spot_img

ಮಂಗಳೂರಿಗೆ ಮತ್ತೊಂದು ಹೆಮ್ಮೆ: ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರ ನಿರ್ಮಾಣ ಪೂರ್ಣ

Date:

ಮಂಗಳೂರು : ಮಂಗಳೂರು ನಗರದಲ್ಲಿ ನಿರ್ಮಾಣವಾಗಿರುವ ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರ ಇದೀಗ ಪೂರ್ಣಗೊಂಡಿದೆ. ವಿಶಾಖಪಟ್ಟಣಂನ 60,000 ಮೆಟ್ರಿಕ್ ಟನ್ ಸಾಮರ್ಥ್ಯದ ಸಂಗ್ರಹಾಗಾರವನ್ನು ಮೀರಿಸಿ, ಮಂಗಳೂರಿನಲ್ಲಿ ನಿರ್ಮಿಸಿರುವ ಹೊಸ ಸಂಗ್ರಹಾಗಾರ 80,000 ಮೆಟ್ರಿಕ್ ಟನ್‌ಗಳ ಶಕ್ತಿಯನ್ನು ಹೊಂದಿದೆ. ಇದನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಾಗಿ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ನಿರ್ಮಿಸಿದೆ.

ಈ ಯೋಜನೆಯು 2018ರಲ್ಲಿ ಕೇಂದ್ರದಿಂದ ಅನುಮೋದನೆ ಪಡೆದು, 2019ರಲ್ಲಿ ಕಾಮಗಾರಿ ಆರಂಭವಾಗಿತ್ತು. ಸುಮಾರು 854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾದ ಈ ಸಂಗ್ರಹಾಗಾರವು ಎಲ್ಲಾ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಮುದ್ರದಲ್ಲಿರುವ ತೇಲುಜೆಟ್ಟಿ ಮೂಲಕ ಎಲ್‌ಪಿಜಿ ತುಂಬುವ ವ್ಯವಸ್ಥೆಗೆ ಅಗತ್ಯವಾದ ಪೈಪ್‌ಲೈನ್ ಕೂಡಾ ಈಗಾಗಲೇ ಸಿದ್ಧವಾಗಿದೆ.

ಭೂಮಿಯಿಂದ 500 ಮೀಟರ್ ಆಳದಲ್ಲಿ, ಸುಮಾರು 1,083 ಮೀಟರ್ ಉದ್ದದ ಸುರಂಗ ಮಾಡಲಾಗಿದೆ. ಇದರಲ್ಲಿ ಎಸ್1 ಮತ್ತು ಎಸ್2 ಎಂಬ ಎರಡು ಭಿನ್ನ ಘಟಕಗಳಿದ್ದು, ಕ್ರಮವಾಗಿ 220 ಮೀಟರ್ ಹಾಗೂ 225 ಮೀಟರ್ ಆಳವಿದೆ. ಈ ಸುರಕ್ಷಿತ ಸಂಗ್ರಹಣಾ ವ್ಯವಸ್ಥೆಯಲ್ಲಿ 40,000 ಟನ್ ಪ್ರೊಪೇನ್ ಹಾಗೂ 60,000 ಟನ್ ಬ್ಯುಟೇನ್ ಗಳನ್ನು ಸಹ ವಿಂಗಡಿಸಿ ಇಡಬಹುದಾಗಿದೆ.

ಈ ಮೂಲಕ ಮಂಗಳೂರು ನಗರ ಭಾರತದಲ್ಲಿ ಭೂಗತ ಎಲ್‌ಪಿಜಿ ಸಂಗ್ರಹಣದಲ್ಲಿ ಪ್ರಮುಖ ಕೇಂದ್ರವಾಯಿತು. ಇಂಧನದ ನಿರಂತರ ಪೂರೈಕೆ ಹಾಗೂ ಭದ್ರತೆಯ ದೃಷ್ಟಿಯಿಂದ ಈ ಯೋಜನೆ ಹೊಸ ಮೈಲಿಗಲ್ಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮುದ್ರಾಡಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

ಪ್ರತಿನಿತ್ಯವೂ ಕ್ರಮಬದ್ದವಾಗಿ ಯೋಗಾಸನಗಳನ್ನು ಮಾಡುವುದರಿಂದ ನಾವು ಆರೋಗ್ಯವಂತರಾಗಿ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.

“ನನ್ನ ಭಾಷಣದಲ್ಲಿ ಕೋಮುವಾದ ಪ್ರಚೋದನೆಯಾಗಿಲ್ಲ”: ಚಕ್ರವರ್ತಿ ಸೂಲಿಬೆಲೆ

ಸಾಮಾಜಿಕ ಕಾರ್ಯಕರ್ತ ಹಾಗೂ ಉಪನ್ಯಾಸಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ದಾಖಲಾದ ಆರೋಪ ಮತ್ತು ಪೊಲೀಸ್ ನೋಟೀಸ್‌ಗಳಿಗೆ ಪ್ರತಿಕ್ರಿಯಿಸಿರುವ ಅವರು, “ನನ್ನನ್ನು ರೌಡಿಶೀಟರ್ ಅಥವಾ ಗೂಂಡಾ ಎನಿಸಿ ಗಡಿಪಾರು ಮಾಡಲು ಸಾಧ್ಯವಿಲ್ಲ.

ತುಳು ಭಾಷೆ ಬಳಕೆ ವಿವಾದ: ಜಿ.ಪಂ ಪತ್ರ ಚರ್ಚೆಗೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಗೆ ರಾಜ್ಯಭಾಷಾ ಮಾನ್ಯತೆ ನೀಡಬೇಕೆಂಬ ಹೋರಾಟ ಬಿಗಿಗೊಂಡಿದ್ದ ಸಂದರ್ಭದಲ್ಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕರಿಗೆ ದ.ಕ. ಜಿಲ್ಲಾ ಪಂಚಾಯತ್ ಕಳುಹಿಸಿದ ಒಂದು ಪತ್ರ ಚರ್ಚೆಗೆ ಗ್ರಾಸವಾಗಿದೆ.

“ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವ ನೀತಿ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿಯಿಂದ ತೀವ್ರ ವಾಗ್ದಾಳಿ”

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.