spot_img

ಕುದುರೆಮುಖ ವನ್ಯಜೀವಿ ವಿಭಾಗವು 1,221 ಕಿ. ಮೀ. ಬೆಂಕಿ ರೇಖೆ ನಿರ್ಮಾಣಕ್ಕೆ ಮುಂದಾಗಿದೆ

Date:

ಕಾರ್ಕಳ: ಪಶ್ಚಿಮಘಟ್ಟದ ಜೀವ ವೈವಿಧ್ಯಮಯ ಪರಿಸರವನ್ನು ರಕ್ಷಿಸಲು ಕುದುರೆಮುಖ ವನ್ಯಜೀವಿ ವಿಭಾಗವು ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚಾರ್ಮಾಡಿ ಭಾಗದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಕುದುರೆಮುಖ, ಆಗುಂಬೆ ಪ್ರದೇಶದಲ್ಲಿ ಆತಂಕ ಮೂಡಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ.

ಈ ಭಾಗದಲ್ಲಿ 1,221 ಕಿ. ಮೀ. ಬೆಂಕಿ ರೇಖೆ ನಿರ್ಮಾಣವಾಗಿದ್ದು, 900 ಕಿ. ಮೀ. ಕಾರ್ಯ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲಿ ಜ. 31ರೊಳಗೆ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಬೆಂಕಿ ರೇಖೆ ನಿರ್ಮಾಣಕ್ಕಾಗಿ ಕಾಡು ಸುತ್ತಲೂ ಕಳೆಗಿಡ, ಹುಲ್ಲು ಹಾಗೂ ಸಣ್ಣಪುಟ್ಟ ಗಿಡಗಳನ್ನು 8-10 ಮೀಟರ್ ಅಂತರದಲ್ಲಿ ಕತ್ತರಿಸಿ, ಅವುಗಳಿಗೆ ಬೆಂಕಿ ಹಾಕಲಾಗುತ್ತದೆ.

ಕಾರ್ಕಳ ವನ್ಯಜೀವಿ ವಿಭಾಗದಡಿಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಆಗುಂಬೆ-ಸೋಮೇಶ್ವರ ವನ್ಯಜೀವಿ ಧಾಮ ಹಾಗೂ ಕೊಲ್ಲೂರು ಮೂಕಾಂಬಿಕಾ ವನ್ಯಜೀವಿ ಧಾಮಗಳು ಬರುತ್ತವೆ.

ಪರಿಸ್ಥಿತಿ ಕೈಮೀರಿದರೆ ಹೆಲಿಕಾಪ್ಟರ್ ಬಳಕೆ
ಅಗತ್ಯವಿದ್ದರೆ, ಹೆಲಿಕಾಪ್ಟರ್ ಬಳಕೆ ಮಾಡುವ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹಾಯವಾಣಿ: 1926
ಅರಣ್ಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ, ಸಾರ್ವಜನಿಕರು ಸಹಾಯವಾಣಿ ನಂಬರ್ 1926ಕ್ಕೆ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ.

  • ಶಿವರಾಮ್ ಬಾಬು, ಡಿಎಫ್‌ಒ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪರ್ಕಳದಲ್ಲಿ ಮತ್ತೆ ಚಿರತೆ ಆತಂಕ: ಹಗಲೇ ಕೋಳಿ, ನಾಯಿ ಎಳೆದೊಯ್ದ ಘಟನೆ!

ಉಡುಪಿ ಜಿಲ್ಲೆಯ ಪರ್ಕಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪತ್ತೆಯಾಗಿರುವ ಘಟನೆ ಮತ್ತೆ ವರದಿಯಾಗಿದೆ.

ಅಮಿತ್ ಶಾ ರಾಜ್ಯಕ್ಕೆ ಭೇಟಿ – ಯಡಿಯೂರಪ್ಪರವರ ಮೊಮ್ಮಗನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ (ಜೂನ್ 8) ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ಭೇಟಿಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಕುತೂಹಲ ಉಂಟಾಗಿದೆ.

ದಿನ ವಿಶೇಷ – ಕಿರಣ್ ಬೇಡಿ: ಮೊದಲ ಮಹಿಳಾ IPS

ಜೂನ್ 8 ಎಂಬ ದಿನಾಂಕ ಕಿರಣ್ ಬೇಡಿಯವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದ ಪ್ರಮುಖ ದಿನ.

ಕಾರ್ಕಳದ ಜನತೆಗೆ ರುಚಿಕರ ಸುದ್ದಿ: ಜೂನ್ 8ರಂದು ‘ದೊನ್ನೆ ಬಿರಿಯಾನಿ ಗ್ರಾಂಡ್ – ನಾಟಿ ಸ್ಟೈಲ್ ಫ್ಯಾಮಿಲಿ ರೆಸ್ಟೋರೆಂಟ್’ ಶುಭಾರಂಭ

ಕಾರ್ಕಳದ ಜೋಡುರಸ್ತೆಯ ವಿಜಯ ಕಾಂಪ್ಲೆಕ್ಸ್‌ನಲ್ಲಿ ಬಹು ನಿರೀಕ್ಷಿತ 'ದೊನ್ನೆ ಬಿರಿಯಾನಿ ಗ್ರಾಂಡ್ – ನಾಟಿ ಸ್ಟೈಲ್ ಫ್ಯಾಮಿಲಿ ರೆಸ್ಟೋರೆಂಟ್' ಜೂನ್ 8, 2025ರ ಆದಿತ್ಯವಾರ ಶುಭಾರಂಭಗೊಳ್ಳಲಿದೆ.