spot_img

ದೇವಸ್ಥಾನದಲ್ಲಿ ಕದಿಯಲು ಬಂದು ನಿದ್ರೆಗೆ ಜಾರಿದ ಕಳ್ಳ

Date:

spot_img

ಜಾರ್ಖಂಡ್‌ : ಜಾರ್ಖಂಡ್‌ನ ಕಾಳಿ ದೇವಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕಳ್ಳತನ ಮಾಡಲೆಂದು ದೇವಸ್ಥಾನದೊಳಗೆ ನುಗ್ಗಿದ್ದ ಕಳ್ಳನೊಬ್ಬ, ಕದ್ದ ವಸ್ತುಗಳ ಸಮೇತ ಅಲ್ಲೇ ಗಾಢ ನಿದ್ದೆಗೆ ಜಾರಿದ್ದಾನೆ.

ಕಳ್ಳ ವೀರ್ ನಾಯಕ್ ಸೋಮವಾರ ರಾತ್ರಿ ಮದ್ಯ ಸೇವಿಸಿ ನಂತರ ಕೃತ್ಯಕ್ಕೆ ಮುಂದಾಗಿದ್ದ. ಕಾಳಿ ದೇವಸ್ಥಾನದ ಮುಂಭಾಗದ ಗೋಡೆ ಹಾರಿ, ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ. ದೇವಾಲಯದ ಒಳಗಿದ್ದ ಕಾಳಿ ಮಾತೆಯ ವಿಗ್ರಹದ ಮೇಲಿನ ಆಭರಣಗಳು, ಪೂಜಾ ತಾಳಿ, ಲೋಟ, ಗಂಟೆ ಮತ್ತು ಅಲಂಕಾರಿಕ ಸಾಮಗ್ರಿಗಳನ್ನು ಚೀಲದಲ್ಲಿ ತುಂಬಿಸಿಕೊಂಡಿದ್ದಾನೆ. ಆದರೆ, ಕದ್ದ ಮಾಲುಗಳೊಂದಿಗೆ ಓಡಿಹೋಗಲು ಸಿದ್ಧತೆ ನಡೆಸುತ್ತಿದ್ದಾಗಲೇ ನಿದ್ದೆ ಆವರಿಸಿದ್ದು, ಅಲ್ಲೇ ಮಲಗಿ ನಿದ್ರೆಗೆ ಜಾರಿದ್ದಾನೆ.

ಮಂಗಳವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಭಕ್ತರು ಬಾಗಿಲು ಮುರಿದಿರುವುದನ್ನು ಗಮನಿಸಿ, ಒಳಗಡೆ ವ್ಯಕ್ತಿಯೊಬ್ಬ ಮಲಗಿರುವುದನ್ನು ಕಂಡಿದ್ದಾರೆ. ದೇವಸ್ಥಾನದ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಮಡಾ ಪೊಲೀಸರು, ಗಾಢ ನಿದ್ದೆಯಲ್ಲಿದ್ದ ಕಳ್ಳ ವೀರ್ ನಾಯಕ್‌ನನ್ನು ಎಬ್ಬಿಸಿ, ಕದ್ದ ಮಾಲುಗಳ ಸಮೇತ ವಶಕ್ಕೆ ಪಡೆದಿದ್ದಾರೆ.

ಬರಜಮ್ಡಾ ಒಪಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜೈಲಿಗೆ ಕಳುಹಿಸಲಾಗಿದೆ. ಕಳ್ಳತನಕ್ಕೆ ಬಂದ ಕಳ್ಳ ನಿದ್ರೆಗೆ ಜಾರಿ ಸಿಕ್ಕಿಬಿದ್ದ ಈ ಘಟನೆ ಸ್ಥಳೀಯವಾಗಿ ಸಖತ್ ವೈರಲ್ ಆಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ: ಭಾರಿ ಮಳೆ ಹಿನ್ನೆಲೆ, ಜುಲೈ 17ರಂದು ಶಾಲಾ-ಅಂಗನವಾಡಿಗಳಿಗೆ ರಜೆ ಘೋಷಣೆ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಜನಜೀವನಕ್ಕೆ ಅಡ್ಡಿಯಾಗುತ್ತಿದ್ದು, ಮುಂಗಾರು ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

NVIDIAಗೆ ಬ್ರಾಡ್‌ಕಾಮ್ ಸವಾಲು: ಹೊಸ ಟೊಮಾಹಾಕ್ ಅಲ್ಟ್ರಾ ನೆಟ್‌ವರ್ಕಿಂಗ್ ಚಿಪ್ ಬಿಡುಗಡೆ

ಬ್ರಾಡ್‌ಕಾಮ್ಸ್ (AVGO.O), ಮಂಗಳವಾರ ಹೊಸ ಟ್ಯಾಬ್ ಚಿಪ್ ಘಟಕವನ್ನು ಅನಾವರಣಗೊಳಿಸಿದೆ, ಇದು ಕೃತಕ ಬುದ್ಧಿಮತ್ತೆ ಡೇಟಾ ಕ್ರಂಚಿಂಗ್ ಅನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಹೊಸ ನೆಟ್‌ವರ್ಕಿಂಗ್ ಪ್ರೊಸೆಸರ್ ಆಗಿದೆ

ಕಿವಿ ಹಣ್ಣು: ಆರೋಗ್ಯದ ಅಮೃತ, ತಪ್ಪದೇ ಸೇವಿಸಿ!!

ಕಿವಿ ಹಣ್ಣು, ಚೀನಾದ ಮಣ್ಣಿನಿಂದ ಹುಟ್ಟಿ, ನ್ಯೂಜಿಲೆಂಡ್‌ನಲ್ಲಿ ಜಾಗತಿಕವಾಗಿ ಬೆಳೆದು ನಿಂತಿರುವ ಒಂದು ಪುಟ್ಟ ಪೌಷ್ಟಿಕ ನಿಧಿ

ನೀರೆ ಗ್ರಾಮದಲ್ಲಿ ಪೊಲೀಸ್ ಜಾಗೃತಿ ಸಭೆ: ಸೈಬರ್ ಕ್ರೈಂ, 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದ ಉಮೇಶ್ ನಾಯಕ್

ಕಾರ್ಕಳ ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕರಾದ (ಹೆಡ್ ಕಾನ್‌ಸ್ಟೇಬಲ್) ಉಮೇಶ್ ನಾಯಕ್ ಅವರು ನೀರೆ ಗ್ರಾಮದ ಬೀಟ್ ಪೊಲೀಸ್ ಆಗಿ, ಹಗಲು ಗ್ರಾಮ ಗಸ್ತು ಸಮಯದಲ್ಲಿ ಮಹತ್ವದ ಕಾರ್ಯಕ್ರಮವೊಂದನ್ನು ನಡೆಸಿದರು.