
ಕಾರ್ಕಳ : ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಲ್ ಬೆಟ್ಟು ದಿವಂಗತ ಸುಂದರಿ ನಾರಾಯಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರ ಸುಪುತ್ರ ಶ್ರೀನಾಥ್ ಶೆಟ್ಟಿ ಉದ್ಯಮಿ ಮುಂಬೈ 20 ನೇ ವರ್ಷದ ಲೇಖನ ಸಾಮಗ್ರಿ ನೋಟ್ ಬುಕ್ ಕೊಡೆ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಸಂಜೀವ ಪೂಜಾರಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ರಾದ ಶ್ರೀಯುತ ಜನಾರ್ದನ ಹೆಗ್ಡೆ ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ ಶೆಟ್ಟಿ ಪಂಚಾಯತ್ ಸದಸ್ಯರಾದ ಶ್ರೀಯುತ ದಿನೇಶ್ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ದಯಾನಂದ ಪ್ರಭು ದಾನಿಗಳಾದಂತಹ ಶ್ರೀಯುತ ಶ್ರೀನಾಥ್ ಶೆಟ್ಟಿ ,ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಯುತ ತಾರಾನಾಥ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀಯುತ ಉದಯ ಶೆಟ್ಟಿ ಹಾಗೂ ಅಧ್ಯಾಪಕರಾದಂತ ಶ್ರೀಯುತ ವಿಜಯ , ಅಧ್ಯಾಪಕಿಯಾರದಂತಹ ಶ್ರೀಮತಿ ಆಶಾ, ಶ್ರೀಮತಿ ಅಶ್ವಿನಿ ಇವರು ಈ ಎಲ್ಲಾ ಕಾರ್ಯಕ್ರಮಕ್ಕೆ ಸಹಕರಿಸಿದರು