
ಜೇಸಿಐ ಹೆಬ್ರಿ ಇದರ ಜೇಸಿ ಸಪ್ತಾಹ 2025 ಸಪ್ತ ನಕ್ಷತ್ರ ಅಂಗವಾಗಿ ಮುಕ್ತ ಪುರುಷರ ಶಟ್ಲ್ ಬ್ಯಾಡ್ಮಿಂಟನ್( ಡಬ್ಬಲ್ಸ್) ಪಂದ್ಯಾಟ ಹೆಬ್ರಿ ಚೈತನ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನೆರವೇರಿತು.
ಕ್ರೀಡಾಕೂಟಕ್ಕೆ ಜೇಸಿಐ ಭಾರತ ವಲಯ 15 ರ ನಿಕಟ ಪೂರ್ವ ಅಧ್ಯಕ್ಷ JCI PPP ಗಿರೀಶ್ ಎಸ್ ಪಿ ಚಾಲನೆ ನೀಡಿ ಜೇಸಿ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡುವುದಲ್ಲದೆ ಯುವ ನಾಯಕತ್ವ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಕ್ರೀಡಾ ಕೂಟ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಹೆಬ್ರಿ ಘಟಕದ ಅಧ್ಯಕ್ಷೆ ಜೇಸಿ ಸೋನಿ ಪಿ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚೈತನ್ಯ ಯುವ ವೃಂದದ ಅಧ್ಯಕ್ಷ ಪ್ರವೀಣ್ ಕುಮಾರ್, ಗೌರವಾಧ್ಯಕ್ಷ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ್ ಎಚ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಪೂರ್ವಧ್ಯಕ್ಷ ನಿತೀಶ್ ಎಸ್ ಪಿ,ಜೇಸಿರೆಟ್ ಸಂಯೋಜಕಿ ರಂಜಿತಾ ಆರ್ ಪ್ರಭು ಇದ್ದರು.
ಕಾರ್ಯಕ್ರಮದಲ್ಲಿ ಜೇಸಿಐ ಹೆಬ್ರಿಯ ಪೂರ್ವಧ್ಯಕ್ಷರುಗಳಾದ ಸೀತಾನದಿ ವಿಠಲ ಶೆಟ್ಟಿ, ಪ್ರವೀಣ್ ಶೆಟ್ಟಿ, ಪ್ರಶಾಂತ್ ಪೈ, ಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಫಲಿತಾಂಶ: ಕೂಟದಲ್ಲಿ ಅವಿಭಜಿತ ದ.ಕ ಜಿಲ್ಲೆಯ 27 ತಂಡ ಭಾಗವಹಿಸಿ ವಿನ್ನರ್ ಪ್ರಶಸ್ತಿಯನ್ನು ವಿನಯ್ ಮತ್ತು ನೌಶಾದ್. ರನ್ನರ್ ಪ್ರಶಸ್ತಿಯನ್ನು ಪವನ್ ಮತ್ತು ವಿಖ್ಯಾತ್ ಪಡೆದುಕೊಂಡರು.
ಅಧ್ಯಕ್ಷೆ ಜೇಸಿ ಸೋನಿ ಪಿ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ ಜೇಸಿ ಉದಯ್ ಸೇರಿಗಾರ್ ಧನ್ಯವಾದ ಸಲ್ಲಿಸಿದರು.
































