spot_img

ನಾಳೆ ಶ್ರೀ ಕೃಷ್ಣ ಮಠದಲ್ಲಿ ಸಾಮೂಹಿಕ ‘ಶ್ರೀ ಕೃಷ್ಣ ಮಂತ್ರ ಜಪ’

Date:

spot_img

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಅಂಗವಾಗಿ, ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಾಳೆ (ಆಗಸ್ಟ್ 15) ಸಾಮೂಹಿಕ ಶ್ರೀ ಕೃಷ್ಣ ಮಂತ್ರ ಜಪ ಪಠಣ ನಡೆಯಲಿದೆ. ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಶ್ರೀ ಗೋವಿಂದ ಗಿರಿ ಮಹಾರಾಜರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 11.15 ರಿಂದ 12.15 ರವರೆಗೆ 1008 ಬಾರಿ ‘ಸ್ವಾಮಿ ಶ್ರೀ ಕೃಷ್ಣಾಯ ನಮಃ’ ಮಂತ್ರವನ್ನು ಸಾಮೂಹಿಕವಾಗಿ ಜಪಿಸಲಾಗುವುದು. ನಂತರ ಭೋಜನ ಪ್ರಸಾದ ವಿತರಣೆ ಇರಲಿದೆ. ಶ್ರೀ ಕೃಷ್ಣ ಭಕ್ತರು ತಮ್ಮ ಕುಟುಂಬ ಸಮೇತರಾಗಿ ಸಾಂಪ್ರದಾಯಿಕ ಉಡುಪುಗಳಲ್ಲಿ ಭಾಗವಹಿಸುವಂತೆ ಪುತ್ತಿಗೆ ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ. ಪುರುಷರು ಬಿಳಿ ಪಂಚೆ ಮತ್ತು ಅಂಗಿ, ಮಹಿಳೆಯರು ಕೇಸರಿ ಅಥವಾ ಹಸಿರು ಬಣ್ಣದ ಸೀರೆ ಅಥವಾ ಚೂಡಿದಾರ ಧರಿಸಿದರೆ ಉತ್ತಮ ಎಂದು ಸೂಚಿಸಲಾಗಿದೆ (ಕಡ್ಡಾಯವಲ್ಲ).

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ಹರ್ ಘರ್ ತಿರಂಗಾ’ ಅಭಿಯಾನ: ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ‘ತಿರಂಗಾ ದ್ವಿಚಕ್ರ ವಾಹನ ಜಾಥಾ’

79ನೇ ಸ್ವಾತಂತ್ರ್ಯ ದಿನಾಚರಣೆಯ 'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ಆ.14ರಂದು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ 'ತಿರಂಗಾ ದ್ವಿಚಕ್ರ ವಾಹನ ಜಾಥಾ' ನಡೆಯಿತು.

ಭಾರತಿ ಏರ್‌ಟೆಲ್‌ನಿಂದ ‘ಏರ್‌ಟೆಲ್ ಕ್ಲೌಡ್’ ಅನಾವರಣ: ಭಾರತದ ಡಿಜಿಟಲ್ ಸಾರ್ವಭೌಮತ್ವಕ್ಕೆ ಹೊಸ ಹೆಜ್ಜೆ

ಆಗಸ್ಟ್ 4, 2025 ರಂದು, ಭಾರತೀಯ ದೂರಸಂಪರ್ಕ ದೈತ್ಯ ಭಾರತಿ ಏರ್‌ಟೆಲ್ ಭಾರತದ ಕ್ಲೌಡ್ ಸೇವೆಗಳ ಮಾರುಕಟ್ಟೆಗೆ ತನ್ನ ಅಧಿಕೃತ ಪ್ರವೇಶವನ್ನು ಘೋಷಿಸಿತು.

‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣದ ಅವಘಡಗಳ ಬಗ್ಗೆ ದೈವದ ಮುನ್ಸೂಚನೆ!

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ: ಚಾಪ್ಟರ್ 1' ಚಿತ್ರದ ಬಿಡುಗಡೆ ಸಿದ್ಧವಾಗಿದ್ದು, ಚಿತ್ರೀಕರಣದ ವೇಳೆ ನಡೆದ ಘಟನೆಗಳ ಬಗ್ಗೆ ಆಶ್ಚರ್ಯಕರ ಮಾಹಿತಿ ಹೊರಬಿದ್ದಿದೆ.

ದರ್ಶನ್ ಬಂಧನ: ‘ದಿ ಡೆವಿಲ್’ ಚಿತ್ರದ ಹಾಡು ಬಿಡುಗಡೆ ಮುಂದೂಡಿಕೆ, ಅಭಿಮಾನಿಗಳಿಗೆ ನಿರಾಸೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತೊಮ್ಮೆ ಜೈಲು ಸೇರಿದ್ದು, ಇದರ ಪರಿಣಾಮವಾಗಿ ಅವರ ಬಹುನಿರೀಕ್ಷಿತ 'ದಿ ಡೆವಿಲ್' (The Devil) ಸಿನಿಮಾದ ಹಾಡು ಬಿಡುಗಡೆಯನ್ನು ಮುಂದೂಡಲಾಗಿದೆ.