ಮಾರಿಷಸ್ ಡೇ: 1968ರ ಮಾರ್ಚ್ 12ರಂದು ಪ್ರತ್ಯೇಕ ರಾಷ್ಟ್ರವಾಗಿ ಗುರುತಿಸಿಕೊಂಡ ದ್ವೀಪದ ಸಂಭ್ರಮ

Date:

spot_img

ಮಾರಿಷಸ್ ಡೇ

1968 ಮಾರ್ಚ್ 12ರಂದು ಬ್ರಿಟನ್ನ ಅಧಿಕಾರದ ತೆಕ್ಕೆಯಿಂದ ಮಾರಿಷಸ್ ಪ್ರತ್ಯೇಕ ರಾಷ್ಟ್ರವಾಗಿ ನಿರ್ಮಾಣಗೊಂಡಿತು. ಅಲ್ಲಿಂದ ಈ ದಿವಸವನ್ನು ಮಾರಿಷಸ್ ದಿನ ಎಂದು ಆಚರಿಸುತ್ತಾರೆ. ಆದರೆ ಈ ರಾಷ್ಟ್ರ ಭಾರತದೊಂದಿಗೆ ಇವತ್ತಿಗೂ ಪ್ರತ್ಯೇಕತೆಯನ್ನು ಬಯಸುತ್ತಿಲ್ಲ. ರಾಮಾಯಣ ಕಾಲದಿಂದಲೂ ಭಾರತಕ್ಕೂ ಈ ರಾಷ್ಟ್ರಕ್ಕೂ ಅವಿನಾಭಾವ ಸಂಬಂಧವಿದೆ. ತಾಟಕಾ ವಧೆಯ ಸಂದರ್ಭದಲ್ಲಿ ರಾಮನ ಬಾಣದಿಂದ ದ್ವೀಪಾಂತರಕ್ಕೆ ಎಸೆಯಲ್ಪಟ್ಟ ಮಾರೀಚ ಹೋಗಿ ಬಿದ್ದ ಕಾರಣದಿಂದ ಇವತ್ತು ಮಾರಿಷಸ್ ಎಂದು ಕರೆಯಲ್ಪಡುತ್ತದೆ ಎಂದು ಇತಿಹಾಸಕಾರರ ಅಭಿಪ್ರಾಯವಿದೆ. ಇದರ ಸತ್ಯಾಸತ್ಯತೆಯ ಬಗ್ಗೆ ಸಂಶಯವಿದೆ. ಆದರೆ ಅಲ್ಲಿಯ ಮನೋರಂಜನೆಯ ಕ್ರೀಡೆಗಳಲ್ಲಿ ಜಿಂಕೆ ಬೇಟೆಯು ಒಂದು ಎನ್ನುವುದು ಸತ್ಯ. ಹಾಗೆಯೇ ಅಲ್ಲಿರುವ 68 ಪ್ರತಿಶತಕ್ಕಿಂತಲೂ ಹೆಚ್ಚಿನವರು ಭಾರತೀಯ ಮೂಲದವರು. ಇದಕ್ಕೆ ಇಂಡೋ ಮಾರಿಷಸ್ ಎಂದು ಕೂಡ ಕರೆಯುತ್ತಾರೆ.ಮಾರ್ಕ್ ಟ್ವೈನ್ ಎನ್ನುವ ಲೇಖಕ ಒಂದು ಕಡೆ, ದೇವರಲ್ಲಿ ಹೇಳುತ್ತಾನೆ.ನೀನು ಮಾರಿಷಸ್ಸನ್ನು ಮೊದಲು ಸೃಷ್ಟಿಸಿ ಆಮೇಲೆ ಇದನ್ನು ಕಂಡು ಸ್ವರ್ಗವನ್ನು ಸೃಷ್ಟಿಸಿರಬೇಕು ಎನ್ನುವಷ್ಟರ ಮಟ್ಟಿಗೆ ಈ ದೇಶವನ್ನು ಮುಕ್ತ ಕಂಠದಿಂದ ಹೊಗಳಿದ್ದಾನೆ. ಸೌಂದರ್ಯಕ್ಕೆ ಹಾಗೂ ಚಿಕ್ಕವಾಗಿ ಚೊಕ್ಕವಾಗಿ ಪ್ರಪಂಚದಲ್ಲಿ ಗುರುತಿಸಲ್ಪಟ್ಟಿರುವ ಕೆಲವೇ ದೇಶಗಳಲ್ಲಿ ಇದೂ ಒಂದು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಒಮಾನ್ ಸಮುದ್ರದಲ್ಲಿ ಭಾರತದ ಹಡಗು ಮುಳುಗಡೆ: 14 ನಾವಿಕರ ರಕ್ಷಣೆ

ಒಮಾನ್ ಸಮುದ್ರದಲ್ಲಿ ಭಾರತದ ಎಂಎಸ್‌ವಿ ವಿರಾಟ್-1 ಹಡಗು ಮುಳುಗಡೆಯಾಗಿದ್ದು, 14 ನಾವಿಕರನ್ನು ರೋಮಾಂಚಕವಾಗಿ ರಕ್ಷಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವನಮಹೋತ್ಸವ ಆಚರಣೆ

ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ಸಂಕ್ರಮಣದಂದು ಪರಿಸರ ಪೂಜೆ ಹಾಗೂ ಭಕ್ತರಿಗೆ ಹಣ್ಣಿನ ಗಿಡಗಳ ವಿತರಣೆ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಕ್ ಚಲಾಯಿಸುತ್ತಾ ಲ್ಯಾಪ್‌ಟಾಪ್ ಕೆಲಸ: ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಚಲಿಸುವ ಬೈಕ್ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಆಫೀಸ್ ಕೆಲಸ ಮಾಡಿದ ಯುವಕನ ಅಪಾಯಕಾರಿ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 100% ಎಥೆನಾಲ್ ಇಂಧನ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ದೇಶದಲ್ಲಿ ಇನ್ನು 100 ಪ್ರತಿಶತ ಎಥೆನಾಲ್ ಇಂಧನ ಬಳಕೆ ಅಧಿಕೃತ. ಕಚ್ಚಾ ತೈಲದ ಅವಲಂಬನೆ ಮುಕ್ತಾಯಕ್ಕೆ ಗಡ್ಕರಿ ಮಾಸ್ಟರ್ ಪ್ಲಾನ್. ಪೂರ್ಣ ಮಾಹಿತಿ ಇಲ್ಲಿದೆ ಓದಿ