
ಅಹಮದಾಬಾದ್ : ಅಹಮದಾಬಾದ್ ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮಂಗಳೂರು ಮೂಲದ ಏರ್ ಇಂಡಿಯಾ ವಿಮಾನದ ಸಹಾಯಕ ಪೈಲೆಟ್ ಕ್ಲೈವ್ ಕುಂದರ್ ದುರ್ಘಟನೆಯಲ್ಲಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ವಿಮಾನವು ಭೂಮಿಗೆ ಬಿದ್ದು ಪತನವಾಗುವ ಸಮಯದಲ್ಲಿ ಪೈಲೆಟ್ ಕೊನೆಯ ಕರೆ ನೀಡಿದ್ದು, “ಇದು ನನ್ನ ಕೊನೆಯ ಕಾಲ್… ನಾನು ಕ್ರ್ಯಾಷ್ ಲ್ಯಾಂಡಿಂಗ್ ಮಾಡುತ್ತಿದ್ದೇನೆ. ನನ್ನಿಂದ ಇನ್ನೇನು ಮಾಡಲು ಸಾಧ್ಯವಿಲ್ಲ,” ಎಂಬ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ ಎಂದು ವರದಿಯಾಗಿವೆ.
ಮೃತರಾದ ಕ್ಲೈವ್ ಕುಂದರ್ ಮಂಗಳೂರು ಮೂಲದವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಏರ್ ಇಂಡಿಯಾ ಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕ್ಲೈವ್ ಕುಂದರ್ ಅವರ ನಿಧನದಿಂದಾಗಿ ಅವರ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ತಂದೆ-ತಾಯಿ, ಪತ್ನಿ ಹಾಗೂ ಮಕ್ಕಳನ್ನು ಅಗಲಿದ ಅವರ ದುರಂತ ಸಾವಿಗೆ ಸಹಾನುಭೂತಿ ವ್ಯಕ್ತಪಡಿಸುತ್ತಾ, ದೇಶದ ನಾನಾ ಭಾಗಗಳಿಂದ ಸಂತಾಪ ಸಂದೇಶಗಳು ಹರಿದುಬರುತ್ತಿವೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿದೆ.