
ಕಾರ್ಕಳ : ಜೇಸಿಐ ಭಾರತದ ವಲಯ 15ರ ಪ್ರಾಂತ್ಯ ಬಿ ಯ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಜೇಸಿಐ ಕಾರ್ಕಳ ರೂರಲ್ ಪಡೆದುಕೊಂಡಿದೆ. ತನ್ನ ದಶಮಾನೋತ್ಸವ ಆಚರಿಸುತ್ತಿರುವ ಘಟಕವು ಈ ವರ್ಷ ಕಾರ್ಕಳ ಪರಿಸರದಲ್ಲಿ ಹಮ್ಮಿಕೊಂಂಡ ಹಲವಾರು ಜನ ಮನ್ನಣೆಯ ಕಾರ್ಯಕ್ರಮಗಳಿಗಾಗಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
ನಿಟ್ಟೆಯಲ್ಲಿ ನಡೆದ ವಲಯದ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಜೇಸಿ ಅಭಿಲಾಷ್ ಬಿ.ಎ. ಅವರು ಈ ಪ್ರಶಸ್ತಿಯನ್ನು ಘಟಕಾಧ್ಯಕ್ಷ ಜೇಸಿ ಅರುಣ್ ಪೂಜಾರಿ ಮಾಂಜ ಅವರಿಗೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್, ಸ್ಥಾಪಕರಾದ ಸತೀಶ್ ಪೂಜಾರಿ, ಮಾರ್ಗದರ್ಶಕರಾದ ಪ್ರಕಾಶ್ ಕಾರ್ಕಳ, ಘಟಕದ ಪೂರ್ವಾಧ್ಯಕ್ಷರುಗಳಾದ ಜೇಸಿ ವೀಣಾ ರಾಜೇಶ್, ಜೇಸಿ ಶೋಭಾ ಭಾಸ್ಕರ್, ಜೇಸಿ ಮಂಜುನಾಥ್ ಕೋಟ್ಯಾನ್, ಜೇಸಿ ಸಂತೋಷ್ ಬಂಗೇರಾ, ಮೋಹನ್ ನಕ್ರೆ, ಸಂತೋಷ್ ಪೂಜಾರಿ ಮಾಳ ಮತ್ತು ಸದಸ್ಯರುಗಳಾದ ಜೇಸಿ ಮಮತಾ ಸಂತೋಷ್, ಜೇಸಿ ಹರಿಣಿ ಬಂಗೇರ ಜೇಸಿ ಶ್ವೇತಾ ಅರುಣ್, ಜೇಸಿ ಅಜಯ್, ಜೇಸಿ ಲತಾ ಪ್ರಕಾಶ್, ಜೇಸಿ ರಕ್ಷಣ್, ಜೆಜೆಸಿಗಳಾದ ದಿಯಾ, ರಿಯಾ ಮತ್ತಿತರರು ಉಪಸ್ಥಿತರಿದ್ದರು.