spot_img

ಬನ್ನಂಜೆ ರಸ್ತೆಯಲ್ಲಿ ಅಲೆಯುತ್ತಿದ್ದ ಮನೋರೋಗಿ ಮಹಿಳೆ ರಕ್ಷಣೆ : ನಿಟ್ಟೂರಿನ ಮಹಿಳಾ ನಿಲಯಕ್ಕೆ ದಾಖಲಾತಿ

Date:

ಉಡುಪಿ : ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಹತ್ತು ದಿನಗಳಿಂದ ಅಲೆಯುತ್ತಿದ್ದ, ಮಾನಸಿಕ ಅಸ್ವಸ್ಥತೆ ಹೊಂದಿದ ಅನುಮಾನಾಸ್ಪದ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಅವರು ಮಾನವೀಯತೆ ಮೆರೆದು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕಲ್ಪಿಸಿದ್ದರು. ಸಂಬಂಧಿಕರ ಪತ್ತೆಯಾಗದ ಕಾರಣ, ಇದೀಗ ಆ ಮಹಿಳೆಯನ್ನು ನಿಟ್ಟೂರಿನ ಮಹಿಳಾ ನಿಲಯದಲ್ಲಿ ಸೇರ್ಪಡೆ ಮಾಡಲಾಗಿದೆ.

ಸುಮಾರು 40 ವರ್ಷ ಪ್ರಾಯದ ಈ ಮಹಿಳೆ ಮರಾಠಿ ಭಾಷೆ ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿರುವ ಶಂಕೆಯಿದೆ. ಚಿಕಿತ್ಸೆ ನಂತರ ಮಾನಸಿಕ ಸ್ಥಿತಿ ಸುಧಾರಿಸಿ ಸಹಜವಾಗಿ ಮಾತನಾಡುತ್ತಿದ್ದ ಮಹಿಳೆಯನ್ನು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಹಿಳಾ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.

ವೈದ್ಯಕೀಯ ವೆಚ್ಚವನ್ನು ಕರುಣಾಕರ್ ಕೋಟ ಹಾಗೂ ಅಂಬಲಪಾಡಿಯ ಇತರ ಹಿತೈಷಿಗಳು ಭರಿಸಿದ್ದರೆಂದು ತಿಳಿದುಬಂದಿದೆ. ಸಂಬಂಧಿಕರು ಅಥವಾ ಯಾರಾದರೂ ಮಹಿಳೆಯನ್ನು ಗುರುತಿಸಿದಲ್ಲಿ, ಉಡುಪಿ ಮಹಿಳಾ ನಿಲಯ ಅಥವಾ ನಗರ ಠಾಣೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.

ಈ ಮಾನವೀಯ ಕಾರ್ಯದಲ್ಲಿ ಸಖಿ ಕೇಂದ್ರದ ಸಿಬ್ಬಂದಿ ಮತ್ತು ಉಡುಪಿ ನಗರ ಠಾಣೆ ಪೊಲೀಸರು ಕಾನೂನು ಪ್ರಕ್ರಿಯೆಯಲ್ಲಿ ಸಹಕಾರ ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಶಿಶು ಸಾವನ್ನಪ್ಪಿದ ದಾರುಣ ಘಟನೆ

ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಒಂದು ವರ್ಷದ ಹೆಣ್ಣು ಮಗು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ!”ನಾನು ಎಂದಿಗೂ ರೋಡ್ ಶೋಗಳ ಬೆಂಬಲಿಗನಲ್ಲ”:ಗೌತಮ್ ಗಂಭೀರ್

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿ ಬಿ ವಿಜಯೋತ್ಸವದಲ್ಲಿ ಅಪಾರ ಅಭಿಮಾನಿಗಳು ಭಾಗವಹಿಸಿದ ಪರಿಣಾಮ ಭೀಕರ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದ್ದು, 11 ಮಂದಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ದೇಶದಾದ್ಯಂತ ಆಘಾತ ಉಂಟುಮಾಡಿದ್ದು, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಕುರಿತು ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ದಿನ ವಿಶೇಷ – ವಿಶ್ವ ಕೀಟ ಸಚೇತನ ದಿನ

2017ರಲ್ಲಿ ಚೀನಾದ ಬೀಜಿಂಗ್ನಲ್ಲಿ ನಡೆದ ಸಮ್ಮೇಳನದಲ್ಲಿ ಈ ದಿನವನ್ನು ಪ್ರಾರಂಭಿಸಲಾಯಿತು.

ಈರುಳ್ಳಿ ರಸದಿಂದ ಆರೋಗ್ಯಕ್ಕೆ ಅಪಾರ ಲಾಭ: ವೈದ್ಯಕೀಯವಾಗಿ ಸಾಬೀತಾದ ಪ್ರಾಮುಖ್ಯತೆ

ಪ್ರತಿದಿನದ ಅಡುಗೆಗೆ ಅತ್ಯಗತ್ಯವಾದ ಈರುಳ್ಳಿಯು ಆರೋಗ್ಯದ ದೃಷ್ಟಿಯಿಂದ ಕೂಡಾ ಅಪಾರ ಮಹತ್ವ ಹೊಂದಿದೆ. ಇತ್ತೀಚೆಗೆ ನಡೆಸಿದ ಹಲವು ಅಧ್ಯಯನಗಳು ಹಾಗೂ ಆಯುರ್ವೇದ ತಜ್ಞರ ಅಭಿಪ್ರಾಯಗಳ ಪ್ರಕಾರ, ಈರುಳ್ಳಿಯಿಂದ ತಯಾರಿಸಿದ ರಸದ ಸೇವನೆಯು ದೇಹಕ್ಕೆ ಹಲವು ರೀತಿಯ ಲಾಭಗಳನ್ನು ನೀಡುತ್ತದೆ.