
ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಇದಕ್ಕೆ ಹೊಣೆ ಯಾರು ??
ಕಾರ್ಕಳ : ಕಾರ್ಕಳ ತಾಲೂಕಿನ ಶಿರ್ಲಾಲು ಜಯಶ್ರೀ ಅವರ ಮನೆಗೆ ನುಗ್ಗಿ ಮಾರಕಾಸ್ತ್ರವನ್ನು ತೋರಿಸಿ ಹಟ್ಟಿಯಿಂದ ಗೋಕಳ್ಳತನ ಮಾಡಿದ ಘಟನೆ ನಡೆದಿದೆ. ನಾವು ಇಂದು ಎಂಥಹ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ ಎಂಬುವುದನ್ನು ಯೋಚಿಸಬೇಕು, ತಮ್ಮ ಜೀವನೋಪಾಯಕ್ಕಾಗಿ ಹಸುಗಳನ್ನು ಸಾಕಿ ಜೀವನ ನಡೆಸುವವರ ಮೇಲೆ ಈ ರೀತಿಯ ಕ್ರೌರ್ಯ ಹಾಗೂ ದಬ್ಬಾಳಿಕೆ ಅತೀರೇಖದ ಪರಮಾವದಿ! ಹೀಗಾದರೆ ಹಿಂದೂ ಸಮಾಜದ ಅಮಾಯಕ ತಾಯಂದಿರ ಕಥೆ ಏನು ? ಕರಾವಳಿಯಲ್ಲಿ ಸೌಹಾರ್ದತೆ ಬೇಕು ಹೇಳುವ ಬುದ್ಧಿ ಜೀವಿಗಳು ಈಗ ಎಲ್ಲಿ ಮರೆಯಾಗಿದ್ದೀರಿ ? ರಾಜಕೀಯ ಬೇಳೆ ಬೇಯಿಸಿಕೊಳ್ಳುವವರು ದಯವಿಟ್ಟು ಈ ಘಟನೆಯಲ್ಲಿ ಸ್ವಾರ್ಥ ಮರೆತು ಹಿಂದೂ ಸಮಾಜದ ತಾಯಿಗೆ ನ್ಯಾಯ ಕೊಡಿಸಿ ಇಲ್ಲವಾದಲ್ಲಿ ಹಿಂದೂ ಸಮಾಜ ಮುಂದೆ ನಿಂತು ನ್ಯಾಯಕ್ಕಾಗಿ ಪ್ರತಿಭಟನೆಗೆ ಸಿದ್ದರಾಗಬೇಕಾದೀತು. ಸಂಬಂಧ ಪಟ್ಟ ಅಧಿಕಾರಿಗಳು ಸಮಾಜದಲ್ಲಿ ಶಾಂತಿ ಕದಡುವವರ ಮೇಲೆ ಶ್ರೀಘ್ರ ಕ್ರಮ ಜರುಗಿಸಿ , ಆ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾಗಿ ನಿಮ್ಮಲ್ಲಿ ಆಗ್ರಹಿಸುತ್ತಿದ್ದೇನೆ ಎಂದು ಸಾಮಾಜಿಕ ಚಿಂತಕಿಯಾದ ರಮಿತಾ ಶೈಲೇಂದ್ರರವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
































