spot_img

ಕಾರ್ಕಳ LAMPS ಚುನಾವಣೆ ವಿವಾದ: ಸಮಬಲ ಮತ, ಆದರೆ ಏಕಪಕ್ಷೀಯ ಆಯ್ಕೆ!

Date:

ಕಾರ್ಕಳ: ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ವಿವಿದ್ದೋದ್ದೇಶ ಸಹಕಾರಿ ಸಂಘ (LAMPS)ನ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಲ್ಲಿ ಪ್ರಬಲ ವಿವಾದ ಸೃಷ್ಟಿಯಾಗಿದೆ. ಜನವರಿ 31ರಂದು ನಡೆದ ನಿರ್ದೇಶಕರ ಚುನಾವಣೆಯ ಬಳಿಕ, ಫೆಬ್ರವರಿ 11ರಂದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಆದರೆ, ಚುನಾವಣೆ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳು ಎದ್ದಿವೆ.ಈ ಚುನಾವಣೆಯಲ್ಲಿ ಹತ್ತು ಮಂದಿ ನಿರ್ದೇಶಕರು ಮತ್ತು ಮೂರು ಮಂದಿ ಅಧಿಕಾರಿಗಳಿಗೆ ಮತ ಚಲಾಯಿಸುವ ಹಕ್ಕು ಇರುತ್ತದೆ. ಒಟ್ಟು ಹದಿಮೂರು ಮತಗಳು.
ಪ್ರತಿಭಟನಾಕಾರರ ಹೇಳಿಕೆಯಂತೆ ಅಧ್ಯಕ್ಷರ ಚುನಾವಣೆಯಲ್ಲಿ ಇಬ್ಬರು ಸ್ಪರ್ಧಿಗಳು ತಲಾ 6-6 ಮತ ಪಡೆದು ಸಮಬಲ ಸಾಧಿಸಿದರೆ, ಒಂದು ಮತ ಅಸಿಂಧು ಎಂದು ಘೋಷಿಸಲಾಯಿತು. ಪ್ರಕ್ರಿಯೆಯಲ್ಲಿಯೇ ಗೊಂದಲ ಉಂಟಾಗಿದ್ದು, ಯಾವುದೇ ಪರ್ಯಾಯ ವಿಧಾನ ಅಳವಡಿಸದೆ, ಚುನಾವಣಾಧಿಕಾರಿಗಳು ಏಕಪಕ್ಷೀಯವಾಗಿ ರಾಘವ ನಾಯ್ಕ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇದನ್ನು ಖಂಡಿಸಿ ನಾವು ಲಿಖಿತ ರೂಪದಲ್ಲಿ ದೂರು ನೀಡಿದರೂ ಅದನ್ನು ಸ್ವೀಕರಿಸಲಿಲ್ಲ. ಚುನಾವಣೆಯ ವೇಳೆಯಲ್ಲಿ ಸಿ ಸಿ ಕ್ಯಾಮರಾ ಪೊಲೀಸ್ ವ್ಯವಸ್ಥೆ ಯಾವುದು ಇರಲಿಲ್ಲ. ಬ್ಯಾಂಕ್ ನ CEO ಅಸಿಂಧು ಎಂದು ಘೋಷಿಸಿದರು. ಚುನಾವಣಾಧಿಕಾರಿಯಾದ ರೋಹಿತ್ ರವರಲ್ಲಿ ನಾವು ಪ್ರಶ್ನಿಸಿದ್ದಕ್ಕೆ ಅವರು ಚುನಾವಣಾಧಿಕಾರಿ ನಾನೋ ಅಥವಾ ನೀವೋ ಎಂಬ ಬೇಜವಾಬ್ಧಾರಿತನದ ಉತ್ತರವನ್ನು ನೀಡಿದರು ಮತ್ತು ನಿಮ್ಮ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೀರಿ ಎಂದು ದೂರು ದಾಖಲಿಸಲಾಗುವುದು ಎಂದು ಬೆದರಿಸಿದ್ದಾರೆ.
ಇಲ್ಲಿ ಚುನಾವಣೆಗೆ ಅವಕಾಶವಿರುವುದು ಪರಿಶಿಷ್ಟ ವರ್ಗಗಳಾದ ಮಲೆಕುಡಿಯ ,ಕೊರಗ,ಮರಾಠಿ ಸಮುದಾಯದವರಿಗೆ. ಈ ರೀತಿ ಅವರ ಮೇಲೆ ದಬ್ಬಾಳಿಕೆ ನಡೆಸಿ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವನ್ನು ಚುನಾವಣಾಧಿಕಾರಿ ಮಾಡಿರುತ್ತಾರೆ. ನಾವು ಇದರ ಬಗ್ಗೆ ಎ . ಆರ್ ಮತ್ತು ಡಿ . ಆರ್ ರವರಿಗೆ ದೂರು ನೀಡಿದರೂ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.
ಇಂದು ಮೊದಲ ಸಾಮಾನ್ಯ ಸಭೆಯಾಗಿದ್ದು ನಾವು ನಿರ್ದೇಶಕ ಸದಸ್ಯರುಗಳು ಸಾಮಾನ್ಯ ಸಭೆಗೆ ಭಾಗವಹಿಸದೆ ಪ್ರತಿಭಟನೆ ನಡೆಸುತ್ತಿದ್ದೇವೆ. ನಮಗೆ ಸರಿಯಾದ ನ್ಯಾಯ ನೀಡಬೇಕು. ಚುನಾವಣೆಯನ್ನು ನಾಣ್ಯ ಚಿಮ್ಮಿಸುವುದರ ಮೂಲಕ ಅಥವಾ ಚೀಟಿ ಎತ್ತುವುದರ ಮೂಲಕ ನಡೆಸಲಿ. ಅದನ್ನು ಹೊರತು ಪಡಿಸಿ ಏಕ ಪಕ್ಷೀಯವಾಗಿ ಆಯ್ಕೆ ಮಾಡಿರುವುದು ನ್ಯಾಯ ಸಮ್ಮತವಲ್ಲ.ಡಿ. ಆರ್ ರವರು ಮದ್ಯ ಪ್ರವೇಶಿಸಿ ಮರು ಚುನಾವಣೆ ನಡೆಸಬೇಕಾಗಿ ನಾವು ಅವರಲ್ಲಿ ವಿನಂತಿಸುತ್ತಿದ್ದೇವೆ.ಇಲ್ಲವಾದಲ್ಲಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡಿ.ಕೆ.ಶಿವಕುಮಾರ್ ಭೇಟಿಯಾದ ರಾಕಿ ರೈ: ಮುತ್ತಪ್ಪ ರೈ ಪುತ್ರನ ರಾಜಕೀಯ ನಂಟು ?

