spot_img

ಉಡುಪಿಯಲ್ಲಿ ಮಂತ್ರಾಲಯ ಶ್ರೀಪಾದರಿಗೆ ಪರ್ಯಾಯ ಮಠದ ಭವ್ಯ ಸ್ವಾಗತ!

Date:

ಉಡುಪಿ, ಜನವರಿ 31: ಮಂತ್ರಾಲಯ ಶ್ರೀಪಾದರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿಗೆ ಆಗಮಿಸಿದರು. ಪರ್ಯಾಯ ಅವಧಿಯಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಭೇಟಿ ನೀಡಿದ ಶ್ರೀಪಾದರಿಗೆ ಶ್ರೀಕೃಷ್ಣ ಮಠದಲ್ಲಿ ಭಕ್ತಿ ಪೂರ್ವ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಪರ್ಯಾಯ ಶ್ರೀಪಾದರು ಆದರಭಾವದಿಂದ ಅವರನ್ನು ಬರಮಾಡಿಕೊಂಡರು.ನಂತರ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ದರ್ಶನ ಪಡೆದ ಶ್ರೀಪಾದರಿಗೆ ಗೌರವ ಪೂಜಾ ವಿಧಿ ನೆರವೇರಿಸಲಾಯಿತು. ಪರ್ಯಾಯ ಮಠದ ಶ್ರೀಗಳು ಮಂತ್ರಾಲಯ ಮತ್ತು ಪುತ್ತಿಗೆ ಮಠದ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ನೆನಪಿಸಿಕೊಂಡು, ಇದು ಸದಾಕಾಲ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುಬುದೇಂದ್ರ ತೀರ್ಥ ಶ್ರೀಪಾದರು, ಮಂತ್ರಾಲಯ ಮತ್ತು ಪುತ್ತಿಗೆ ಮಠದ ಅನೇಕ ಯತಿಗಳ ಹೆಸರು ಒಂದೇ ರೀತಿಯಲ್ಲಿದೆ ಎಂದು ಉಲ್ಲೇಖಿಸಿದರು. ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಪೂರ್ವಿಕರಲ್ಲಿ ಒಬ್ಬರು ಎಂದು ಅವರು ಸ್ಮರಿಸಿದರು. ಪುತ್ತಿಗೆ ಶ್ರೀಗಳು ತಮ್ಮ ಅಣ್ಣನ ಸಮಾನ ಎಂದು ಹೇಳಿದ ಅವರು, ಈ ಬಾರಿ ಶೀಘ್ರ ಭೇಟಿ ನೀಡಿದರೂ ಮುಂದಿನ ಬಾರಿ ಸಂಸ್ಥಾನ ಸಮೇತ ಆಗಮಿಸುವುದಾಗಿ ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಈ ಸಂದರ್ಭದಲ್ಲಿ ಶ್ರೀಕೃಷ್ಣ ದರ್ಶನ ಪಡೆದರು. ಪರ್ಯಾಯ ಶ್ರೀಪಾದರು ಉಡುಪಿಯು, ಧರ್ಮಸ್ಥಳ ಹಾಗೂ ಮಂತ್ರಾಲಯದ ಮಹಾಸಂತರು ಒಂದೇ ವೇದಿಕೆಯಲ್ಲಿ ಸನ್ನಿಧಾನಗೊಂಡಿರುವುದು ತ್ರಿವೇಣಿ ಸಂಗಮವನ್ನು ನೆನಪಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಹೆಗ್ಗಡೆಯವರಿಗೂ ಉಭಯ ಶ್ರೀಪಾದರು ಗೌರವ ಸಲ್ಲಿಸಿ, ಆಶೀರ್ವಾದ ನೀಡಿದರು.

ಈ ಕಾರ್ಯಕ್ರಮದಲ್ಲಿ ದಿವಾನ ಶ್ರೀ ನಾಗರಾಜಾಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ, ಮಠದ ಪಂಡಿತರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೆ.ಎಂ.ಇ.ಎಸ್‌ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಕೆ.ಬಾಲಕೃಷ್ಣರಾವ್‌ ಅಧಿಕಾರ ಸ್ವೀಕಾರ

ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆ.ಎಂ.ಇ.ಎಸ್ ನ ಪ್ರಾಂಶುಪಾಲರಾಗಿ ಕೆ.ಬಾಲಕೃಷ್ಣರಾವ್‌ರವರು ದಿನಾಂಕ:27/05/2025ರಂದು ಅಧಿಕಾರ ಸ್ವೀಕರಿಸಿರುತ್ತಾರೆ.

ಸಾಧಾರಣ ತರಕಾರಿಯಲ್ಲ ಇದು! ಆರೋಗ್ಯದ ಖಜಾನೆಯಾದ ಕೆಸುವಿನ ಗಡ್ಡೆಯ ಉಪಯೋಗಗಳು

ಕೆಸುವಿನ ಗಡ್ಡೆ ಅಂದರೆ ಸಾಮಾನ್ಯವಾಗಿ ಅಡುಗೆ ಮನೆಯ ಸರಾಸರಿ ತರಕಾರಿ ಎಂದು ಭಾವಿಸುವವರು ಹೆಚ್ಚು. ಆದರೆ ಪುಟ್ಟದಾಗಿದ್ದರೂ ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ನೀಡುವ ಲಾಭ ಅಪಾರ.

ದಿನ ವಿಶೇಷ – ಭಾರತದ ಮೊದಲ ಡಿಲಕ್ಸ್ ರೈಲು

ಜೂನ್ 1, 1930ರಂದು, ಭಾರತೀಯ ರೈಲ್ವೆವು ಡೆಕ್ಕನ್ ಕ್ವೀನ್ ಎಂಬ ಮೊದಲ ಡಿಲಕ್ಸ್ ರೈಲನ್ನು ಪರಿಚಯಿಸಿತು.

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಎಸ್‌ಪಿ ಡಾ.ಅರುಣ್‌ರವರಿಂದ ಪೊಲೀಸ್ ಇಲಾಖೆಗೆ ಖಡಕ್ ವಾರ್ನಿಂಗ್ !

ಮಂಗಳೂರಿನಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡಾ. ಅರುಣ್ ಅವರು ಗಂಭೀರ ವಾರ್ನಿಂಗ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ.