spot_img

ಉಡುಪಿಯಲ್ಲಿ ಯುವತಿ ಅಪಹರಣ ಆರೋಪಿ ವಿರುದ್ಧ ಲವ್ ಜಿಹಾದ್ ಆರೋಪ!

Date:

ಉಡುಪಿ: ಉಡುಪಿಯಲ್ಲಿ ಅನ್ಯಕೋಮಿನ ಯುವಕನೊಬ್ಬ ತನ್ನ ಮಗಳನ್ನು ಅಪಹರಿಸಿ ವಿವಾಹ ನೋಂದಣಿಗೆ ಸಹಿ ಹಾಕಿಸಿದ್ದಾನೆ ಎಂದು ತಂದೆ ದೂರು ನೀಡಿದ ನಂತರ, ಈ ಪ್ರಕರಣ ಲವ್ ಜಿಹಾದ್ ಆರೋಪದೊಂದಿಗೆ ವೈರಲ್ ಆಗಿದೆ.

ಉಡುಪಿಯ ಕ್ರೈಸ್ತ ಧರ್ಮೀಯ ಗಾಡ್ವಿನ್ ದೇವದಾಸ್ ಎಂಬವರು ತಮ್ಮ ಮಗಳು ಅಪಹರಣಕ್ಕೊಳಗಾದ ಬಗ್ಗೆ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅವರ ಪ್ರಕಾರ, ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಂ ಎಂಬಾತ ಈ ಕೃತ್ಯ ಎಸಗಿದ್ದಾನೆ. ಅವರು ಈತನ ವಿರುದ್ಧ ಹಿಂದೆಯೂ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದನ್ನು ಉಲ್ಲೇಖಿಸಿದ್ದಾರೆ.

ಪೋಷಕರ ಪ್ರಕಾರ, ಮೊದಲು ಅಕ್ರಂ ಅವರ ಮಗಳಿಗೆ ಅಪ್ರಾಪ್ತ ವಯಸ್ಸಿನಲ್ಲಿಯೇ ಕಿರುಕುಳ ನೀಡಿದ್ದ, ಆದರೆ 5 ವರ್ಷಗಳ ಹಿಂದೆ ದಾಖಲಾದ ಪೋಕ್ಸೋ ಕೇಸು ಸಾಕ್ಷ್ಯಾಭಾವದ ಕಾರಣದಿಂದ ವಜಾಗೊಂಡಿತ್ತು. ಈಗ, ಸೇಡು ತೀರಿಸಿಕೊಳ್ಳಲು ಈ ಯುವತಿಯನ್ನು ಅಪಹರಿಸಿ, ಬೆದರಿಸಿ ವಿವಾಹಕ್ಕೆ ಒತ್ತಾಯಿಸಲಾಗಿದೆ ಎಂದು ದೂರಿದ್ದಾರೆ.

ಈ ಪ್ರಕರಣ ಇದೀಗ ಬಿಗುವಿನ ವಾತಾವರಣ ಸೃಷ್ಟಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದೇಶದ ಭದ್ರತೆ ವಿಚಾರದಲ್ಲೂ ಗೋಸುಂಬೆಗಳ ತರಹ ವರ್ತಿಸುವ ಕಾಂಗ್ರೆಸ್: ರಾಕೇಶ್ ಶೆಟ್ಟಿ ಕುಕ್ಕುಂದೂರು

ಕಾಶ್ಮಿರದ ಪೆಹಲ್ಗಾಮ್ ನಲ್ಲಿ ಹಿಂದೂಗಳ ಹತ್ಯೆ ದೇಶದ ಭದ್ರತೆ ಮತ್ತು ಭಯೋತ್ಪಾದಕರ ವಿರುದ್ಧದ ಕಠಿಣ ನಿರ್ಧಾರಗಳ ಕುರಿತು ಕಾಂಗ್ರೆಸ್ ಪಕ್ಷ ಗೋಸುಂಬೆ ರೀತಿ ವರ್ತಿಸುತ್ತಿದೆ.

ಪಾಕಿಸ್ತಾನಕ್ಕೆ ರಾಜನಾಥ್ ಎಚ್ಚರಿಕೆ: ಭಾರತದ ತಾಳ್ಮೆ ಪರೀಕ್ಷಿಸಿದರೆ ಗುಣಮಟ್ಟದ ಪ್ರತಿಕ್ರಿಯೆ ಅನಿವಾರ್ಯ!

ಭಾರತದ ತಾಳ್ಮೆಯನ್ನು ಪಾಕಿಸ್ತಾನ ಮತ್ತೆ ಪರೀಕ್ಷಿಸುವ ಪ್ರಯತ್ನ ಮಾಡಿದರೆ, ಇದು ದೇಶದಿಂದ 'ಗುಣಮಟ್ಟದ ಪ್ರತಿಕ್ರಿಯೆ'ಗೆ ದಾರಿ ಮಾಡಿಕೊಡುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ದಿನ ವಿಶೇಷ – ಯುರೋಪ್ ದಿನ

ಪ್ರತಿ ವರ್ಷ ಮೇ 9 ರಂದು ಯುರೋಪ್ ದಿನವನ್ನು ಆಚರಿಸಲಾಗುತ್ತದೆ, ಇದು ಯುರೋಪಿನಲ್ಲಿ ಶಾಂತಿ ಮತ್ತು ಏಕತೆಯನ್ನು ಆಚರಿಸುತ್ತದೆ.

ಮಂಗಳೂರಿನಲ್ಲಿ ಬೆಂಕಿ ಹಚ್ಚಲು ಬಿಜೆಪಿ ಮಾಡಿದ ಪ್ರಯತ್ನ ವಿಫಲ : ಸಚಿವ ಗುಂಡೂರಾವ್ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯ ಸುಹಾಸ್ ಶೆಟ್ಟಿ ಪ್ರಕರಣದ ಹಿನ್ನಲೆಯಲ್ಲಿ ಬಿಜೆಪಿ ಮಂಗಳೂರಿನಲ್ಲಿ ಕೋಮು ಅಶಾಂತಿ ಉಂಟುಮಾಡುವ ಯತ್ನಕ್ಕೆ ಮುಂದಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.