spot_img

ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಗೆ ಕೋಟ್ಯಾಂತರ ರೂ ಅನುದಾನ ಬಿಡುಗಡೆ ; ಉತ್ತಮ ಗುಣಮಟ್ಟದ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ : ಶುಭದರಾವ್

Date:

spot_img
spot_img
shubad-rao11

ಕಾರ್ಕಳ : ರಾಜ್ಯದ ಅಭಿವೃದ್ಧಿ ಚಿಂತನೆಯೊಂದಿಗೆ ಪಕ್ಷ ಬೇದವಿಲ್ಲದೆ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಕೋಟ್ಯಾಂತರ ರೂ ಅನುದಾನ ಬಿಡುಗಡೆ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಬಿಡುಗಡೆಗೊಂಡ ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ ಎನ್ನುವುದು ಕಾಂಗ್ರೆಸ್ ಬಯಸುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ತಿಳಿಸಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಯ ಬದುಕಿಗೆ ಅಮೂಲ್ಯ ಕೊಡುಗೆಗನ್ನು ನೀಡುತ್ತಾ ಬಂದಿರುವ ರಾಜ್ಯ ಸರಕಾರವು ಇತರ ಅಭಿವೃದ್ಧಿ ಕೆಲಸಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆಯನ್ನು ನೀಡುವ ಮೂಲಕ ಅಭಿವೃದ್ಧಿ ಶೂನ್ಯ ಸರಕಾರ ಎಂದು ಅಪಪ್ರಚಾರ ಮಾಡುತ್ತಿದ್ದ ಬಿಜೆಪಿ ಶಾಸಕರಿಗೆ ತಕ್ಕ ಉತ್ತರ ನೀಡಿದಂತಾಗಿದೆ ಎಂದರು.

ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಜನರು ನೇರವಾಗಿ ಸವಲತ್ತುಗಳನ್ನು ಪಡೆಯುವುದರಿಂದ 40 ಶೇಕಡಾ ಕಮಿಷನ್ ಆರೋಪದ ಹೊತ್ತಿರುವ ಬಿಜೆಪಿ ಶಾಸಕರಿಗೆ ಬೇರೆ ದಾರಿ ಇಲ್ಲದೆ ಸರಕಾರವನ್ನು ದೂರುವುದೇ ಕೆಲಸವಾಗಿದೆ. ಒಂದು ಕಡೆ ಸರಕಾರ ಅನುದಾನ ಬಿಡುಗಡೆ ಮಾಡವುದಿಲ್ಲ ಎಂದು ಆರೋಪಿಸುವ ಶಾಸಕರು ಕ್ಷೇತ್ರದಲ್ಲಿ ನಿರಂತರ ಉದ್ಘಾಟನಾ ಕಾರ್ಯಕ್ರಮಗಳನ್ನು ನಡೆಸಿ ಇದು ನನ್ನ ವಿಶೇಷ ಪ್ರಯತ್ನ ಎಂದು ಬಿಂಬಿಸುವುದು ಹಾಸ್ಯಾಸ್ಪದವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅನುದಾನ ಎಷ್ಟು ಬಿಡುಗಡೆಯಾಗಿದೆ ಎನ್ನುವುದು ಮುಖ್ಯವಲ್ಲ ಅದನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಲಾಗಿದೆ ? ಎನ್ನುವುದೇ ಮುಖ್ಯ. ನಗರದ ರಥಬೀದಿಯ ಒಳಚರಂಡಿ ಕಾಮಗಾರಿ, ಪರಶುರಾಮ ಥೀಮ್ ಪಾರ್ಕ್, ನೀರಾವರಿ ಯೋಜನೆ, ಹೀಗೆ ಅನೇಕ ಕಾಮಗಾರಿಗಳು ಕಮಿಷನ್ ಆಸೆಗೆ ಬಲಿಯಾಗಿ ಕಳಪೆ ಕಾಮಗಾರಿ ಎಂದು ಸಾಬೀತಾಗಿದೆ ಆದರೆ ಮುಂದೆ ನಡೆಯುವ ಕಾಮಗಾರಿಗಳೂ ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಎಚ್ಚರವಹಿಸುವಂತೆ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ನಿಧನಕ್ಕೆ ದಿನಕರ ಶೆಟ್ಟಿ ಪಳ್ಳಿ ಸಂತಾಪ

ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (48) ಅವರ ಆತ್ಮಹತ್ಯೆಯ ದುರಂತ ಸಾವಿನ ವಿಷಯ ತಿಳಿದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ದಿನಕರ ಶೆಟ್ಟಿ, ಪಳ್ಳಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ ವಿಷಯಕ್ಕೆ ಜಗಳ: ಮಗಳ ಎದುರೇ ಹೆಂಡತಿಯನ್ನು ಗುಂಡಿಟ್ಟು ಕೊಂದ ಪತಿ

ಪಾಸ್‌ಪೋರ್ಟ್ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೋರ್ವ ತನ್ನ ಮಗಳ ಎದುರೇ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಂಗಳವಾರ (ಅ. 14) ಬೆಳಗ್ಗೆ ನಡೆದಿದೆ.

ಜಿಟೆಕ್ಸ್ ಗ್ಲೋಬಲ್ 2025: ವೀಸಾ ಉಲ್ಲಂಘನೆ ಪತ್ತೆಗೆ ಎ.ಐ. ಶಸ್ತ್ರ ಸಜ್ಜಿತ ಸ್ಮಾರ್ಟ್ ಕಾರುಗಳು – ದುಬೈಯಿಂದ ತಂತ್ರಜ್ಞಾನದ ಹೊಸ ದಾಪುಗಾಲು

ದುಬೈನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಜಿಟೆಕ್ಸ್ ಗ್ಲೋಬಲ್ 2025 ಮತ್ತೊಮ್ಮೆ ವಿಶ್ವದ ಗಮನವನ್ನು ಸೆಳೆದಿದೆ

ಭಾರತದಲ್ಲಿ AI ಹಬ್‌: $15 ಬಿಲಿಯನ್ ಹೂಡಿಕೆಗೆ ಮುಂದಾದ ಗೂಗಲ್; ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಸುಂದರ್ ಪಿಚೈ

ಟೆಕ್ ದೈತ್ಯ ಗೂಗಲ್‌ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅವರು ಮಂಗಳವಾರ (ಅ. 14) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕುರಿತು ಮಹತ್ವದ ಮಾತುಕತೆ ನಡೆಸಿದರು.