
ಕಾರ್ಕಳ: ಪಶ್ಚಿಮಘಟ್ಟದ ಜೀವ ವೈವಿಧ್ಯಮಯ ಪರಿಸರವನ್ನು ರಕ್ಷಿಸಲು ಕುದುರೆಮುಖ ವನ್ಯಜೀವಿ ವಿಭಾಗವು ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚಾರ್ಮಾಡಿ ಭಾಗದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಕುದುರೆಮುಖ, ಆಗುಂಬೆ ಪ್ರದೇಶದಲ್ಲಿ ಆತಂಕ ಮೂಡಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ.
ಈ ಭಾಗದಲ್ಲಿ 1,221 ಕಿ. ಮೀ. ಬೆಂಕಿ ರೇಖೆ ನಿರ್ಮಾಣವಾಗಿದ್ದು, 900 ಕಿ. ಮೀ. ಕಾರ್ಯ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲಿ ಜ. 31ರೊಳಗೆ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಬೆಂಕಿ ರೇಖೆ ನಿರ್ಮಾಣಕ್ಕಾಗಿ ಕಾಡು ಸುತ್ತಲೂ ಕಳೆಗಿಡ, ಹುಲ್ಲು ಹಾಗೂ ಸಣ್ಣಪುಟ್ಟ ಗಿಡಗಳನ್ನು 8-10 ಮೀಟರ್ ಅಂತರದಲ್ಲಿ ಕತ್ತರಿಸಿ, ಅವುಗಳಿಗೆ ಬೆಂಕಿ ಹಾಕಲಾಗುತ್ತದೆ.
ಕಾರ್ಕಳ ವನ್ಯಜೀವಿ ವಿಭಾಗದಡಿಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಆಗುಂಬೆ-ಸೋಮೇಶ್ವರ ವನ್ಯಜೀವಿ ಧಾಮ ಹಾಗೂ ಕೊಲ್ಲೂರು ಮೂಕಾಂಬಿಕಾ ವನ್ಯಜೀವಿ ಧಾಮಗಳು ಬರುತ್ತವೆ.
ಪರಿಸ್ಥಿತಿ ಕೈಮೀರಿದರೆ ಹೆಲಿಕಾಪ್ಟರ್ ಬಳಕೆ
ಅಗತ್ಯವಿದ್ದರೆ, ಹೆಲಿಕಾಪ್ಟರ್ ಬಳಕೆ ಮಾಡುವ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯವಾಣಿ: 1926
ಅರಣ್ಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ, ಸಾರ್ವಜನಿಕರು ಸಹಾಯವಾಣಿ ನಂಬರ್ 1926ಕ್ಕೆ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ.
- ಶಿವರಾಮ್ ಬಾಬು, ಡಿಎಫ್ಒ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