spot_img

ಕಮಲ್ ಹಾಸನ್ ವಿವಾದ: “ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ” ಎಂದ ಎಂಎನ್‌ಎಂ ಪಕ್ಷ

Date:

ಚೆನ್ನೈ: ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ಅವರಿಗೆ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ)ಪಕ್ಷ ಸಂಪೂರ್ಣ ಬೆಂಬಲ ನೀಡಿದೆ. ನಟನ ಹೇಳಿಕೆಯನ್ನು ಸಮರ್ಥಿಸಿ, ಚೆನ್ನೈನಾದ್ಯಂತ “ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ” ಎಂಬ ಘೋಷಣೆಯ ಪೋಸ್ಟರ್‌ಗಳನ್ನು ಮಂಗಳವಾರ ಇಡಲಾಗಿದೆ.

ಈ ಪೋಸ್ಟರ್‌ಗಳಲ್ಲಿ, “ಪ್ರೀತಿಗೆ ಕ್ಷಮೆ ಬೇಡ. ಸತ್ಯ ತಲೆ ಬಾಗುವುದಿಲ್ಲ” ಎಂಬ ಸಂದೇಶವಿರುವುದು ಗಮನಸೆಳೆಯುತ್ತಿದೆ. ಕಮಲ್ ಹಾಸನ್ ತಮ್ಮ ಹೇಳಿಕೆಯಲ್ಲಿ “ದ್ವಿಭಾಷೆಗಳ ನಡುವೆ ಇರುವ ಸಂಬಂಧವನ್ನು” ಹಿಗ್ಗಿಸಿ ಹೇಳಿದರು ಎಂಬ ಮಾತನ್ನು ಪಕ್ಷ ಬೆಂಬಲಿಸುತ್ತಿದ್ದು, ಅದು ಜಗತ್ತಿಗೆ ತಿಳಿದ ಸತ್ಯವಾಗಿದೆ ಎಂದು ಹೇಳಿದೆ.

ಇನ್ನು, “ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆ” ಎಂಬ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಕಿಡಿಕಾರಿದ್ದವು. ತೀವ್ರ ಆಕ್ರೋಶ ವ್ಯಕ್ತಪಡಿಸಿ, ” ಕ್ಷಮೆ ಕೋರಬೇಕು ಇಲ್ಲದಿದ್ದರೆ ಕಮಲಹಾಸನ್‌ ನಟನೆಯ ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ಎಚ್ಚರಿಕೆ ನೀಡಿದ್ದರು.

ಈ ಬೆಳವಣಿಗೆಗಳ ಮಧ್ಯೆ, ಕಮಲ್ ಹಾಸನ್ ಪಕ್ಷದ ಕಾರ್ಯಕರ್ತರು “ನಾವು ಸತ್ಯವನ್ನು ಬಿಟ್ಟುಕೊಡುವುದಿಲ್ಲ, ಕ್ಷಮೆ ಕೇಳುವುದಿಲ್ಲ” ಎಂಬ ಕಠಿಣ ನಿಲುವು ತೋರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ಕೀಟ ಸಚೇತನ ದಿನ

2017ರಲ್ಲಿ ಚೀನಾದ ಬೀಜಿಂಗ್ನಲ್ಲಿ ನಡೆದ ಸಮ್ಮೇಳನದಲ್ಲಿ ಈ ದಿನವನ್ನು ಪ್ರಾರಂಭಿಸಲಾಯಿತು.

ಈರುಳ್ಳಿ ರಸದಿಂದ ಆರೋಗ್ಯಕ್ಕೆ ಅಪಾರ ಲಾಭ: ವೈದ್ಯಕೀಯವಾಗಿ ಸಾಬೀತಾದ ಪ್ರಾಮುಖ್ಯತೆ

ಪ್ರತಿದಿನದ ಅಡುಗೆಗೆ ಅತ್ಯಗತ್ಯವಾದ ಈರುಳ್ಳಿಯು ಆರೋಗ್ಯದ ದೃಷ್ಟಿಯಿಂದ ಕೂಡಾ ಅಪಾರ ಮಹತ್ವ ಹೊಂದಿದೆ. ಇತ್ತೀಚೆಗೆ ನಡೆಸಿದ ಹಲವು ಅಧ್ಯಯನಗಳು ಹಾಗೂ ಆಯುರ್ವೇದ ತಜ್ಞರ ಅಭಿಪ್ರಾಯಗಳ ಪ್ರಕಾರ, ಈರುಳ್ಳಿಯಿಂದ ತಯಾರಿಸಿದ ರಸದ ಸೇವನೆಯು ದೇಹಕ್ಕೆ ಹಲವು ರೀತಿಯ ಲಾಭಗಳನ್ನು ನೀಡುತ್ತದೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳಕೆ ಇರ್ವತ್ತೂರು ಇಲ್ಲಿ ನೂತನವಾಗಿ LKG UKG ತರಗತಿಗಳ ಪ್ರಾರಂಭ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳಕೆ ಇರ್ವತ್ತೂರು ಇಲ್ಲಿ ನೂತನವಾಗಿ ಆರಂಭಿಸಿರುವ ಎಲ್ ಕೆ ಜಿ ,ಯು ಕೆ ಜಿ ತರಗತಿಗಳ ಉದ್ಘಾಟನೆಯನ್ನು ಇಲ್ಲಿಯ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸಹಕಾರ ಸಂಘದ ಧುರೀಣರಾದ ಶ್ರೀ ಭಾಸ್ಕರ್ ಎಸ್ ಕೋಟ್ಯಾನ್ ರವರು ನೆರವೇರಿಸಿದರು

ನಾಳೆ ಪ್ರಧಾನಿ ಮೋದಿಯವರಿಂದ ಪ್ರಪಂಚದ ಅತ್ಯಂತ ಎತ್ತರದ ಚೆನಾಬ್ ಸೇತುವೆಯ ಉದ್ಘಾಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 7 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ವಿವಿಧ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.