spot_img

ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಪ್ರೌಢಶಾಲಾ ವಿಭಾಗದ ನೂತನ ಎನ್‌ಸಿಸಿ ನೇವಲ್ ಘಟಕ ಉದ್ಘಾಟನೆ

Date:

spot_img

ಹಿರಿಯಡ್ಕ : ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಇಲ್ಲಿಯ ಪ್ರೌಢಶಾಲಾ ವಿಭಾಗದ ನೂತನ ಎನ್‌ಸಿಸಿ ನೇವಲ್ ಘಟಕವನ್ನು ಎನ್ ಸಿ ಸಿ ನೆವೆಲ್ ಕಮಾಂಡರ್ ಶ್ರೀ ಅಶ್ವಿನ್ ಎಂ ರಾವ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ “ಸಂಘಟನೆ ಮತ್ತು ಶಿಸ್ತು ಎನ್‌ಸಿಸಿಯ ಮುಖ್ಯ ಧ್ಯೇಯ, ಎನ್‌ಸಿಸಿ ಸೇರುವುದರಿಂದ ಸಾಮಾಜಿಕವಾಗಿ, ರಾಷ್ಟ್ರೀಯವಾದಿಯಾಗಿ ದೇಶದ ಉತ್ತಮ ನಾಗರಿಕರಾಗಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮದಿಂದ ಉನ್ನತಿ ಸಾಧಿಸಬಹುದು” ಎಂದು ಹೇಳಿದರು.

ಕೃಷಿ ಅರ್ಥಶಾಸ್ತ್ರಜ್ಞರಾದ ಡಾ ಎನ್‌ ಎಸ್‌ ಶೆಟ್ಟಿ ಅವರು ಮಾತನಾಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನೂತನ ಎನ್ಎಸ್ಎಸ್ ಘಟಕ ಆರಂಭವಾಗಿರುವುದು ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚು ಶಿಸ್ತು ಮೂಡಿಸಲು , ದೇಶಾಭಿಮಾನ ಬೆಳೆಸಲು ಅನುಕೂಲಕರವಾಗಲಿದೆ ಎಂದರು.

ನೆವೆಲ್ ಕಮಾಂಡಿಂಗ್ ಆಫೀಸರ್ ಶ್ರೀ ಅಶ್ವಿನಿ ಎಂ ರಾವ್ ಇವರು ಎನ್ ಸಿ ಸಿ ದ್ವಜವನ್ನು ಸಂಸ್ಥೆಗೆ ಹಸ್ತಾಂತರಿಸಿದರು‌. ನೆವೆಲ್ ಕಮಾಂಡರ್ ಶ್ರೀ ಎಂ ಎ ಮುಲ್ತಾನಿ ಮತ್ತು ಪಿ ಐ ಸ್ಟಾಪ್ ಶ್ರೀ ಅನಿಲ್ ದಾಸ್ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿರುವ ಈ ಸಂಸ್ಥೆಯಲ್ಲಿ ಎನ್ ಸಿ ಸಿ ಘಟಕ ಆರಂಭವಾಗಲು ಸಹಕರಿಸಿದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು, ಹಳೆ ವಿದ್ಯಾರ್ಥಿ ಸೈನಿಕರಾದ ಶ್ರೀ ಹರಿಕೃಷ್ಣ ಇವರನ್ನು ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಎಲ್ ವಿಶ್ವಾಸ್, ಸದಸ್ಯರಾದ ಶ್ರೀ ಅಶೋಕ್ ಜೋಗಿ ,ಶ್ರೀ ಮುರಳಿಧರ ಹಾಲಂಬಿ, ಶ್ರೀ ನಿತ್ಯಾನಂದ ನಾಯಕ್,ಶ್ರೀ ವಿಜಯಶೆಟ್ಟಿ , ಶ್ರೀಮತಿ ಜ್ಯೋತಿ ಪ್ರಭು ,ಶ್ರೀ ದೇವರಾಜ್ ಶಾಸ್ತ್ರಿ ,ಶ್ರೀಮತಿ ಲಕ್ಷ್ಮಿ ಶೆಟ್ಟಿಗಾರ್, ಶ್ರೀಮತಿ ನಿಷಿತಾ ಶೆಟ್ಟಿ , ಶ್ರೀಮತಿ ಸುಬ್ರಮ್ಮಣ್ಯ ರಾವ್ ಉಪಸ್ಥಿತರಿದ್ದರು.‌

