spot_img

ಕರಕರಿ ಫ್ರೆಂಡ್ಸ್ ಸೇವಾ ಬಳಗ ಸಂಸ್ಥೆಯ ವತಿಯಿಂದ ಸನ್ಮಾನ ಕಾರ್ಯಕ್ರಮ

Date:

ಕಾರ್ಕಳ: ಭಾರತೀಯ ಸೇನೆಗೆ ಕಾರ್ಕಳದ ಬೈಲೂರಿನ ಯುವಕ, ಕೌಡೂರು ಗ್ರಾಮದ ಸುಧಾಕರ ಆಚಾರ್ಯ ಮತ್ತು ಶ್ರೀಮತಿ ವೀಣಾ ದಂಪತಿಗಳ ಪುತ್ರರಾದ ಸಾಗರ್‌ ಆಚಾರ್ಯ ಇವರು ಅಗ್ನಿಪಥ್‌ ಯೋಜನೆಯಲ್ಲಿ ಆಯ್ಕೆಯಾಗಿ ಬೆಂಗಳೂರಿನ ಸೆಂಟರ್‌ನಲ್ಲಿ ತರಬೇತಿ ಪಡೆದು ಇದೀಗ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿಭಾಯಿಸಲು ತೆರಳುತ್ತಿರುವ ಇವರನ್ನು ಹಾಗೂ
2024/2025ನೇ ಸಾಲಿನ SSLC ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಣಂಜಾರಿನ ಶ್ರೀಮತಿ ಶಾಂತಿ ಮತ್ತು ಜನಾರ್ದನ್ ಕಾಮತ್ ದಂಪತಿಗಳ ಪುತ್ರಿ ಕು! ಸ್ವಸ್ತಿ ಕಾಮತ್ ಇವರನ್ನು
ಕರಕರಿ ಫ್ರೆಂಡ್ಸ್ ಸೇವಾ ಬಳಗ ಸಂಸ್ಥೆಯ ಗೌರವ ಸಲಹೆಗಾರರಾದ ವಕೀಲರಾದ ಸದಾನಂದ್ ಸಾಲ್ಯಾನ್, ದೈಹಿಕ ಶಿಕ್ಷಕರಾದ ಆನಂದ್ ಮಾಸ್ಟರ್ ರವರ ಗೌರವ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸೌಮ್ಯ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಮಾಸ್ಟರ್ ಮತ್ತು ಸನ್ಮಾನಿತರ ಪೋಷಕರು ಹಾಗೂ ಪದಾಧಿಕಾರಿಗಳು, ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ಗೌರವ ಸಲಹೆ ಗಾರರಾದ ಆನಂದ್ ಮಾಸ್ಟರ್ ರವರು ಇಬ್ಬರಿಗೂ ಮುಂದಿನ ಭವಿಷ್ಯ ಉಜ್ವಲ ವಾಗಿರಲೆಂದು ಶುಭ ಹಾರೈಸಿದರು

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಸೈಬರ್ ಕಿರುಕುಳ ವಿರೋಧ ದಿನ

ಈ ದಿನವನ್ನು 2012ರಲ್ಲಿ ಬ್ರಿಟನ್‌ನ The Cybersmile Foundation ಪ್ರಾರಂಭಿಸಿದ್ದು, ಇತ್ತೀಚಿನ ದಶಕದಲ್ಲಿ ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗಿರುವಾಗ ಆನ್‌ಲೈನ್ ಕಿರುಕುಳದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವಿದೆ.

ಉಡುಪಿ ಜಿಲ್ಲೆಯಲ್ಲಿ ನಾಳೆ (ಜೂನ್ 17) ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆಯು ಕೆಂಪು ಎಚ್ಚರಿಕೆ (Red Alert) ಜಾರಿ ಮಾಡಿದೆ

ದೇಹದ ಪ್ರತಿಯೊಂದು ಅಂಗ ಶುದ್ಧಗೊಳಿಸುವ ಆಹಾರ ಪದಾರ್ಥಗಳು

ನಿತ್ಯ ಆಹಾರದಲ್ಲಿ ಕೆಲವೊಂದು ಖಾದ್ಯಗಳನ್ನು ಸೇರಿಸಿಕೊಂಡರೆ, ದೇಹವನ್ನು ಒಳಗಿನಿಂದ ಶುದ್ಧಗೊಳಿಸಬಹುದಾಗಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಿದ್ದಾರೆ.

ಹನಿಟ್ರ್ಯಾಪ್ ಗೆ ಪೋಲೀಸ್ ಬೆಂಬಲ? – ಪಿರಿಯಾಪಟ್ಟಣದಲ್ಲಿ ಬಟ್ಟೆ ವ್ಯಾಪಾರಿಗೆ 10 ಲಕ್ಷಕ್ಕೆ ಡಿಮಾಂಡ್

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಬಟ್ಟೆ ವ್ಯಾಪಾರಿಯೊಬ್ಬರಿಗೆ ಹನಿಟ್ರ್ಯಾಪ್ ಬಲೆ ಬೀಸಿ ಹಣಕ್ಕೆ ಬೇಡಿಕೆ ಇಟ್ಟ ಅಪರಾಧಿಗಳ ಗುಂಪು ಪತ್ತೆಯಾಗಿದ್ದು, ಅವರ ಬಂಧನದ ಮೂಲಕ ಈ ಸುದ್ದಿಯು ಚರ್ಚೆಯ ವಿಷಯವಾಗಿದೆ.