
ಹೆಬ್ರಿ :“ನಾವು ಪ್ರತಿನಿತ್ಯವೂ ಭಗವಂತನ ಚಿಂತನೆ ಮಾಡಬೇಕು. ದೇವರ ಸೇವೆಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಸೌಭಾಗ್ಯ. ವಾಯುದೇವರ ಮಹಿಮೆ ಅಪಾರವಾದುದು. ರಾಮನ ಬಗ್ಗೆ ಇದ್ದ ಅಪಾರವಾದ ಗೌರವ, ನಂಬಿಕೆಯೇ ಹನುಮಂತನು ಆತನ ಸೇವೆಯಲ್ಲಿ ತೊಡಗಿಕೊಳ್ಳಲು ಕಾರಣವಾಯಿತು” ಎಂದು ವೇದಾಂತ ವಿದ್ವಾನ್ ಕಾರ್ಕಳ ಮದ್ವೇಶ ಆಚಾರ್ಯ ಹೇಳಿದರು.
ಅವರು ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದ ಶ್ರೀ ವಿಠ್ಠಲ ದೇವರ ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡು ಧಾರ್ಮಿಕ ಉಪನ್ಯಾಸ ನೀಡಿದರು. ವಿದ್ವಾನ್ ಗಿಲ್ಲಾಳಿ ಪದ್ಮನಾಭ ಆಚಾರ್ಯ ನೇತೃತ್ವದಲ್ಲಿ ಊರ, ಪರವೂರ ವಿಪ್ರ ಬಾಂಧವರ ಸಹಕಾರದಿಂದ ತುಳಸಿ ಅರ್ಚನೆ ಸಂಪನ್ನಗೊಂಡಿತು. ಅರ್ಚಕ ನಾರಾಯಣ ಭಟ್ ಸ್ವಾಗತಿಸಿ, ವಂದಿಸಿದರು.