spot_img

ಕೆ.ಎಂ.ಇ.ಎಸ್: ವಿಶ್ವಪರಿಸರ ದಿನ ಆಚರಣೆ

Date:

“ಪರಿಸರ ಮಾಲಿನ್ಯದಿಂದ ಪ್ರಾಕೃತಿಕ ಮುನಿಸು ಉಂಟಾಗುತ್ತದೆ. ಮೊದಲು ನಮ್ಮ ಮನೆಯ ಸುತ್ತ ಸ್ವಚ್ಛ ಮಾಡಿಕೊಳ್ಳಬೇಕು, ನಂತರ ಶಾಲೆಯ ಆವರಣ ಮತ್ತು ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು. ನೀರಿನ ಬಾಟಲ್‌ಗಳನ್ನು ಎಲ್ಲಂದರಲ್ಲಿ ಬಿಸಾಡಬಾರದು.ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಬೇಕು. ಆದಷ್ಟು ಗಿಡಗಳನ್ನು ನೆಟ್ಟು ಪೋಷಿಸಬೇಕು. ವಿಘಟನೆಗೊಳ್ಳದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳು ಕ್ಯಾನ್ಸರ್, ಆಸ್ತಮಾ ಇತ್ಯಾದಿ ಕಾಯಿಲೆಗಳನ್ನು ಉಂಟು ಮಾಡಬಹುದು. ಪರಿಸರ ಮಾಲಿನ್ಯದಿಂದ ನಮ್ಮ ಭೂಮಿ ಕಲುಷಿತಗೊಂಡಿರುವುದರಿಂದ ನಾವು ಈಗಲಾದರೂ ಜಾಗೃತರಾಗಬೇಕು” ಎಂದು ಜೀವಶಾಸ್ತ್ರ ಉಪನ್ಯಾಸಕರು ಮತ್ತು ಸಂಪನ್ಮೂಲ ವ್ಯಕ್ತಿಯಾದ ಗುರುಕುಮಾರ್‌ರವರು ಕೆ.ಎಂ.ಇ.ಎಸ್ ಪ್ರೌಢಶಾಲಾ ವಿಭಾಗದ ‘ವಿಶ್ವಪರಿಸರ ದಿನ’ ಆಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ನದಾಫ್ ಅಹಮ್ಮದ್ ಮಾತನಾಡಿ “ಸ್ವಚ್ಛತೆಯಿಂದ ನಮ್ಮ ಮನಸ್ಸು ಯಾವಾಗಲೂ ಸಂತೋಷವಾಗಿರುತ್ತದೆ. ಗಿಡ ನೆಡುವುದರ ಮೂಲಕ ನಮ್ಮ ಪರಿಸರದಲ್ಲಿ ಆಮ್ಲಜನಕವನ್ನು ಹೆಚ್ಚಿಸಬಹುದು” ಎಂದು ಹೇಳಿದರು.ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿಯವರು ಮಾತನಾಡುತ್ತಾ“ ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯ, ಗಿಡ ನೆಡುವುದರ ಮೂಲಕ ಪರಿಸರವನ್ನು ರಕ್ಷಿಸಬೇಕು” ಎಂದು ಹೇಳಿದರು.ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲೊಲಿಟಾ ಡಿ’ಸಿಲ್ವಾ ಪರಿಸರ ದಿನದ ಆಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್‌ರವರು ಮಾತನಾಡಿ “ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕುಸಿಯುವುದು ಮತ್ತು ಕೃತಕ ಮಳೆಯಿಂದ ಸಾವು ನೋವು ಉಂಟಾಗುವುದು ಮರಗಳನ್ನು ಕಡಿಯುವುದರಿಂದ. ಮರಗಳ ನಾಶದಿಂದ ‘ಹಸಿರುಮನೆ ಪರಿಣಾಮ’ ಉಂಟಾಗಿ ದ್ರುವ ಪ್ರದೇಶಗಳ ಮಂಜು ಕರಗಿ ಸಮುದ್ರದ ನೀರಿನ ಮಟ್ಟಏರುವುದು” ಎಂದು ಹೇಳಿದರು. ವಿದ್ಯಾರ್ಥಿಗಳು ಕಾಲೇಜಿಗೆ ಗಿಡಗಳನ್ನು ವಿತರಿಸಿದರು.

ಸಂಸ್ಥೆಯ ಪಕ್ಕದಲ್ಲಿರುವ ರೋಟರಿ ಆಸ್ಪತ್ರೆ ಮಣಿಪಾಲಕ್ಕೆ ವಿದ್ಯಾರ್ಥಿಗಳು ಬೇಟಿಯಾಗಿ ಪರಿಸರ ರಕ್ಷಣೆಯ ಮಾಹಿತಿಯನ್ನು ನೀಡಿದರು. ಮಣಿಪಾಲ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಾ ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಗಿಡಗಳನ್ನು ನೆಡುವುದರ ಮೂಲಕ ಪರಿಸರ ರಕ್ಷಣೆಗೆ ಚಾಲನೆ ನೀಡಿದರು.

ಪ್ರೌಢಶಾಲಾ ವಿದ್ಯಾರ್ಥಿಗಳು ಸ್ವಾಗತಿಸಿದರು. ವಿದ್ಯಾರ್ಥಿನಿ ಜೈನಾಬ್ ಸ್ವಾಗತಿಸಿ, ಅನನ್ಯಾ ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು. ಆಯೆಷಾ ಮೆಹರಿನ್ ಕಾರ್ಯಕ್ರಮ ನಿರ್ವಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಸಿರು ದ್ರಾಕ್ಷಿಯ 6 ಮಹತ್ವದ ಆರೋಗ್ಯ ಲಾಭಗಳು!

ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯೊಂದಿಗೆ, ದ್ರಾಕ್ಷಿ ಹಣ್ಣು ಆರೋಗ್ಯಕ್ಕೆ ಅತ್ಯಂತ ಲಾಭದಾಯಕವೆಂಬುದು ತಜ್ಞರ ಅಭಿಪ್ರಾಯ. ಪೌಷ್ಟಿಕತೆಯಿಂದ ಸಮೃದ್ಧವಾಗಿರುವ ಈ ಹಣ್ಣು ದೇಹದ ವಿವಿಧ ಅಂಗಾಂಗಗಳಿಗೆ ಬಲ ನೀಡುತ್ತಿದ್ದು, ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿ.

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ತಿರುಗುಬಾಣ

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ನಗುಮುಖದ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿದೆ.

ಬೆವರಿಲ್ಲದೇ ಲಕ್ಷಾಂತರ ರೂಪಾಯಿ ಗಳಿಕೆ: ಮುಂಬೈನ ಆಟೋ ಚಾಲಕನ ಸ್ಮಾರ್ಟ್ ಐಡಿಯಾ

ಹೆಚ್ಚುವರಿ ಶ್ರಮವಿಲ್ಲದೇ ದುಡ್ಡು ಗಳಿಸುವವರ ಕಥೆಗಳು ಅಪರೂಪ, ಆದರೆ ಮುಂಬೈನ ಆಟೋ ಚಾಲಕನೊಬ್ಬ ತನ್ನ ಚತುರತನದಿಂದ ದಿನಕ್ಕೆ ಸಾವಿರಾರು ರೂ. ಗಳಿಸುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಗೂ ರೆರಾ ಕಡ್ಡಾಯ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಬಡಾವಣೆ ಅನುಮೋದನೆಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೆರಾ) ನೋಂದಣಿಯನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.