spot_img

ಮಂಡ್ಯ: ಒಬ್ಬನೊಂದಿಗೆ ಪ್ರೀತಿ, ಇನ್ನೊಬ್ಬನೊಂದಿಗೆ ಮದುವೆ, ಮತ್ತೊಬ್ಬನೊಂದಿಗೆ ಸಂಸಾರ – ಯುವತಿಯ ಮಾಸ್ಟರ್‌ಪ್ಲಾನ್ ಬಯಲು

Date:

ಮಂಡ್ಯ: ಏಕಕಾಲದಲ್ಲಿ ಮೂವರು ಯುವಕರನ್ನು ಮೋಸಗೊಳಿಸಿದ ಯುವತಿ ಮಾಡಿರುವ ಅವಾಂತರ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮದ್ದೂರು ತಾಲೂಕಿನ ಕೆಸ್ತೂರಿನ ವೈಷ್ಣವಿ ಎಂಬ ಯುವತಿ, ಮೊದಲು ಹಾಸನದ ರಘು ಎಂಬ ಯುವಕನೊಂದಿಗೆ ಪ್ರೀತಿಯ ನಾಟಕ ಆಡುತ್ತಿದ್ದಳು. ಆದರೆ ಅದೇ ವೇಳೆಗೆ ಶಿವು ಎಂಬ ಮತ್ತೊಬ್ಬ ಯುವಕನನ್ನೂ ಪ್ರೀತಿಯ ಬುಟ್ಟಿಗೆ ಕೆಡವಿಕೊಂಡಿದ್ದಳು. ರಘು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಧರ್ಮಸ್ಥಳದಲ್ಲಿ ಮದುವೆ ಸಿದ್ಧತೆ ನಡೆಸಿದಾಗ, ರಾತ್ರಿ ಗಂಡನ ಮನೆಯಿಂದ ಚಿನ್ನ, ಸೀರೆ, ಹಣದೊಂದಿಗೆ ನಾಪತ್ತೆಯಾಗಿದ್ದಳು.

ನಂತರ ಶಿವು ಎಂಬ ಯುವಕನನ್ನು ಮದುವೆಯಾಗಿದ್ದರೂ, ಒಂದು ವರ್ಷದೊಳಗೆ ಆ ಸಂಬಂಧ ತೊಂದರೆಗೆ ತುತ್ತಾಗಿ ತವರು ಮನೆ ಸೇರಿಕೊಂಡಿದ್ದಳು. ಈ ಬಳಿಕ ಶಶಿ ಎಂಬ ಇನ್ನೊಬ್ಬ ಯುವಕನನ್ನು “ನಾನು ಬೆಂಗಳೂರಿನಲ್ಲಿ ಓದುತ್ತಿದ್ದೇನೆ” ಎಂದು ಮೋಸಗೊಳಿಸಿ, ಆತನೊಂದಿಗೆ ಆದಿಚುಂಚನಗಿರಿಯಲ್ಲಿ ಮದುವೆಯಾಗಿದ್ದಳು. ಮದುವೆಯಾದ ಬಳಿಕ “ಓದಲು ಬೆಂಗಳೂರಿಗೆ ಹಿಂತಿರುಗುತ್ತೇನೆ” ಎಂದು ಹೇಳಿ ಶಶಿಯಿಂದ ಪ್ರತಿ ತಿಂಗಳು ಹಣ ಪಡೆದು 15 ಲಕ್ಷ ರೂಪಾಯಿ ವಂಚಿಸಿದ್ದಳು. ಶಶಿಗೆ ಅನುಮಾನ ಬಂದು ಬಳಿಕ ವಿಚಾರಣೆ ನಡೆಸಿದಾಗ ಈಕೆಯ ನಿಜ ಸ್ವರೂಪ ಪತ್ತೆಯಾಗಿದೆ.

ಈಗ ಶಶಿ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಲರ್ಸ್ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಮುದ್ದು ಸೊಸೆ’

'ಮುದ್ದು ಸೊಸೆ' ಕಲರ್ಸ್ ಕನ್ನಡದಲ್ಲಿ ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಮದುವೆ ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ.

ಅಪರೂಪದ ನಾಯಿ ಖರೀದಿಗೆ 50 ಕೋಟಿ? ಬೆಂಗಳೂರು ಶ್ವಾನ ಪ್ರೇಮಿಯ ಮನೆಗೆ ಇಡಿ ದಾಳಿ!

ಬೆಂಗಳೂರು ಶ್ವಾನ ಪ್ರೇಮಿ ಎಸ್. ಸತೀಶ್ ತನ್ನಿಂದ 50 ಕೋಟಿ ರೂ. ಮೊತ್ತದಲ್ಲಿ ನಾಯಿ ಖರೀದನೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಹೇಳಿಕೆ ಇದೀಗ ಇಡಿ (ಅನ್ವೇಷಣಾ ನಿರ್ದೇಶನಾಲಯ) ತನಿಖೆಗೆ ಕಾರಣವಾಗಿದೆ.

ಪ್ರೊಸೆಸ್ಡ್ ಆಹಾರದ ನಿಗೂಢ ನಂಟು: ಆರೋಗ್ಯಕ್ಕೆ ರುಚಿಯೇ ವಿಷವಾಗುತ್ತಿದೆ !

ಇತ್ತೀಚಿನ ದಿನಗಳಲ್ಲಿ ಪ್ಯಾಕ್ಟ್ ಫುಡ್ಸ್, ಇನ್‌ಸ್ಟಂಟ್ ಆಹಾರಗಳು, ಬೀದಿ ಬದಿಯ ಜಂಕ್‌ಫುಡ್ಸ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಬಳಕೆಯು ಗಣನೀಯವಾಗಿ ಹೆಚ್ಚಾಗಿದೆ.

ಕಾರ್ಕಳದಲ್ಲಿ ಮಕ್ಕಳ ರಂಗಶಿಬಿರ ಆರಂಭ: ಪ್ರತಿಭೆಗಳ ಅನಾವರಣಕ್ಕೆ ವೇದಿಕೆ – ಶಾಸಕರಿಂದ ಪ್ರೋತ್ಸಾಹ

ಬುಧವಾರ ಕಾರ್ಕಳದ ಯಕ್ಷ ರಂಗಾಯಣ ಸಭಾಂಗಣದಲ್ಲಿ ನಡೆದ ಬಾಲಲೀಲೆ ಮಕ್ಕಳ ರಂಗ ಶಿಬಿರವನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.