spot_img

“ಸುಳ್ಳಿನ ಚಕ್ರವರ್ತಿ ಸೂಲಿಬೆಲೆ”: ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಲೇವಡಿ

Date:

ಉಡುಪಿ : ವಿವಾದಾತ್ಮಕ ಹಿಂದುತ್ವವಾದಿ ಚಿಂತನಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸೂಲಿಬೆಲೆ ಸುಳ್ಳಿನ ಚಕ್ರವರ್ತಿ. ಬಾಯಿ ತೆರೆದರೆ ರಾಮಾಯಣ-ಮಹಾಭಾರತ ಹೇಳುತ್ತಾರೆ, ಆದರೆ ಯಾವ ಪ್ರಮಾಣದಲ್ಲಿ ಸುಳ್ಳು ಹೇಳುತ್ತಾರೆ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ” ಎಂದು ಅವರು ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, “ಕಪ್ಪನ್ನು ಬಿಳಿ ಎಂದು , ಬಿಳಿಯನ್ನು ಕಪ್ಪು ಎಂದು ಬಣ್ಣಿಸುವಲ್ಲಿ ಸೂಲಿಬೆಲೆ ನಿಸ್ಸೀಮರು. ಇಂತಹವರಿಂದ ನಾವು ಪಾಠ ಕೇಳಬೇಕಾದ ಅವಶ್ಯಕತೆ ಇಲ್ಲ. ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ಹಕ್ಕುಗಳನ್ನು ನೀಡಿದ ಪಕ್ಷ ಕಾಂಗ್ರೆಸ್ ಆಗಿದ್ದು, ಸಂವಿಧಾನವನ್ನು ಎತ್ತಿ ಹಿಡಿದದ್ದು ನಾವು” ಎಂದು ಹೇಳಿದರು.

ಉಡುಪಿಗೆ ಸೂಲಿಬೆಲೆ ಆಗಮನಕ್ಕೆ ಪ್ರತಿಕ್ರಿಯೆ:
“ಚಕ್ರವರ್ತಿ ಸೂಲಿಬೆಲೆ ಅವರು ಮೂರು ದಿನಗಳಿಂದ ಉಡುಪಿಯಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಂದ ತಿಳಿದುಬಂದಿದೆ. ಅವರು ಪ್ರವಾಸ ಮಾಡಬಹುದಾದ ಹಕ್ಕು ಹೊಂದಿದ್ದಾರೆ. ಆದರೆ ಉಡುಪಿಯ ಶಾಂತಿ ಕದಡುವ ಕೆಲಸ ಮಾಡಬಾರದು. ದ್ವೇಷ ಭಾಷಣ, ಸುಳ್ಳು ಬಿತ್ತುವ ಪ್ರವೃತ್ತಿಗೆ ಅವಕಾಶ ನೀಡಬಾರದು” ಎಂದು ಎಚ್ಚರಿಸಿದರು.

ಕೋಮು ನಿಗ್ರಹ ಪಡೆ ವಿಚಾರ:
ಕರಾವಳಿ ಜಿಲ್ಲೆಗಳಲ್ಲಿ ಕೋಮು ನಿಗ್ರಹ ಪಡೆ ರಚನೆಗೆ ಬಿಜೆಪಿ ಶಾಸಕರ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಒಂದೆಡೆ ಬಿಜೆಪಿ ಪ್ರಚೋದಕ ಭಾಷಣ ಮಾಡುತ್ತೆ, ಮತ್ತೊಂದೆಡೆ ಕೋಮು ನಿಗ್ರಹ ಪಡೆಯ ವಿರುದ್ಧ ಮಾತನಾಡುತ್ತಾರೆ. ಈ ರೀತಿಯ ದ್ವಂದ್ವ ಭಾವನೆಗಳು ಅವರ ನಿಜವಾದ ರಾಜಕೀಯ ಬಣ್ಣವನ್ನು ಬಯಲಿಗೆ ತರುತ್ತವೆ” ಎಂದು ಟೀಕಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚಕ್ರವರ್ತಿ ಸೂಲಿಬೆಲೆಯವರ ಮಾತಿಗೆ ಹೇರಿದ ನಿರ್ಬಂಧಕ್ಕೆ ವಿರೋಧವಿದೆ: ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ

ಚಕ್ರವರ್ತಿ ಸೂಲಿಬೆಲೆಯವರ ಮಾತಿಗೆ ಹೇರಿದ ನಿರ್ಬಂಧಕ್ಕೆ ವಿರೋಧವಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ರವರು ಹೇಳಿದರು.

ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಅವರು ಕುಟುಂಬ ಸಮೇತರಾಗಿ ಶೃಂಗೇರಿಗೆ ಆಗಮಿಸಿದ್ದು, ಜಗದ್ಗುರುಗಳ ಆಶೀರ್ವಾದವೂ ಪಡೆದರು.

ದಿನ ವಿಶೇಷ – ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ.

ಇಸ್ರೇಲ್-ಇರಾನ್ ಸಂಘರ್ಷ ತೀವ್ರತೆಗೆ: ಇಸ್ಪಾಹಾನ್ ನ್ಯೂಕ್ಲಿಯರ್ ಘಟಕದತ್ತ ಇಸ್ರೇಲ್ ಕ್ಷಿಪಣಿದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಸಾಯಂಕಾಲದ ಸಂಘರ್ಷ ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ರಕ್ಷಣಾ ಪಡೆ (IDF) ನಡೆಸಿದ ತೀವ್ರ ಕ್ಷಿಪಣಿದಾಳಿಯಿಂದ ಇರಾನ್‌ನ ಹಲವು ಸೈನಿಕ ಸೌಲಭ್ಯಗಳು ಧ್ವಂಸಗೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.