spot_img

ಯರ್ಲಪಾಡಿಗೆ KSRTC ಬಸ್ ಸಂಚಾರ ಶೀಘ್ರದಲ್ಲೇ ಆರಂಭ

Date:

spot_img

ಯರ್ಲಪಾಡಿ : ಯರ್ಲಪಾಡಿ ಗ್ರಾಮಸ್ಥರ ಬಹುದಿನದ ಬೇಡಿಕೆ ಸಾಕಾರಗೊಂಡಿದ್ದು, ಅತೀ ಶೀಘ್ರದಲ್ಲೇ ಯರ್ಲಪಾಡಿ ಗ್ರಾಮಕ್ಕೆ ಸರಕಾರಿ ಬಸ್ ಸಂಚಾರ ಸೇವೆಯು ಲಭ್ಯವಾಗಲಿದೆ. ಪ್ರತೀ ದಿನ ಉಡಪಿ – ಮಣಿಪಾಲ – ಹಿರಿಯಡ್ಕ – ಪಂಚನಬೆಟ್ಟು – ಗೋವಿಂದೂರು – ಬೈಲೂರು – ಕಾಂತರಗೋಳಿ – ಚಿಕ್ಕಲ್ ಬೆಟ್ಟು – ಹಿರ್ಗಾನ – ಕಾರ್ಕಳ ಮಾರ್ಗವಾಗಿ ಕೆ. ಎಸ್. ಆರ್. ಟಿ. ಸಿ. ಬಸ್ ಸಂಚರಿಸಲಿದ್ದು, ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಲಿದೆ. ಕಳೆದ ಅನೇಕ ವರ್ಷಗಳಿಂದ ಹಲವಾರು ಗ್ರಾಮಸಭೆಗಳಲ್ಲಿ ಚರ್ಚೆಯಾಗುತ್ತಿದ್ದ ಗ್ರಾಮಸ್ಥರ ಸದ್ರಿ ಬೇಡಿಕೆಯು ಫಲಪ್ರದವಾಗುವ ಸಂದರ್ಭವು ಕೂಡಿ ಬಂದಿದೆ.

ಬಹುದಿನದ ಈ ಬೇಡಿಕೆಯು ಸಾಕಾರಗೊಳ್ಳುವಲ್ಲಿ ವಿಶೇಷವಾಗಿ ಸ್ಪಂದಿಸಿ ಸಹಕರಿಸಿದ ಕಾರ್ಕಳ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ರವರಿಗೆ ಹಾಗೂ ಸರಕಾರದ ಸಾರಿಗೆ ಇಲಾಖೆಗೆ ಯರ್ಲಪಾಡಿ ಗ್ರಾಮಸ್ಥರ ಪರವಾಗಿ ತುಂಬುಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಹಾಗೂ ಈ ಸಾರ್ವಜನಿಕ ವಿಚಾರದಲ್ಲಿ ನಿರಂತರವಾಗಿ ಪ್ರಯತ್ನಪಟ್ಟ ಗ್ರಾಮಸ್ಥೆ ಮೇಲಿನಬಾವ ಶ್ರೀಮತಿ ಲಕ್ಷ್ಮಿ ಹೆಗ್ಡೆಯವರಿಗೂ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆಂದು ಯರ್ಲಪಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಸುನಿಲ್ ಕುಮಾರ್ ಹೆಗ್ಡೆಯವರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಗರಪಂಚಮಿ ಸಂಭ್ರಮ: ಪುತ್ತಿಗೆ ಶ್ರೀಗಳಿಂದ ನಾಗದೇವರಿಗೆ ವಿಶೇಷ ಪೂಜೆ!

ಇಂದು ನಾಗರಪಂಚಮಿಯ ಶುಭದಿನದಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಬ್ಯಾಂಕ್ ಆಫ್ ಬರೋಡಾದ ಸಾಣೂರು ಶಾಖೆಯ ವತಿಯಿಂದ ಕೊಳಕೆ ಇರ್ವತ್ತೂರು ಶಾಲೆಗೆ ಕಲಿಕಾ ಸಾಮಗ್ರಿಗಳ ವಿತರಣೆ

ಬ್ಯಾಂಕ್ ಆಫ್ ಬರೋಡಾದ ಸಾಣೂರು ಶಾಖೆಯ ವತಿಯಿಂದ ಕೊಳಕೆ ಇರ್ವತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ಶತಮಾನೋತ್ಸವ ಮುಂಬೈ ಸಮಿತಿಯ ಗೌರವಾಧ್ಯಕ್ಷರಾದ ರಮೇಶ್ ಶೆಟ್ಟಿ ಗುರಂತಿಬೆಟ್ಟು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಗರಬತ್ತಿ ಹೊಗೆ ಸಿಗರೇಟಿಗಿಂತ ಹೆಚ್ಚು ಅಪಾಯಕಾರಿ: ಹೊಸ ಅಧ್ಯಯನದಿಂದ ಬಹಿರಂಗ!

ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಅಗರಬತ್ತಿ ಹಾಗೂ ಧೂಪದ್ರವ್ಯದ ಹೊಗೆ ಆಹ್ಲಾದಕರವೆಂದು ನಂಬಲಾಗಿದ್ದರೂ, ಹೊಸ ಅಧ್ಯಯನವೊಂದು ಇದು ಸಿಗರೇಟ್ ಹೊಗೆಗಿಂತಲೂ ಹೆಚ್ಚು ಹಾನಿಕಾರಕ ಎಂದು ಸ್ಪಷ್ಟಪಡಿಸಿದೆ.

ವಿಪರೀತ ಹೊಟ್ಟೆನೋವಿನಿಂದ ವಿವಾಹಿತ ಮಹಿಳೆ ಸಾವು; ಮರೋಡಿಯಲ್ಲಿ ದುರ್ಘಟನೆ

ವಿಪರೀತ ಹೊಟ್ಟೆನೋವಿನಿಂದ ವಿವಾಹಿತ ಮಹಿಳೆಯೊಬ್ಬರು ಅಚಾನಕ್ಕಾಗಿ ಮೃತಪಟ್ಟ ಘಟನೆ ಮರೋಡಿ ಗ್ರಾಮದಲ್ಲಿ ಸೋಮವಾರ (ಜುಲೈ 28, 2025) ನಡೆದಿದೆ.