳ ಔಷಧಿಗಳು, ವೈಯಕ್ತಿಕ ಜೀವ ವಿಮೆ, ಆರೋಗ್ಯ ವಿಮೆ, ನಕ್ಷೆಗಳು, ಚಾರ್ಟ್‌ಗಳು, ಗ್ಲೋಬ್, ಪೆನ್ಸಿಲ್, ನೋಟ್‌ಬುಕ್, ಹಾಗೂ ಸಂಸ್ಕರಿಸಿದ ಹಾಲು ಮತ್ತು ಪನೀರ್ ಸೇರಿದಂತೆ ಹಲವು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಸಲಾಗಿದೆ.
  • ದೈನಂದಿನ ವಸ್ತುಗಳ ಮೇಲೆ ಶೇ. 5 ಜಿಎಸ್‌ಟಿ: ಜನಸಾಮಾನ್ಯರು ಪ್ರತಿನಿತ್ಯ ಬಳಸುವ ಹೇರ್ ಆಯಿಲ್, ಶಾಂಪೂ, ಟೂತ್‌ಪೇಸ್ಟ್, ಸೋಪ್, ಬೆಣ್ಣೆ, ತುಪ್ಪ, ಚೀಸ್, ಕುರುಕಲು ತಿಂಡಿಗಳು, ಶಿಶುಗಳ ನ್ಯಾಪಿನ್‌ಗಳು, ಹೊಲಿಗೆಯಂತ್ರ, ಕನ್ನಡಕಗಳು ಮತ್ತು ಕೃಷಿ ಉಪಕರಣಗಳಂತಹ ಬಹುತೇಕ ವಸ್ತುಗಳ ಮೇಲೆ ಕೇವಲ ಶೇ. 5 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.
  • ಹಾನಿಕಾರಕ ಉತ್ಪನ್ನಗಳ ಮೇಲೆ ಭಾರೀ ತೆರಿಗೆ: ಜನರ ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಲಾದ ಪಾನ್ ಮಸಾಲ, ಸಿಗರೇಟ್, ಗುಟ್ಕಾ, ಬೀಡಿ, ಮತ್ತು ಇಂಗಾಲಯುಕ್ತ ಪಾನೀಯಗಳ ಮೇಲೆ ಶೇ. 40ರಷ್ಟು ಗರಿಷ್ಠ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಇದಲ್ಲದೆ, ವೈಯಕ್ತಿಕ ಬಳಕೆಯ ವಿಮಾನ, ವಿಹಾರ ನೌಕೆಗಳು, ರಿವಾಲ್ವರ್, ಪಿಸ್ತೂಲ್‌ಗಳ ಮೇಲೂ ಇದೇ ದರ ಅನ್ವಯವಾಗುತ್ತದೆ.
  • ದೇಶೀಯ ಆರ್ಥಿಕತೆಗೆ ಉತ್ತೇಜನ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ, ಈ ಸುಧಾರಣೆಗಳು ದೇಶೀಯ ಖರೀದಿಯನ್ನು ಹೆಚ್ಚಿಸಿ, ಆರ್ಥಿಕತೆಗೆ ಉತ್ತೇಜನ ನೀಡುತ್ತವೆ. ದೈನಂದಿನ ಬಳಕೆ ವಸ್ತುಗಳ ಮೇಲಿನ ತೆರಿಗೆ ಇಳಿಕೆಯು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿ ಆರ್ಥಿಕ ಚಟುವಟಿಕೆಗೆ ಗತಿ ನೀಡಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದಂತೆ, ದೀಪಾವಳಿಗೆ ಈ ಬಂಪರ್ ಕೊಡುಗೆ ನೀಡಲಾಗುವುದು ಎಂದು ಹೇಳಿದ್ದರು, ಆದರೆ ಈ ಸುಧಾರಣೆಗಳು ನವರಾತ್ರಿಯಿಂದಲೇ ಜಾರಿಗೆ ಬರಲಿವೆ. ಸುಮಾರು ಹತ್ತೂವರೆ ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯ ನಂತರ, ಈ ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಮವನ್ನು ಶ್ಲಾಘಿಸಿದ್ದು, ಇದು ಜನರು, ರೈತರು, ಸಣ್ಣ ಉದ್ಯಮಿಗಳು, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನ ತರಲಿದೆ ಎಂದಿದ್ದಾರೆ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿತ್ತ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊಸ ಜಿಎಸ್‌ಟಿ ಸ್ಲಾಬ್‌ಗಳ ವಿವರ:

  • ಶೂನ್ಯ ಜಿಎಸ್‌ಟಿ: 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು, ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮೆ, ನಕ್ಷೆ, ಪೆನ್ಸಿಲ್, ನೋಟ್‌ಬುಕ್, ಸಂಸ್ಕರಿಸಿದ ಹಾಲು, ಪನೀರ್, ಪ್ಯಾಕೇಜ್ ಮಾಡಿದ ಪಿಜ್ಜಾ ಬ್ರೆಡ್.
  • ಶೇ. 5 ಜಿಎಸ್‌ಟಿ: ಹೇರ್ ಆಯಿಲ್, ಶಾಂಪೂ, ಟೂತ್‌ಪೇಸ್ಟ್, ಟೂತ್‌ಬ್ರಷ್, ಸೋಪ್, ಬೆಣ್ಣೆ, ತುಪ್ಪ, ಕುರುಕಲು ತಿಂಡಿಗಳು, ಶಿಶುಗಳ ನ್ಯಾಪಿನ್‌ಗಳು, ಹೊಲಿಗೆ ಯಂತ್ರ, ಥರ್ಮೋಮೀಟರ್, ಕನ್ನಡಕಗಳು, ಟ್ರ್ಯಾಕ್ಟರ್, ಜೈವಿಕ ಗೊಬ್ಬರ, ನೀರಾವರಿ ವ್ಯವಸ್ಥೆಗಳು.
  • ಶೇ. 18 ಜಿಎಸ್‌ಟಿ: ಸಣ್ಣ ಕಾರುಗಳು (ಪೆಟ್ರೋಲ್, ಡೀಸೆಲ್ ಹೈಬ್ರಿಡ್), ತ್ರಿಚಕ್ರ ವಾಹನಗಳು, 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಮೋಟರ್‌ಸೈಕಲ್‌ಗಳು, ಎಸಿ, ದೊಡ್ಡ ಟಿವಿಗಳು, ಮಾನಿಟರ್‌ಗಳು, ಪ್ರಾಜೆಕ್ಟರ್‌ಗಳು, ಪಾತ್ರೆ ತೊಳೆಯುವ ಯಂತ್ರ.
  • ಶೇ. 40 ಜಿಎಸ್‌ಟಿ: ಪಾನ್ ಮಸಾಲ, ಸಿಗರೇಟ್, ಗುಟ್ಕಾ, ಬೀಡಿ, ಇಂಗಾಲಯುಕ್ತ ಪಾನೀಯಗಳು, ದೊಡ್ಡ ಮೋಟರ್‌ಸೈಕಲ್‌ಗಳು, ವಿಮಾನ, ವಿಹಾರ ನೌಕೆ, ರಿವಾಲ್ವರ್ ಮತ್ತು ಪಿಸ್ತೂಲ್‌ಗಳು.
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.