ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ – ಸಂಚಿತ ಕೊಲೆ ಹಿಂದೆ 5 ಲಕ್ಷ ರೂ.ಗಳ ಕಾನ್ಟ್ರಾಕ್ಟ್! ಎಂಟು ಮಂದಿ ಬಂಧನ

Date:

spot_img

ಮಂಗಳೂರು, ಮೇ 3:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಮಾಹಿತಿಯೊಂದು ಬೆಳಕಿಗೆ ಬಂದಿದ್ದು , ಈ ಹತ್ಯೆ ಪೂರ್ವನಿಯೋಜಿತ ಕಾನ್ಟ್ರಾಕ್ಟ್ ಕಿಲ್ಲಿಂಗ್ ಆಗಿರುವುದೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಬಂಧಿತರು: ಖಲಂದರ್ ಶಾಫಿ, ಅಬ್ದುಲ್ ಸಫ್ವಾನ್, ನಿಯಾಜ್, ಮಹಮ್ಮದ್ ಮುಜಾಮಿಲ್, ರಂಜಿತ್, ಆದಿಲ್ ಮೆಹ್ರೂಪ್, ರಿಜ್ವಾನ್ ಮತ್ತು ನಾಗರಾಜ್.

ಹತ್ಯೆಗೆ ಹಿಂದಿನ ಕಾರಣ:
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದಂತೆ, 2023ರಲ್ಲಿ ಸುಹಾಸ್ ಶೆಟ್ಟಿ ಮತ್ತು ಸಫ್ವಾನ್ ನಡುವೆ ಘರ್ಷಣೆ ಉಂಟಾಗಿದ್ದು, ಸುಹಾಸ್ ಅವರಿಂದ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಈ ಹಲ್ಲೆಯ ನಂತರ ಸುಹಾಸ್ ನಿಂದ ಆತಂಕಗೊಂಡ ಸಫ್ವಾನ್, ಫಾಜಿಲ್ ನ ತಮ್ಮ ಆದಿಲ್ ಮೆಹ್ರೂಪ್ ನನ್ನು ಸಂಪರ್ಕಿಸಿ, ಸುಹಾಸ್ ನ ಹತ್ಯೆಗೆ ಪ್ಲಾನ್ ರೂಪಿಸುತ್ತಾನೆ.

ಕೊಲೆಗಾಗಿ 5 ಲಕ್ಷ ರೂ. :
ಹತ್ಯೆ ಕಾರ್ಯಕ್ಕೆ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಸಫ್ವಾನ್ ನೀಡಿದ್ದು, ಇದನ್ನು ತಂಡದೊಳಗೆ ಹಂಚಲಾಗುತ್ತದೆ. ಚಿಕ್ಕಮಗಳೂರಿನ ನಿಯಾಜ್ ನ ಮೂಲಕ ಆತನ ಸ್ನೇಹಿತರು ರಂಜಿತ್ ಮತ್ತು ನಾಗರಾಜ್ ನನ್ನು ಸಂಪರ್ಕಿಸಿ, ಸುಹಾಸ್ ನ ಚಲನವಲನಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತದೆ.

ಹತ್ಯೆಗೆ ಪೂರ್ವಸಿದ್ಧತೆ:
ಕೊಲೆಗೂ ಮುನ್ನ, ಆರೋಪಿಗಳು ಸಫ್ವಾನ್ ನ ಮನೆಯಲ್ಲೇ ಎರಡು ದಿನ ವಾಸವಿದ್ದು, ಸುಹಾಸ್ ಶೆಟ್ಟಿಯ ಸಂಚಾರದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಾರೆ. ನಂತರ ನಿರ್ಧಿಷ್ಟ ದಿನದಂದು ಪೂರ್ವಸಿದ್ಧತೆಯಂತೆ ಕೊಲೆ ಮಾಡಲಾಗುತ್ತದೆ.

ಬುರ್ಖಾ ಧರಿಸಿದ ಮಹಿಳೆ – ಮತ್ತೊಂದು ಸುಳಿವು:
ಘಟನೆ ದಿನವು ಸ್ಥಳದಲ್ಲಿದ್ದ ಬುರ್ಖಾಧಾರಿ ಮಹಿಳೆ ನಿಯಾಜ್ ಗೆ ಸಂಬಂಧಿಸಿದವಳಾಗಿರಬಹುದು ಎಂಬ ಮಾಹಿತಿ ಲಭಿಸಿದ್ದು, ಈ ಬಗ್ಗೆ ತನಿಖೆ ಇನ್ನಷ್ಟು ಗಂಭೀರವಾಗಿ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮುಂದಿನ ಕ್ರಮ:
ಪೊಲೀಸರು ಈಗಾಗಲೇ ಸಾಕಷ್ಟು ನಿರ್ಧಾರಾತ್ಮಕ ಸುಳಿವುಗಳನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇವೆ. ಪ್ರಕರಣದ ಹಿಂದೆ ಯಾವುದಾದರೂ ಸಂಘಟಿತ ಚಟುವಟಿಕೆ ಅಥವಾ ಆರ್ಥಿಕ, ರಾಜಕೀಯ ಉದ್ದೇಶಗಳಿವೆಯೇ ಎಂಬುದರ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಡಿಗೆ ಸಂಗಾತಿ ಉದ್ಯಮ: ಒಂಟಿತನಕ್ಕೆ ತಾತ್ಕಾಲಿಕ ಪರಿಹಾರವೇ?

ಬೆಳೆಯುತ್ತಿರುವ ಬಾಡಿಗೆ ಸಂಗಾತಿ ಸಂಸ್ಕೃತಿಯ ಸಂಪೂರ್ಣ ವಿಶ್ಲೇಷಣೆ ಮತ್ತು ಉದ್ಯಮದ ಪ್ರಮುಖ ವಿವರಗಳು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.