spot_img

ಜೈಪುರದಲ್ಲಿ ವ್ಯಕ್ತಿ ಸಾವು: ಉಡುಪಿಯ ಬನ್ನಂಜೆಯವರೆಂಬ ಶಂಕೆ – ಸಂಬಂಧಿಕರ ಪತ್ತೆಗೆ ಮನವಿ

Date:

ಉಡುಪಿ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜೈಪುರ ಗ್ರಾಮದಲ್ಲಿ ಜೂನ್ 11ರಂದು ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯು ಉಡುಪಿ ಜಿಲ್ಲೆಯ ಬನ್ನಂಜೆ ಮೂಲದವರೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಜೈಪುರ ಠಾಣೆ ಪೊಲೀಸರು ಉಡುಪಿ ಅಂಬಲಪಾಡಿಯ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ.

ಪತ್ತೆಯಾದ ಮೃತದೇಹದ ಪ್ರಾಥಮಿಕ ತನಿಖೆಯಲ್ಲಿ, ಮೃತ ವ್ಯಕ್ತಿಯು ಸುಂದರ ಅಥವಾ ವರ್ಧಮಾನ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿದ್ದರೂ, ಅವರ ನಿಖರ ಗುರುತನ್ನು ದೃಢಪಡಿಸಲು ಇನ್ನೂ ಸಂಬಂಧಿಕರ ಸಹಕಾರ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಸಂಬಂಧಿಕರು ಅಥವಾ ಪರಿಚಿತರು ಯಾರಾದರೂ ಇದ್ದರೆ, ತಕ್ಷಣವೇ ಜೈಪುರ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ 8277990582 ಅನ್ನು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಪೊಲೀಸರು ಮೃತದೇಹದ ಚಿತ್ರವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಂದ ಸಹಕಾರ ಕೋರಿದ್ದಾರೆ. ಸಂಬಂಧಿಕರ ಪತ್ತೆಯಾಗದ ವರೆಗೆ ಮೃತದೇಹವನ್ನು ಜೈಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಹಮದಾಬಾದ್‌ ವಿಮಾನ ದುರಂತ: ಟೀ ಅಂಗಡಿಯ ಬಾಲಕ ಸೇರಿ ಮೃತರ ಸಂಖ್ಯೆ 274 ಕ್ಕೆ ಏರಿಕೆ

ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಗುರುವಾರ ದುರಂತಕ್ಕೀಡಾಗಿ, ಮೃತರ ಸಂಖ್ಯೆ 274 ಕ್ಕೆ ಏರಿದೆ.

ಸುಂದರಿ ನಾರಾಯಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೋಟ್ ಬುಕ್ ಕೊಡೆ ಹಾಗೂ ಬ್ಯಾಗ್ ವಿತರಣೆ

ಶ್ರೀನಾಥ್ ಶೆಟ್ಟಿ ಉದ್ಯಮಿ ಮುಂಬೈ 20 ನೇ ವರ್ಷದ ಲೇಖನ ಸಾಮಗ್ರಿ ನೋಟ್ ಬುಕ್ ಕೊಡೆ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ

ಬಾಳೆಹಣ್ಣಿನ ಸಿಪ್ಪೆಯ ಅಚ್ಚರಿಯ ಪ್ರಯೋಜನಗಳು!

ಬಾಳೆಹಣ್ಣಿನ ಸಿಪ್ಪೆ ಚರ್ಮದ ಆರೋಗ್ಯ, ತುಟಿಗಳ ತೇಜಸ್ಸು ಹಾಗೂ ಹಲ್ಲುಗಳ ಸ್ವಚ್ಛತೆಗಾಗಿ ನೈಸರ್ಗಿಕ ಪರಿಹಾರವಾಗಿದೆ.

ದಿನ ವಿಶೇಷ – ವಿಶ್ವ ರಕ್ತದಾನಿಗಳ ದಿನ

ದೈಹಿಕವಾಗಿ ಆರೋಗ್ಯವಿರುವ ಪ್ರತಿಯೊಬ್ಬರೂ 3-6 ತಿಂಗಳಿಗೆ ರಕ್ತದಾನ ಮಾಡಬಹುದು