
ಕಾರ್ಕಳ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ.), ಬೆಂಗಳೂರು ಇದರ ಕಾರ್ಕಳ – ಹೆಬ್ರಿ ತಾಲೂಕು ಘಟಕದ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇಂದು, ಫೆಬ್ರವರಿ 11ರ ಬುಧವಾರದಂದು ನಡೆಯಲಿದೆ.
ಸಮಯ ಮತ್ತು ಸ್ಥಳ:
ಸಾಯಂಕಾಲ 5.00 ಗಂಟೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಕಾರ್ಯಕ್ರಮವು ಜರುಗಲಿದೆ.
ಉದ್ಘಾಟನೆ ಮತ್ತು ಅಧ್ಯಕ್ಷತೆ:
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಜಿ.ಎಂ.ರಾಜಶೇಖರ್ ಅವರು ಸಂಘದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕಾರ್ಕಳ – ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಕು. ನಳಿನಿ ಎಸ್. ಸುವರ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳು:
ಕಾರ್ಯಕ್ರಮದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಉದಯ ಶೆಟ್ಟಿ ಮುನಿಯಾಲು, ಕಾರ್ಕಳದ ಉದ್ಯಮಿ ಮತ್ತು ಸಮಾಜ ಸೇವಕ ಶ್ರೀ ಪ್ರಶಾಂತ್ ಕಾಮತ್ ಬೋಳ, ಬೆಂಗಳೂರಿನ ಫೆಡರೇಷನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರು ಹಾಗೂ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಮತ್ತು ಕಾರ್ಕಳ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧ್ಯಕ್ಷರಾದ ಶ್ರೀಮತಿ ಮಿತ್ರ ಪ್ರಭಾ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗಣ್ಯರ ಉಪಸ್ಥಿತಿ:
ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೃಷ್ಣಪ್ಪ, ರಾಜ್ಯ ಕಾರ್ಯದರ್ಶಿ ಶ್ರೀ ವಸಂತ್ ಕುಮಾರ್, ರಾಜ್ಯ ಕೋಶಾಧಿಕಾರಿ ಶ್ರೀ ಮಂಜುನಾಥ್ ಅಜ್ಜಂಪುರ ಹಾಗೂ ಉಡುಪಿ ಜಿಲ್ಲಾಧ್ಯಕ್ಷರು ಮತ್ತು ಪಬ್ಲಿಕ್ ಫೈಲ್ ಪತ್ರಿಕೆಯ ಸಂಪಾದಕರಾದ ಶ್ರೀ ಎಂ.ಎನ್.ಕೊಟ್ಟಾರಿ ಅವರು ಉಪಸ್ಥಿತರಿರುವರು.
ಸಂಘದ ನೂತನ ಪದಾಧಿಕಾರಿಗಳ ವಿವರ:
ಸಮಾರಂಭದಲ್ಲಿ ಈ ಕೆಳಗಿನ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದಾರೆ:
- ಗೌರವಾಧ್ಯಕ್ಷರು: ಶ್ರೀ ವಾಸುದೇವ ಭಟ್ ನೆಕ್ಕರಪಲ್ಕೆ (ಎನ್.ಪಿ ನ್ಯೂಸ್), ಶ್ರೀ ಬಾಲಕೃಷ್ಣ ಭೀಮಗುಳಿ (ಕರಾವಳಿ ನಾಡಿ)
- ಸಂಚಾಲಕರು: ಶ್ರೀ ಶರತ್ ಭಟ್ ಕಾನಂಗಿ (ಮಾಧ್ಯಮ ಬಿಂಬ)
- ಕಾರ್ಯದರ್ಶಿ: ಶ್ರೀ ರಂಜಿತ್ ಶಿರ್ಲಾಲು (ಮಾಧ್ಯಮ ಅಂಬ)
- ಉಪಾಧ್ಯಕ್ಷರು: ಶ್ರೀ ಪ್ರಮೋದ್ ಚಂದ್ರ ಪೈ ಮತ್ತು ಶ್ರೀ ಇಯ್ತಿಯಾಜ್ ಕಾರ್ಕಳ (ಸ್ವಯಂ ಟೈಮ್ಸ್)
- ಕೋಶಾಧಿಕಾರಿ: ಶ್ರೀ ಶಶಿಕಾಂತ್ (ಸ್ವಯಂ ಟೈಮ್ಸ್), ಶ್ರೀ ಮಂಜೇಶ್ ಶೆಟ್ಟಿ (ನಮ್ಮ ಕಾರ್ಲ)
- ಸಂಘಟನಾ ಕಾರ್ಯದರ್ಶಿ: ಶ್ರೀ ಸಂಪತ್ (ನಮ್ಮ ಕಾರ್ಲ)
- ಗೌರವ ಸಲಹೆಗಾರರು: ಶ್ರೀಮತಿ ರಾಧಿಕಾ (ಕರಾವಳಿ ವೈವಿಧ್ಯ), ಶ್ರೀ ಅಬುಬಕ್ಕರ್ (ಮೀಡಿಯಾ ಐ), ಶ್ರೀ ಅವಿಲ್ (ನಮ್ಮ ಕಾರ್ಲ), ಶ್ರೀ ಧೀರಜ್ ಶಕ್ತಿನಗರ (ಎನ್.ಪಿ ನ್ಯೂಸ್)
- ಸದಸ್ಯರು: ಶ್ರೀ ಸೀತಾರಾಮ್ ಸಾಣೂರು (ತುಳುನಾಡು ವಾರ್ತೆ), ಶ್ರೀಮತಿ ಸೌಮ್ಯ ಶೆಟ್ಟಿ (ಎನ್.ಪಿ ನ್ಯೂಸ್), ಶ್ರೀಮತಿ ನಿಶ್ಮಿತಾ ಶೆಟ್ಟಿ (ಎನ್.ಪಿ ನ್ಯೂಸ್), ಕು. ಅಶ್ವಿನಿ ಹೆಚ್ (ಕರಾವಳಿ ನಾಡಿ), ಶ್ರೀ ಸಚಿನ್ (ಕರಾವಳಿ ನಾಡಿ), ಶ್ರೀ ಶರತ್ (ನ್ಯೂಸ್ ಕಾರ್ಕಳ).
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸರ್ವರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ.



































