spot_img

ಹಿಂಸೆ-ಕೋಮುತ್ವದ ಆರೋಪ: ದಕ್ಷಿಣ ಕನ್ನಡದ 36 ಜನರಿಗೆ ಗಡೀಪಾರು

Date:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂವೇದನೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ಇಲಾಖೆಯು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, ಹಿಂದೂ ಮತ್ತು ಮುಸ್ಲಿಂ ಸಮುದಾಯದ ಕೆಲ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ ಒಟ್ಟು 36 ಜನರನ್ನು ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ.

ಯಾರೆಲ್ಲಾ ಗಡೀಪಾರು ಪಟ್ಟಿಯಲ್ಲಿದ್ದಾರೆ?

ಪೊಲೀಸರು ಗಡೀಪಾರಿಗೆ ಶಿಫಾರಸು ಮಾಡಿದ ವ್ಯಕ್ತಿಗಳು ಮತ್ತು ಅವರ ಠಾಣಾ ವ್ಯಾಪ್ತಿಯ ವಿವರ ಹೀಗಿದೆ:

  • ಬಂಟ್ವಾಳ ನಗರ ಠಾಣೆ: ಹಸೈನಾರ್ (46), ಮಹಮ್ಮದ್ ಸಫಾನ್ (26), ರಾಜು (ರಾಜೇಶ್) (35)
  • ಬಂಟ್ವಾಳ ಗ್ರಾಮಾಂತರ: ಭರತ್ ರಾಜ್ (ಭರತ್ ಕುಮ್ಡೇಲು) (38), ಪವನ್ ಕುಮಾರ್ (33), ಚರಣ್ (ಚರಣ್ ರಾಜ್) (28), ಅಬ್ದುಲ್ ಲತೀಫ್ (40), ಮಹಮ್ಮದ್ ಅಶ್ರಫ್ (44), ಮೊಯ್ದಿನ್ ಅಮ್ನಾನ್ (ಅದ್ದು) (24)
  • ವಿಟ್ಲ ಠಾಣೆ: ಗಣೇಶ (ಗಣೇಶ ಪೂಜಾರಿ) (35), ಅಬ್ದುಲ್ ಖಾದರ್ (ಸೌಕತ್) (34), ಚಂದ್ರಹಾಸ (23)
  • ಪುಂಜಾಲಕಟ್ಟೆ ಠಾಣೆ: ಭುವಿ (ಭುವಿತ್ ಶೆಟ್ಟಿ) (35)
  • ಬೆಳ್ತಂಗಡಿ ಠಾಣೆ: ಮಹೇಶ್ ಶೆಟ್ಟಿ (ತಿಮರೋಡಿ) (53), ಅಶ್ರಫ್ (ಗರಗಸ ಅಶ್ರಫ್) (43), ಮನೋಜ್ ಕುಮಾರ್ (37)
  • ಪುತ್ತೂರು ನಗರ: ಅರುಣ್ ಕುಮಾರ್ ಪುತ್ತಿಲ (54), ಹಕೀಮ್ ಕೂರ್ನಡ್ಕ (38), ಅಜಿತ್ ರೈ (39), ಮನೀಶ್ ಎಸ್. (34), ಅಬ್ದುಲ್ ರಹಿಮಾನ್ (38), ಕೆ. ಅಝೀಜ್ (48)
  • ಪುತ್ತೂರು ಗ್ರಾಮಾಂತರ: ಕಿಶೋರ್ (34), ರಾಕೇಶ್ ಕೆ. (30), ನಿಶಾಂತ್ ಕುಮಾರ್ (22)
  • ಕಡಬ ಠಾಣೆ: ಮಹಮ್ಮದ್ ನವಾಝ್ (32)
  • ಉಪ್ಪಿನಂಗಡಿ ಠಾಣೆ: ಸಂತೋಷ್ ಕುಮಾರ್ ರೈ (ಸಂತು) (35), ಜಯರಾಮ (25), ಸಂಶುದ್ದೀನ್ (36), ಸಂದೀಪ (24), ಮಹಮ್ಮದ್ ಶಾಕಿರ್ (35), ಅಬ್ದುಲ್ ಅಝೀಜ್ (ಕರಾಯ ಅಝೀಜ್) (36)
  • ಸುಳ್ಯ ಠಾಣೆ: ಲತೇಶ್ ಗುಂಡ್ಯ (32), ಮನೋಹರ (ಮನು) (32)
  • ಬೆಳ್ಳಾರೆ ಠಾಣೆ: ಪ್ರಸಾದ್ (35), ಶಮೀರ್ ಕೆ. (38)

