
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ಸಂಪರ್ಕ ರಸ್ತೆಗಳು ಮತ್ತು ಸೇತುವೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು 13 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಅನುದಾನದಲ್ಲಿ ಅಭಿವೃದ್ಧಿಗೊಳ್ಳುವ ಪ್ರಮುಖ ಕಾಮಗಾರಿಗಳು:
ಮುದ್ರಾಡಿ-ಹೆಬ್ರಿ-ಬ್ರಹ್ಮಾವರ ರಾಜ್ಯ ಹೆದ್ದಾರಿ: ಮುದ್ರಾಡಿ ಪೇಟೆಯಿಂದ ಜರುವತ್ತು ಸೇತುವೆವರೆಗೆ ರಸ್ತೆ ನವೀಕರಣಕ್ಕೆ ₹120 ಲಕ್ಷ
ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ (SH-37): ಚೆಂಡೆ ಬಸದಿ ಕ್ರಾಸ್ನಿಂದ ಬಜಗೋಳಿವರೆಗೆ ರಸ್ತೆ ನವೀಕರಣಕ್ಕೆ ₹150 ಲಕ್ಷ
ಕಾಂಜರಕಟ್ಟೆ-ಇನ್ನಾ-ಸಾಂತೂರುಕೊಪ್ಲ-ಮುಂಡ್ಕೂರು ರಸ್ತೆ: ₹100 ಲಕ್ಷ
ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ರಸ್ತೆ: ವಂಜಾರಕಟ್ಟೆಯಿಂದ ಬೋಪಾಡಿ ಸೇತುವೆವರೆಗೆ ರಸ್ತೆ ಅಭಿವೃದ್ಧಿಗೆ ₹180 ಲಕ್ಷ
ಅಜೆಕಾರು-ಹರ್ಮುಂಡೆ-ಜಾರ್ಕಳ-ಕೆರ್ವಾಶೆ ರಸ್ತೆ: ₹250 ಲಕ್ಷ
ದುರ್ಗಾ-ಮುಂಡ್ಲಿ-ಶಿರ್ಲಾಲು ರಸ್ತೆ: ₹250 ಲಕ್ಷ
ಮುಡಾರು ಸೇತುವೆ: ಶಿಥಿಲಗೊಂಡಿರುವ ಹಳೆಯ ಸೇತುವೆಯ ಮರುನಿರ್ಮಾಣಕ್ಕೆ ₹100 ಲಕ್ಷ
ಬೆಳುವಾಯಿ-ಕಾಂತಾವರ-ಮಂಜರಪಲ್ಕೆ (ಬರಬೈಲು) ಸೇತುವೆ: ಮರುನಿರ್ಮಾಣಕ್ಕೆ ₹150 ಲಕ್ಷ
ಶಾಸಕ ವಿ. ಸುನಿಲ್ ಕುಮಾರ್ ಅವರು ಕಾರ್ಕಳ ಕ್ಷೇತ್ರದ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಅನುದಾನದಿಂದ ಸ್ಥಳೀಯರ ಸಂಚಾರ ಸುಗಮವಾಗುವ ಜೊತೆಗೆ ಪ್ರಮುಖ ಸಂಪರ್ಕ ಮಾರ್ಗಗಳು ಸುಧಾರಣೆಯಾಗಲಿದೆ.