ಅಂಡರ್‌ವಲ್ಡ್ ಹಿನ್ನೆಲೆ ಹೊಂದಿದ್ದ ಮಾಜಿ ಡಾನ್ ಮುತ್ತಪ್ಪ ರೈ ಅವರ ಹಿರಿಯ ಪುತ್ರ ರಾಕಿ ರೈ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಖಾಸಗಿ ಭೇಟಿಗೆ ಆಗಮಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ದಿನಕ್ಕೆ ಒಂದು ಲೋಟ ಹಾಲು: ಆರೋಗ್ಯಕ್ಕೆ ಹತ್ತಿರದ ಅಮೃತ!

ಅತ್ಯಮೂಲ್ಯ ಪೋಷಕಾಂಶಗಳಿಂದ ತುಂಬಿರುವ ಹಾಲು, ನಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ಅಮೃತತುಲ್ಯ ಪಾನೀಯ.

ಗರ್ಭಿಣಿ ಹಸುವನ್ನು ಕೊಂದು, ಕರುವನ್ನು ಚೀಲದಲ್ಲಿ ಎಸೆದ ಅಮಾನವೀಯತೆ: ಭಟ್ಕಳದಲ್ಲಿ ಆರೋಪಿ ಬಂಧನ

ಗರ್ಭಿಣಿ ಹಸುವನ್ನು ಕ್ರೂರವಾಗಿ ಕೊಂದು, ಅದರ ಹೊಟ್ಟೆಯಲ್ಲಿ ಇದ್ದ ಕರುವನ್ನು ಚೀಲದಲ್ಲಿ ಸುತ್ತಿ ನದಿಯ ದಡದಲ್ಲಿ ಎಸೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಂಧನ ಬೆಲೆ ಏರಿಕೆ ಖಂಡಿಸಿ ಎ.26ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಇಂಧನ ಹಾಗೂ ಅಡುಗೆ ಅನಿಲದ ಬೆಲೆ ಏರಿಸಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಎಪ್ರಿಲ್ 26ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.