spot_img

ಪ್ರೀತಿಗಾಗಿ ತನ್ನ ಕಿಡ್ನಿ ಮಾರಿದ ಪ್ರೇಮಿ! ಗೆಳತಿಗೆ ಐಫೋನ್ ಕೊಡಿಸಲು ಯುವಕನ ಅತಿರೇಕದ ನಿರ್ಧಾರ

Date:

ಪ್ರೀತಿಗಾಗಿ ಎಲ್ಲವನ್ನೂ ತ್ಯಾಗ ಮಾಡಬಹುದು ಎಂಬ ಮಾತಿಗೆ ಸಾಕ್ಷಿಯಂತಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಯುವಕನೊಬ್ಬ ತನ್ನ ಗೆಳತಿಯ ಐಫೋನ್ ಬೇಡಿಕೆಗೆ ತನ್ನ ಕಿಡ್ನಿಯನ್ನೇ ಮಾರಿದ್ದಾನೆ.

ದೆಹಲಿಯ ಈ ಯುವಕನ ಗೆಳತಿ, “ನನಗೆ ಐಫೋನ್ ಬೇಕು” ಎಂದು ಕೇಳಿದ್ದಳು. ಹಣದ ಕೊರತೆಯಿಂದ ಬಳಲುತ್ತಿದ್ದ ಯುವಕ, ಐಫೋನ್ 16 ಪ್ರೊ ಖರೀದಿಸಲು ತನ್ನ ಒಂದು ಕಿಡ್ನಿಯನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ. ಶಸ್ತ್ರಚಿಕಿತ್ಸೆಯ ಮೂಲಕ ಕಿಡ್ನಿ ಮಾರಾಟ ಮಾಡಿದ ಬಳಿಕ, ಆ ಹಣದಿಂದ ಐಫೋನ್ ಖರೀದಿಸಿ ಗೆಳತಿಗೆ ಉಡುಗೊರೆ ನೀಡಿದ್ದಾನೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೆಟ್ರೋ ನಿಲ್ದಾಣದ ಬಳಿ ಯುವಕ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಆತನ ಸ್ನೇಹಿತರೊಬ್ಬರು ಚಿತ್ರೀಕರಿಸಿ ಹಂಚಿದ್ದಾರೆ. ವಿಡಿಯೋದಲ್ಲಿ ಯುವಕ ನಗುತ್ತಿರುವುದನ್ನೂ ಕಾಣಬಹುದು. ಆದರೆ ಆ ನಗುವಿನ ಹಿಂದಿರುವ ನೋವು ಮತ್ತು ತ್ಯಾಗ ಜನರನ್ನು ವಿಸ್ಮಯಕ್ಕೆ ಗುರಿಮಾಡಿದೆ.

ಈ ಘಟನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಎದ್ದಿದ್ದು, ಕೆಲವರು ಯುವಕನ ಪ್ರೀತಿಯನ್ನು ಶ್ಲಾಘಿಸುತ್ತಿದ್ದಾರೆ. ಇನ್ನು ಕೆಲವರು, ಇಂತಹ ನಿರ್ಧಾರಗಳು ಆರೋಗ್ಯ ಮತ್ತು ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ ಎಂಬ ಎಚ್ಚರಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಲರ್ಸ್ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಮುದ್ದು ಸೊಸೆ’

'ಮುದ್ದು ಸೊಸೆ' ಕಲರ್ಸ್ ಕನ್ನಡದಲ್ಲಿ ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಮದುವೆ ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ.

ಅಪರೂಪದ ನಾಯಿ ಖರೀದಿಗೆ 50 ಕೋಟಿ? ಬೆಂಗಳೂರು ಶ್ವಾನ ಪ್ರೇಮಿಯ ಮನೆಗೆ ಇಡಿ ದಾಳಿ!

ಬೆಂಗಳೂರು ಶ್ವಾನ ಪ್ರೇಮಿ ಎಸ್. ಸತೀಶ್ ತನ್ನಿಂದ 50 ಕೋಟಿ ರೂ. ಮೊತ್ತದಲ್ಲಿ ನಾಯಿ ಖರೀದನೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಹೇಳಿಕೆ ಇದೀಗ ಇಡಿ (ಅನ್ವೇಷಣಾ ನಿರ್ದೇಶನಾಲಯ) ತನಿಖೆಗೆ ಕಾರಣವಾಗಿದೆ.

ಪ್ರೊಸೆಸ್ಡ್ ಆಹಾರದ ನಿಗೂಢ ನಂಟು: ಆರೋಗ್ಯಕ್ಕೆ ರುಚಿಯೇ ವಿಷವಾಗುತ್ತಿದೆ !

ಇತ್ತೀಚಿನ ದಿನಗಳಲ್ಲಿ ಪ್ಯಾಕ್ಟ್ ಫುಡ್ಸ್, ಇನ್‌ಸ್ಟಂಟ್ ಆಹಾರಗಳು, ಬೀದಿ ಬದಿಯ ಜಂಕ್‌ಫುಡ್ಸ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಬಳಕೆಯು ಗಣನೀಯವಾಗಿ ಹೆಚ್ಚಾಗಿದೆ.

ಕಾರ್ಕಳದಲ್ಲಿ ಮಕ್ಕಳ ರಂಗಶಿಬಿರ ಆರಂಭ: ಪ್ರತಿಭೆಗಳ ಅನಾವರಣಕ್ಕೆ ವೇದಿಕೆ – ಶಾಸಕರಿಂದ ಪ್ರೋತ್ಸಾಹ

ಬುಧವಾರ ಕಾರ್ಕಳದ ಯಕ್ಷ ರಂಗಾಯಣ ಸಭಾಂಗಣದಲ್ಲಿ ನಡೆದ ಬಾಲಲೀಲೆ ಮಕ್ಕಳ ರಂಗ ಶಿಬಿರವನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.