spot_img

ಇತಿಹಾಸದ ಕ್ಷಣ: 1971ರ ಬಳಿಕ ಮತ್ತೆ ಕರಾಚಿ ಬಂದರಿಗೆ ನೇರ ದಾಳಿ ನಡೆಸಿದ ಭಾರತೀಯ ನೌಕಾಪಡೆ!

Date:

ನವದೆಹಲಿ: ಪಾಕಿಸ್ತಾನ ವಿರುದ್ಧ ಕಠಿಣ ಎಚ್ಚರಿಕೆಯ ಸಂದೇಶ ನೀಡುವಂತೆ, ಭಾರತೀಯ ನೌಕಾಪಡೆಯು ಇತಿಹಾಸದ ಪುಟವನ್ನು ಮತ್ತೆ ತಿರುಗಿಸಿರುವ ಮಹತ್ವದ ದಾಳಿ ನಡೆಸಿದೆ. INS ವಿಕ್ರಾಂತ್ ನಿಂದ ಉಡಾಯಿಸಲಾದ MIG-29 ಯುದ್ಧ ವಿಮಾನಗಳು ಪಾಕಿಸ್ಥಾನದ ಪ್ರಮುಖ ನೌಕಾ ನೆಲೆಯಾದ ಕರಾಚಿ ಬಂದರಿಗೆ ನೇರ ದಾಳಿ ನಡೆಸಿದ್ದು, ಈ ದಾಳಿ ಅರೇಬಿಯನ್ ಸಮುದ್ರದ ಮಾರ್ಗದಿಂದ ನಡೆದಿರುವುದು ಗಮನಾರ್ಹ.

1971ರ ಯುದ್ಧದ ನಂತರ ಇದೇ ಮೊದಲ ಬಾರಿಗೆ ಕರಾಚಿ ಬಂದರಿಗೇ ನೇರ ದಾಳಿ ನಡೆಸಿರುವ ಭಾರತದ ನೌಕಾಪಡೆಯು, ಪಾಕಿಸ್ತಾನದ ನೌಕಾ ಸಾಮರ್ಥ್ಯವನ್ನು ಪತ್ತೆ ಮಾಡದೇ ನಾಶಮಾಡಲು ಯಶಸ್ವಿಯಾಗಿದೆ. ಈ ದಾಳಿ ಪಾಕಿಸ್ತಾನಕ್ಕೆ ತೀವ್ರ ಆರ್ಥಿಕ ಮತ್ತು ರಕ್ಷಣಾತ್ಮಕ ನಷ್ಟ ಉಂಟುಮಾಡಿದಂತಾಗಿದೆ.

ಪಾಕ್ ವಾಯುಪಡೆಯ ಪ್ರತಿದಾಳಿ ಪ್ರಯತ್ನ ವಿಫಲ: ಎಸ್-400 ಯಂತ್ರದಿಂದ ತಡೆ

ಇದೇ ವೇಳೆ ಪಾಕಿಸ್ತಾನವು ಭಾರತದ ಜಮ್ಮು ಪ್ರದೇಶದ ಸೇನಾ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಲು ಯತ್ನಿಸಿದೆ. ಆದರೆ ಭಾರತೀಯ ವಾಯುಪಡೆಯು ತಕ್ಷಣ ಎಚ್ಚರಿಕೆ ತಾಳಿದ್ದು, ಎಸ್-400 ಸ್ವಯಂಚಾಲಿತ ಕ್ಷಿಪಣಿ ನಿರೋಧಕ ವ್ಯವಸ್ಥೆ ಬಳಸಿಕೊಂಡು ಎಲ್ಲಾ ಶತ್ರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆಯಲು ಯಶಸ್ವಿಯಾಗಿದೆ.

ಲಾಹೋರ್‌ನ ವಾಯು ರಕ್ಷಣಾ ವ್ಯವಸ್ಥೆಯ ಮೇಲೆ ಹಾರೋಪ್ ಡ್ರೋನ್ ದಾಳಿ

ಭಾರತ ತನ್ನ ಪ್ರತಿದಾಳಿ ಮುಂದುವರೆಸಿದ್ದು, ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯ ಮೇಲೆ ಇಸ್ರೇಲ್ ಮೂಲದ ಹಾರೋಪ್ ಡ್ರೋನ್‌ಗಳಿಂದ ತೀವ್ರ ದಾಳಿ ನಡೆಸಿದೆ. ಕೆಲವೇ ನಿಮಿಷಗಳಲ್ಲಿ ಗುರಿಗೆ ತಲುಪಿದ ಡ್ರೋನ್‌ಗಳು ವಾಯು ರಕ್ಷಣಾ ಕೇಂದ್ರಗಳನ್ನು ಸಂಪೂರ್ಣ ನಾಶಪಡಿಸಿದೆ. ಲಾಹೋರ್, ಚಕ್ವಾಲ್, ಅಟ್ಟಾಕ್, ಬಹವಲ್‌ಪುರ್ ಸೇರಿದಂತೆ 16ಕ್ಕೂ ಹೆಚ್ಚು ಪಾಕಿಸ್ತಾನಿ ನಗರಗಳಲ್ಲಿ ಡ್ರೋನ್ ದಾಳಿಯ ನಂತರ ಭಾರೀ ಸ್ಫೋಟಗಳು ಸಂಭವಿಸಿದ್ದು, ಜನರಲ್ಲಿ ಭೀತಿ ಮನೆ ಮಾಡಿದೆ.

