ಮೆಸ್ಕಾಂ ನಷ್ಟಕ್ಕೆ ಗ್ರಾಹಕರೇ ಬಲಿ? ಮುಂದಿನ ವರ್ಷದಿಂದ ಕರೆಂಟ್ ಬಿಲ್‌ನಲ್ಲಿ ಭಾರೀ ಏರಿಕೆ ಆತಂಕ!

Date:

spot_img

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದ ವಿದ್ಯುತ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಮುಂದಿನ ಮೂರು ವರ್ಷಗಳ ಅವಧಿಗೆ ವಿದ್ಯುತ್ ದರ ಪರಿಷ್ಕರಣೆಗೆ ಅನುಮೋದನೆ ದೊರೆತಿದ್ದರೂ, ಮೆಸ್ಕಾಂ (MESCOM) ಅನುಭವಿಸಿರುವ ನಷ್ಟದ ಮೊತ್ತವನ್ನು ಸರಿದೂಗಿಸಲು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ದಟ್ಟವಾಗಿದೆ. 2026-27ರ ಆರ್ಥಿಕ ವರ್ಷದಲ್ಲಿ ಪ್ರತಿ ಯೂನಿಟ್ ಮೇಲೆ ಸರಾಸರಿ 5 ಪೈಸೆ ಏರಿಕೆಯಾಗುವುದು ಖಚಿತವಾಗಿದ್ದು, ಇದರ ಜೊತೆಗೆ ಸಂಸ್ಥೆಯ 83.11 ಕೋಟಿ ರೂಪಾಯಿಗಳ ನಷ್ಟದ ಲೆಕ್ಕಾಚಾರವೂ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲಿದೆ.

ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು (KERC) ಈ ಹಿಂದೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮೂರು ವರ್ಷಗಳ ಅವಧಿಯ ದರ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಿತ್ತು. ಅದರಂತೆ ಮೆಸ್ಕಾಂ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಆಯೋಗವು, 2025-26ರಲ್ಲಿ ದರ ಏರಿಕೆ ಮಾಡದೆ ಯೂನಿಟ್ ಬೆಲೆಯನ್ನು 8.61 ರೂಪಾಯಿಯಲ್ಲೇ ಉಳಿಸಿಕೊಂಡಿತ್ತು. ಆದರೆ, ಮುಂದಿನ ವರ್ಷ ಅಂದರೆ 2026 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ದರವನ್ನು 8.66 ರೂಪಾಯಿಗೆ ಹಾಗೂ 2027-28ರಲ್ಲಿ 8.72 ರೂಪಾಯಿಗೆ ಹೆಚ್ಚಿಸಲು ಹಸಿರು ನಿಶಾನೆ ತೋರಿದೆ.

ಇಷ್ಟಾದರೂ ಮೆಸ್ಕಾಂನ ಆರ್ಥಿಕ ಸಂಕಷ್ಟ ಮಾತ್ರ ಮುಗಿದಿಲ್ಲ. ವಿದ್ಯುತ್ ಖರೀದಿ ದರದಲ್ಲಿನ ಏರಿಕೆ, ವಿತರಣಾ ಜಾಲದ ನಿರ್ವಹಣೆ ಮತ್ತು ದುರಸ್ತಿ ವೆಚ್ಚಗಳು ಮಿತಿ ಮೀರಿರುವುದರಿಂದ ಕಂಪನಿಯು ಬೃಹತ್ ಮೊತ್ತದ ಕಂದಾಯ ಕೊರತೆಯನ್ನು ಎದುರಿಸುತ್ತಿದೆ. ಈ ನಷ್ಟವನ್ನು ತುಂಬಿಕೊಳ್ಳಲು ದರ ಏರಿಕೆಯೇ ಅಂತಿಮ ದಾರಿ ಎಂದು ಮೆಸ್ಕಾಂ ಅಧಿಕಾರಿಗಳು ಭಾವಿಸಿದ್ದಾರೆ. ಆದರೆ, ಕಂಪನಿಯ ಆಡಳಿತಾತ್ಮಕ ವೈಫಲ್ಯ ಅಥವಾ ಅನಗತ್ಯ ವೆಚ್ಚಗಳ ಹೊರೆಯನ್ನ ಗ್ರಾಹಕರು ಏಕೆ ಹೊರಬೇಕು ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಆಯೋಗವು ವಾರ್ಷಿಕ ಕಾರ್ಯನಿರ್ವಹಣೆ ವರದಿಯನ್ನು ಆಧರಿಸಿ ಅಂತಿಮ ತೀರ್ಪು ನೀಡಲಿದ್ದು, ಒಂದು ವೇಳೆ ಅನುಮೋದನೆ ಸಿಕ್ಕರೆ ಈಗಾಗಲೇ ನಿಗದಿಯಾಗಿರುವ 5 ಪೈಸೆಯ ಜೊತೆಗೆ ಮತ್ತಷ್ಟು ಮೊತ್ತ ಏರಿಕೆಯಾಗುವ ಆತಂಕ ಮನೆಮಾಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.