spot_img

ಕೆಮ್ಮಣ್ಣು ಶ್ರೀ ಮಾರಿಕಾಂಬ ಕುಣಿತ ಭಜನಾ ಮಂಡಳಿಯ ಶುಭಾರಂಭ

Date:

spot_img

ಉಡುಪಿ : ಉಡುಪಿಯ ಪುರಾತನ ಪ್ರಾಧಾನ್ಯ ಶಕ್ತಿಪೀಠವಾದ ಕೆಮ್ಮಣ್ಣು ಶ್ರೀ ಮಾರಿಕಾಂಬಾ ಭದ್ರಕಾಳಿ ಅಮ್ಮನವರ ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀ ಮಾರಿಕಾಂಬಾ ಮಕ್ಕಳ ಕುಣಿತ ಭಜನಾ ಮಂಡಳಿ ಎಂಬ ಹೆಸರಿನ ಭಜನಾ ಮಂಡಳಿಯು ಶುಭಾರಂಭವಾಯಿತು. ದೀಪ ಪ್ರಜ್ವಲಿಸಿ ಶ್ರೀ ದೇವರಿಗೆ ಕುಣಿತ ಭಜನಾ ಸೇವೆ ಮಾಡುವ ಮೂಲಕ ವಿಧ್ಯುಕ್ತವಾಗಿ ಆರಂಭವಾದ ಈ ಭಜನಾ ಮಂಡಳಿಯು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.

ಉಡುಪಿ ತಾಲೂಕು ಭಜನಾ ಪರಿಷತ್ತಿನ ನೇತೃತ್ವದಲ್ಲಿ ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ನುರಿತ ಶಿಬಿರಾರ್ಥಿಗಳಾಗಿ ತರಬೇತಿ ಪಡೆದವರು ಈ ‌ಭಜನಾ ಮಂಡಳಿಗೆ ತರಬೇತಿ ನೀಡಿ ಸಹಕರಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಭದ್ರಕಾಳಿ ಮಾರಿಕಾಂಬ ಅಮ್ಮನವರ ದೇವಸ್ಥಾನದ ಗೌರವಾಧ್ಯಕ್ಷರಾದ ಶ್ರೀ ಜಯಕೃಷ್ಣ.ಎ.ಶೆಟ್ಟಿ , ಅಧ್ಯಕ್ಷರಾದ ಶ್ರೀ ರಘುರಾಮ ಶೆಟ್ಟಿ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕಿನ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಂಡಾಡಿ , ಶ್ರೀ ಮಾರಿಕಾಂಬ ಕುಣಿತ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸದಾಶಿವ ಕೊಟ್ಯಾನ್, ಉಡುಪಿ ತಾಲೂಕು ಭಜನಾ ಪರಿಷತ್ತಿನ ಕೋಶಾಧಿಕಾರಿಯಾದ ಶ್ರೀಮತಿ ಪೂರ್ಣಿಮಾ , ಉಡುಪಿ ತಾಲೂಕು ಭಜನಾ ಪರಿಷತ್ತ್ ಹಾಗೂ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳಾದ ಶ್ರೀ ಗೋಕುಲದಾಸ್ ನಾಯಕ್, ಶ್ರೀ ಶಂಕರ ಆಚಾರ್ಯ, ಆಶಾ ಕುಂದರ್, ಜ್ಯೋತಿ , ಚೇತನ್, ಕೀರ್ತನ್, ಕೌಶಿಕ್, ಅಕ್ಷಯ್, ವಿಖ್ಯಾತ್, ಸುಶಾಂತ್, ಸುದೀಪ್, ದಿಲೀಪ್, ಅಮಿತ್, ಸಾತ್ವಿಕ್, ಸುದರ್ಶನ್, ಶ್ರಾವ್ಯ, ಅಶ್ವಿತಾ ಇವರೊಂದಿಗೆ ಊರಿನ ಗಣ್ಯರು , ಹಿರಿಯರು, ಮಕ್ಕಳ ಪೋಷಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದು ಭಜನಾ ಮಂಡಳಿಯ ಸರ್ವ ಸದಸ್ಯರಿಗೂ ಶುಭಹಾರೈಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪೋಷಕಾಂಶಗಳ ಆಗರ ಸೂರ್ಯಕಾಂತಿ ಬೀಜ : ಸೂರ್ಯಕಾಂತಿ ಬೀಜದ 7 ಅದ್ಭುತ ಲಾಭಗಳು

ಸೂರ್ಯಕಾಂತಿ ಬೀಜಗಳು (Sunflower Seeds) ವಿಟಮಿನ್ ಇ, ಪ್ರೋಟೀನ್, ಅಗತ್ಯವಾದ ಕೊಬ್ಬುಗಳು, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸತು ಮತ್ತು ಕಬ್ಬಿಣದಂತಹ ಪೋಷಕಾಂಶಗಳ ಆಗರವಾಗಿದೆ.

90ರ ದಶಕದ ಐಕಾನಿಕ್ ‘ಯೆಜ್ಡಿ ರೋಡ್‌ಸ್ಟರ್‌’ ಬೈಕ್ ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಎಂಟ್ರಿ: ಎದುರಾಳಿ ರಾಯಲ್ ಎನ್‌ಫೀಲ್ಡ್‌ಗೆ ನಡುಕ!

ಭಾರತದ ರಸ್ತೆಗಳಲ್ಲಿ 80 ಮತ್ತು 90ರ ದಶಕದಲ್ಲಿ ರಾಜನಂತೆ ಮೆರೆದಿದ್ದ ಐಕಾನಿಕ್ ಯೆಜ್ಡಿ ಬೈಕ್, ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಧರ್ಮಸಂರಕ್ಷಣೆಗಾಗಿ ಧರ್ಮಸ್ಥಳದಲ್ಲಿ ಯಾಗ: 3,000 ಭಕ್ತರೊಂದಿಗೆ ಆನಂದ ಗುರೂಜಿ ಪ್ರಾರ್ಥನೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಹಾಳು ಮಾಡಲು ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ, ಧರ್ಮಸಂರಕ್ಷಣೆಗಾಗಿ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ವಿಶೇಷ ಯಾಗವೊಂದು ನಡೆಯಿತು. ಮಹರ್ಷಿ ಆನಂದ ಗುರೂಜಿಯವರ ನೇತೃತ್ವದಲ್ಲಿ ಈ ಯಾಗವನ್ನು ನಡೆಸಲಾಯಿತು.

ಹೊಸದಿಲ್ಲಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ಹೊಸ ಮಾರ್ಗಸೂಚಿಗಳು: ಆಕ್ರಮಣಕಾರಿ ನಾಯಿಗಳಿಗೆ ಪ್ರತ್ಯೇಕ ಆಶ್ರಯ!

ದೆಹಲಿ-ಎನ್‌ಸಿಆರ್‌ನ ಬೀದಿ ನಾಯಿಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ಆಗಸ್ಟ್‌ 8ರ ತೀರ್ಪಿನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿ ಹೊಸ ಆದೇಶವನ್ನು ಹೊರಡಿಸಿದೆ.