ಚಿಕ್ಕಮಗಳೂರಿನಲ್ಲಿ 4 ಜನರಿಗೆ ಗಡೀಪಾರು

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಮತ್ತು ತರೀಕೆರೆ ತಾಲೂಕುಗಳ 4 ಜನರನ್ನು ಗಡೀಪಾರು ಮಾಡಲು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಆದೇಶಿಸಿದ್ದಾರೆ. ಇವರಲ್ಲಿ:

  • ಫೈಜುಲ್ಲಾ ಷರೀಫ್ (ಹಿಳುವಳ್ಳಿ ಇಂದಿರಾ ನಗರ)
  • ಪ್ರದೀಪ್ (ಮೇಗರಮಕ್ಕಿ ಕಿಚ್ಚಬ್ಬಿ)
  • ಮನೋ ರಂಜನ್ (ನೇಮನಹಳ್ಳಿ)
  • ಮೌಂಟ್ಬ್ಯಾಟನ್ (ಎಂ.ಸಿ. ಹಳ್ಳಿ, ತರೀಕೆರೆ)

ಇವರ ಮೇಲೆ 5 ರಿಂದ 8 ಪ್ರಕರಣಗಳು ದಾಖಲಾಗಿವೆ. ಅಶಾಂತಿ ಸೃಷ್ಟಿಸುವ ಸಾಧ್ಯತೆ ಇರುವುದರಿಂದ, ಪೊಲೀಸ್ ವರದಿಯ ಆಧಾರದ ಮೇಲೆ ಇವರನ್ನು 6 ರಿಂದ 8 ತಿಂಗಳ ಕಾಲ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಸಿರು ದ್ರಾಕ್ಷಿಯ 6 ಮಹತ್ವದ ಆರೋಗ್ಯ ಲಾಭಗಳು!

ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯೊಂದಿಗೆ, ದ್ರಾಕ್ಷಿ ಹಣ್ಣು ಆರೋಗ್ಯಕ್ಕೆ ಅತ್ಯಂತ ಲಾಭದಾಯಕವೆಂಬುದು ತಜ್ಞರ ಅಭಿಪ್ರಾಯ. ಪೌಷ್ಟಿಕತೆಯಿಂದ ಸಮೃದ್ಧವಾಗಿರುವ ಈ ಹಣ್ಣು ದೇಹದ ವಿವಿಧ ಅಂಗಾಂಗಗಳಿಗೆ ಬಲ ನೀಡುತ್ತಿದ್ದು, ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿ.

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ತಿರುಗುಬಾಣ

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ನಗುಮುಖದ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿದೆ.

ಬೆವರಿಲ್ಲದೇ ಲಕ್ಷಾಂತರ ರೂಪಾಯಿ ಗಳಿಕೆ: ಮುಂಬೈನ ಆಟೋ ಚಾಲಕನ ಸ್ಮಾರ್ಟ್ ಐಡಿಯಾ

ಹೆಚ್ಚುವರಿ ಶ್ರಮವಿಲ್ಲದೇ ದುಡ್ಡು ಗಳಿಸುವವರ ಕಥೆಗಳು ಅಪರೂಪ, ಆದರೆ ಮುಂಬೈನ ಆಟೋ ಚಾಲಕನೊಬ್ಬ ತನ್ನ ಚತುರತನದಿಂದ ದಿನಕ್ಕೆ ಸಾವಿರಾರು ರೂ. ಗಳಿಸುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಗೂ ರೆರಾ ಕಡ್ಡಾಯ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಬಡಾವಣೆ ಅನುಮೋದನೆಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೆರಾ) ನೋಂದಣಿಯನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.