
ಚೆನ್ನೈ: ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ಅವರಿಗೆ ಮಕ್ಕಳ್ ನೀಧಿ ಮೈಯಂ (ಎಂಎನ್ಎಂ)ಪಕ್ಷ ಸಂಪೂರ್ಣ ಬೆಂಬಲ ನೀಡಿದೆ. ನಟನ ಹೇಳಿಕೆಯನ್ನು ಸಮರ್ಥಿಸಿ, ಚೆನ್ನೈನಾದ್ಯಂತ “ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ” ಎಂಬ ಘೋಷಣೆಯ ಪೋಸ್ಟರ್ಗಳನ್ನು ಮಂಗಳವಾರ ಇಡಲಾಗಿದೆ.
ಈ ಪೋಸ್ಟರ್ಗಳಲ್ಲಿ, “ಪ್ರೀತಿಗೆ ಕ್ಷಮೆ ಬೇಡ. ಸತ್ಯ ತಲೆ ಬಾಗುವುದಿಲ್ಲ” ಎಂಬ ಸಂದೇಶವಿರುವುದು ಗಮನಸೆಳೆಯುತ್ತಿದೆ. ಕಮಲ್ ಹಾಸನ್ ತಮ್ಮ ಹೇಳಿಕೆಯಲ್ಲಿ “ದ್ವಿಭಾಷೆಗಳ ನಡುವೆ ಇರುವ ಸಂಬಂಧವನ್ನು” ಹಿಗ್ಗಿಸಿ ಹೇಳಿದರು ಎಂಬ ಮಾತನ್ನು ಪಕ್ಷ ಬೆಂಬಲಿಸುತ್ತಿದ್ದು, ಅದು ಜಗತ್ತಿಗೆ ತಿಳಿದ ಸತ್ಯವಾಗಿದೆ ಎಂದು ಹೇಳಿದೆ.
ಇನ್ನು, “ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆ” ಎಂಬ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಕಿಡಿಕಾರಿದ್ದವು. ತೀವ್ರ ಆಕ್ರೋಶ ವ್ಯಕ್ತಪಡಿಸಿ, ” ಕ್ಷಮೆ ಕೋರಬೇಕು ಇಲ್ಲದಿದ್ದರೆ ಕಮಲಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ಎಚ್ಚರಿಕೆ ನೀಡಿದ್ದರು.
ಈ ಬೆಳವಣಿಗೆಗಳ ಮಧ್ಯೆ, ಕಮಲ್ ಹಾಸನ್ ಪಕ್ಷದ ಕಾರ್ಯಕರ್ತರು “ನಾವು ಸತ್ಯವನ್ನು ಬಿಟ್ಟುಕೊಡುವುದಿಲ್ಲ, ಕ್ಷಮೆ ಕೇಳುವುದಿಲ್ಲ” ಎಂಬ ಕಠಿಣ ನಿಲುವು ತೋರಿಸಿದ್ದಾರೆ.