ಹಿರಿಯ ಅಧ್ಯಾಪಕರಾದ ಶ್ರೀ ವಿಜಯ್ ಕುಮಾರ್ ಸ್ವಾಗತಿಸಿ, ಎನ್‌ಸಿಸಿ ಘಟಕದ ಉಸ್ತುವಾರಿ ಉಪನ್ಯಾಸಕರಾದ ಶ್ರೀ ಮಹೇಶ್ ಕೊಟಾರಿ ವಂದಿಸಿದರು. ಅಧ್ಯಾಪಕರಾದ ಶ್ರೀ ರವೀಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹಣ್ಣಿನ ಗಿಡ ನೆಡುವುದರ ಮೂಲಕ ನೂತನ ಘಟಕಕ್ಕೆ ನೆವೆಲ್ ಕಮಾಂಡಿಂಗ್ ಆಫೀಸರ್ ಶ್ರೀ ಅಶ್ವಿನಿ ಎಂ ರಾವ್ ಇವರು ಚಾಲನೆ ನೀಡಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಕ್ಷೇ. ಧ. ಗ್ರಾ ಯೋಜನೆ (ರಿ )ಬಿಸಿ ಟ್ರಸ್ಟ್ ಕಾರ್ಕಳದ ಶೌರ್ಯ ವಿಪತ್ತು ನಿರ್ವಹಣಾ ಪಳ್ಳಿ ಘಟಕದ ವತಿಯಿಂದ “ಪರಿಸರ ಮಾಹಿತಿ ಮತ್ತು ಗಿಡ ನಾಟಿ” ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಬಿಸಿ ಟ್ರಸ್ಟ್ ಕಾರ್ಕಳ ಇದರ ಶೌರ್ಯ ವಿಪತ್ತು ನಿರ್ವಹಣಾ ಪಳ್ಳಿ ಘಟಕದ ವತಿಯಿಂದ "ಪರಿಸರ ಮಾಹಿತಿ ಮತ್ತು ಗಿಡ ನಾಟಿ" ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಪಳ್ಳಿಯಲ್ಲಿ ನಡೆಸಲಾಯಿತು.

ಉಡುಪಿಯ ನೂತನ ಎಸ್ಪಿಗೆ ಮಹೇಶ್ ಮರ್ಣೆಯವರಿಂದ ಕಲಾತ್ಮಕ ಗೌರವ

ಉಡುಪಿಯ ನೂತನ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುವ ಹರಿರಾಮ್ ಶಂಕರ್ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಹೇಶ್ ಮರ್ಣೆಯವರು ಅಶ್ವತ್ಥ ಎಲೆಯಲ್ಲಿ ಸ್ವಯಂ ರಚಿಸಿದ ಭಾವಚಿತ್ರವೊಂದನ್ನು ಎಸ್ಪಿ ಅವರಿಗೆ ನೀಡಿ ಗೌರವಿಸಿದರು.

ಕಾರ್ಕಳ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು: ಅರ್ಧ ಗಂಟೆಯೊಳಗೆ ಸ್ಕೂಟರ್ ಮಾಯ

ಕಾರ್ಕಳ ನಗರದ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದನ್ನು ಕಳ್ಳತನಗೈದಿರುವ ಘಟನೆ ಜೂನ್ 13 ರಂದು ನಡೆದಿದೆ.

ಹಿರಿಯಡ್ಕದ ದೇವಾಡಿಗರ ಸಂಘದಲ್ಲಿ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಸಮಾರಂಭ – 2025

ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು – ಉಪಸಂಘ ಹಿರಿಯಡ್ಕದ ಆಶ್ರಯದಲ್ಲಿ ಜೂನ್ 29, 2025 ಭಾನುವಾರ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಸಮಾರಂಭ ಜರುಗಲಿದೆ.