ಪಾಕ್ ಯುದ್ಧವಿಮಾನ ಪೈಲಟ್‌ಗಳು ಭಾರತೀಯ ವಶದಲ್ಲಿದ್ದಾರೆಯೇ ?

ಭಾರತೀಯ ಸೇನೆಯು ಪಾಕಿಸ್ತಾನದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವ ಮಾಹಿತಿ ಲಭ್ಯವಾಗಿದ್ದು, ಅದರ ಪೈಲಟ್‌ಗಳು ಭಾರತೀಯ ಸೇನೆಯ ವಶಕ್ಕೆ ಸಿಕ್ಕಿರುವ ಸಾಧ್ಯತೆಗಳಿವೆ. ಈ ಪೈಲಟ್‌ಗಳನ್ನು ರಾಜಸ್ಥಾನದ ಜೈಸಲ್ಮೇರ್ ಹಾಗೂ ಜಮ್ಮುವಿನ ಅಖೂರಿನಲ್ಲಿ ವಶಪಡಿಸಿಕೊಂಡಿರುವುದಾಗಿ ಮೂಲಗಳು ಹೇಳಿವೆ. ಆದರೂ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಾಕಿಯಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆರೋಗ್ಯದಿಂದ ನಿದ್ರೆವರೆಗೆ: ಗಸಗಸೆ ಬೀಜಗಳ ಅಪರೂಪದ ಗುಣಗಳು!

ಭಾರತೀಯ ಮನೆಮದ್ದುಗಳಲ್ಲಿ ಪ್ರಮುಖವಾಗಿ ಬಳಸುವ ಗಸಗಸೆ ಬೀಜಗಳು ಈಗ ಪುನಃ ಗಮನ ಸೆಳೆಯುತ್ತಿವೆ. ಬಲವಾದ ಆರೋಗ್ಯ, ಉತ್ತಮ ನಿದ್ರೆ, ಜೀರ್ಣಕ್ರಿಯೆ ಸುಧಾರಣೆ, ನೋವಿನ ನಿವಾರಣೆ ಇತ್ಯಾದಿಗಳಲ್ಲಿ ಈ ಪುಟ್ಟ ಬೀಜಗಳ ಮಹತ್ವ ಅಪಾರವಾಗಿದೆ.

ಪಹಲ್ಗಾಮ್ ಉಗ್ರ ದಾಳಿ ನಂತರ ರಾಜ್ಯದಲ್ಲಿ ಭದ್ರತಾ ತೀವ್ರತೆ: ಗುಪ್ತಚರ ಇಲಾಖೆ ಎಚ್ಚರಿಕೆ ಸೂಚನೆ

ಯುದ್ಧದ ಭೀತಿ ಹೆಚ್ಚಿದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಗುಪ್ತಚರ ಇಲಾಖೆ ರಾಜ್ಯಾದ್ಯಂತ ಭದ್ರತೆಯ ಮಟ್ಟ ಹೆಚ್ಚಿಸಲು ತುರ್ತು ಸೂಚನೆ ನೀಡಿದೆ.

ಇಂಧನ ಕೊರತೆ ಇಲ್ಲ , ಜನರಲ್ಲಿ ಭೀತಿ ಬೇಡ ! ಎಂದು ಸ್ಪಷ್ಟನೆ ನೀಡಿದ ಇಂಡಿಯನ್ ಆಯಿಲ್

ಗಡಿ ರಾಜ್ಯಗಳಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಸಾಲು ಕಟ್ಟಿರುವ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ, ಇಂಡಿಯನ್ ಆಯಿಲ್ ಕಾರ್ಪೊರೇಶನ್ “ಇಂಧನ ಬೇಕಾದಷ್ಟಿದೆ , ಆತಂಕ ಬೇಡ!” ಎಂದು ಸ್ಪಷ್ಟನೆ ನೀಡಿದೆ.

ಅಮೆರಿಕದ ರಾಬರ್ಟ್ ಪ್ರೆವೋಸ್ಟ್ 267ನೇ ಪೋಪ್‌ ಆಗಿ ಆಯ್ಕೆ

ಕ್ಯಾಥೋಲಿಕ್ ಚರ್ಚ್ ಇತಿಹಾಸದಲ್ಲಿ ಮಹತ್ವದ ಅಧ್ಯಾಯ ಬೆಳಗಿದ್ದು, ಅಮೆರಿಕದ ಚಿಕಾಗೋ ಮೂಲದ 69 ವರ್ಷದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಅವರನ್ನು 267ನೇ ಪೋಪ್‌ ಆಗಿ ಆಯ್ಕೆ ಮಾಡಲಾಗಿದೆ.