
ಬಡಗುತಿಟ್ಟು ಯಕ್ಷಗಾನ ಕಲಿಕೆಯಲ್ಲಿ ಖ್ಯಾತರಾಗಿರುವ
ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಗುರುಗಳ ಮಾರ್ಗದರ್ಶನದಲ್ಲಿ ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ ಬಡಗುತಿಟ್ಟು ಯಕ್ಷಗಾನ ತರಗತಿ ಆರಂಭವಾಗಿದೆ.
ಪ್ರತಿ ಆದಿತ್ಯವಾರ ಸಂಜೆ 4 ರಿಂದ 6 ರವರೆಗೆ ಬಡಗು ತಿಟ್ಟು ಯಕ್ಷಗಾನ ನಾಟ್ಯ ತರಗತಿ ನಡೆಯಲಿದ್ದು ಯಕ್ಷಗಾನ ದಲ್ಲಿ ಆಸಕ್ತಿ ಇರುವ ಮಕ್ಕಳು ಪುರುಷರು ಮಹಿಳೆಯರು ಭಾಗವಹಿಸಬಹುದು. ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪೆನ್ ಹಸ್ತಾಂತರಿಸಿ ಗುರುಗಳ ಆಶೀರ್ವಾದದೊಂದಿಗೆ ತರಗತಿ ಪ್ರಾರಂಭಿಸಿದ್ದು , ವಿಜೇತ ಶಾಲಾ ಸ್ಥಾಪಕಿ ಡಾ. ಕಾಂತಿ ಹರೀಶ್ , ಸ. ಪ್ರೌಢ ಶಾಲೆ ಎಣ್ಣೆಹೊಳೆ ಶಿಕ್ಷಕಿ ಶ್ರೀಮತಿ ಪವಿತ್ರ ಶೆಟ್ಟಿ, ಶ್ರೀಮತಿ ರೇಖಾ ಕಾಮತ್ , ಶ್ರೀ ರವೀಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಪರ್ಕ ಸಂಖ್ಯೆ:
9449711678
8861483100.