spot_img

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ – ಸಂಚಿತ ಕೊಲೆ ಹಿಂದೆ 5 ಲಕ್ಷ ರೂ.ಗಳ ಕಾನ್ಟ್ರಾಕ್ಟ್! ಎಂಟು ಮಂದಿ ಬಂಧನ

Date:

spot_img

ಮಂಗಳೂರು, ಮೇ 3:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಮಾಹಿತಿಯೊಂದು ಬೆಳಕಿಗೆ ಬಂದಿದ್ದು , ಈ ಹತ್ಯೆ ಪೂರ್ವನಿಯೋಜಿತ ಕಾನ್ಟ್ರಾಕ್ಟ್ ಕಿಲ್ಲಿಂಗ್ ಆಗಿರುವುದೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಬಂಧಿತರು: ಖಲಂದರ್ ಶಾಫಿ, ಅಬ್ದುಲ್ ಸಫ್ವಾನ್, ನಿಯಾಜ್, ಮಹಮ್ಮದ್ ಮುಜಾಮಿಲ್, ರಂಜಿತ್, ಆದಿಲ್ ಮೆಹ್ರೂಪ್, ರಿಜ್ವಾನ್ ಮತ್ತು ನಾಗರಾಜ್.

ಹತ್ಯೆಗೆ ಹಿಂದಿನ ಕಾರಣ:
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದಂತೆ, 2023ರಲ್ಲಿ ಸುಹಾಸ್ ಶೆಟ್ಟಿ ಮತ್ತು ಸಫ್ವಾನ್ ನಡುವೆ ಘರ್ಷಣೆ ಉಂಟಾಗಿದ್ದು, ಸುಹಾಸ್ ಅವರಿಂದ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಈ ಹಲ್ಲೆಯ ನಂತರ ಸುಹಾಸ್ ನಿಂದ ಆತಂಕಗೊಂಡ ಸಫ್ವಾನ್, ಫಾಜಿಲ್ ನ ತಮ್ಮ ಆದಿಲ್ ಮೆಹ್ರೂಪ್ ನನ್ನು ಸಂಪರ್ಕಿಸಿ, ಸುಹಾಸ್ ನ ಹತ್ಯೆಗೆ ಪ್ಲಾನ್ ರೂಪಿಸುತ್ತಾನೆ.

ಕೊಲೆಗಾಗಿ 5 ಲಕ್ಷ ರೂ. :
ಹತ್ಯೆ ಕಾರ್ಯಕ್ಕೆ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಸಫ್ವಾನ್ ನೀಡಿದ್ದು, ಇದನ್ನು ತಂಡದೊಳಗೆ ಹಂಚಲಾಗುತ್ತದೆ. ಚಿಕ್ಕಮಗಳೂರಿನ ನಿಯಾಜ್ ನ ಮೂಲಕ ಆತನ ಸ್ನೇಹಿತರು ರಂಜಿತ್ ಮತ್ತು ನಾಗರಾಜ್ ನನ್ನು ಸಂಪರ್ಕಿಸಿ, ಸುಹಾಸ್ ನ ಚಲನವಲನಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತದೆ.

ಹತ್ಯೆಗೆ ಪೂರ್ವಸಿದ್ಧತೆ:
ಕೊಲೆಗೂ ಮುನ್ನ, ಆರೋಪಿಗಳು ಸಫ್ವಾನ್ ನ ಮನೆಯಲ್ಲೇ ಎರಡು ದಿನ ವಾಸವಿದ್ದು, ಸುಹಾಸ್ ಶೆಟ್ಟಿಯ ಸಂಚಾರದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಾರೆ. ನಂತರ ನಿರ್ಧಿಷ್ಟ ದಿನದಂದು ಪೂರ್ವಸಿದ್ಧತೆಯಂತೆ ಕೊಲೆ ಮಾಡಲಾಗುತ್ತದೆ.

ಬುರ್ಖಾ ಧರಿಸಿದ ಮಹಿಳೆ – ಮತ್ತೊಂದು ಸುಳಿವು:
ಘಟನೆ ದಿನವು ಸ್ಥಳದಲ್ಲಿದ್ದ ಬುರ್ಖಾಧಾರಿ ಮಹಿಳೆ ನಿಯಾಜ್ ಗೆ ಸಂಬಂಧಿಸಿದವಳಾಗಿರಬಹುದು ಎಂಬ ಮಾಹಿತಿ ಲಭಿಸಿದ್ದು, ಈ ಬಗ್ಗೆ ತನಿಖೆ ಇನ್ನಷ್ಟು ಗಂಭೀರವಾಗಿ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮುಂದಿನ ಕ್ರಮ:
ಪೊಲೀಸರು ಈಗಾಗಲೇ ಸಾಕಷ್ಟು ನಿರ್ಧಾರಾತ್ಮಕ ಸುಳಿವುಗಳನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇವೆ. ಪ್ರಕರಣದ ಹಿಂದೆ ಯಾವುದಾದರೂ ಸಂಘಟಿತ ಚಟುವಟಿಕೆ ಅಥವಾ ಆರ್ಥಿಕ, ರಾಜಕೀಯ ಉದ್ದೇಶಗಳಿವೆಯೇ ಎಂಬುದರ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಲಕ್ಷಾಂತರ ರೂ. ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಕಲಾಪದ ವೇಳೆ ಮೊಬೈಲ್‌ನಲ್ಲಿ ‘ರಮ್ಮಿ’ ಆಟದಲ್ಲಿ ಮುಳುಗಿದ ಕೃಷಿ ಸಚಿವ

ಮಹಾರಾಷ್ಟ್ರ ವಿಧಾನಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಓರ್ವ ಸಚಿವರು ತಮ್ಮ ಮೊಬೈಲ್ ಫೋನ್‌ನಲ್ಲಿ 'ರಮ್ಮಿ' ಗೇಮ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಆಧಾರ್ ಕಾರ್ಡ್‌ಗೆ ಅವಧಿ ಇದೆಯೇ? ನಿಮ್ಮ ಆಧಾರ್ ಸಿಂಧುತ್ವವನ್ನು ಪರಿಶೀಲಿಸುವುದು ಹೇಗೆ?

ಸಾಮಾನ್ಯವಾಗಿ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್‌ನಂತಹ ಗುರುತಿನ ಚೀಟಿಗಳಿಗೆ ನಿರ್ದಿಷ್ಟ ಅವಧಿ ಇರುತ್ತದೆ. ಆದರೆ, ಬಹುತೇಕರಿಗೆ ಆಧಾರ್ ಕಾರ್ಡ್‌ಗೆ ಎಕ್ಸ್‌ಪೈರಿ ದಿನಾಂಕದ ಬಗ್ಗೆ ಗೊಂದಲವಿದೆ.

ಉಪರಾಷ್ಟ್ರಪತಿ ಧಂಖರ್: ಭಾರತದ ಸಾರ್ವಭೌಮತೆಗೆ ಸವಾಲಿಲ್ಲ, ವಿದೇಶಿ ಹಸ್ತಕ್ಷೇಪ ಅಸಾಧ್ಯ

ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಗಳ ಕುರಿತು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳ ಹಿನ್ನೆಲೆಯಲ್ಲಿ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ದೇಶದ ಸಾರ್ವಭೌಮತ್ವ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಿಕೆಯ ಬಗ್ಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