spot_img

‘ಸು ಫ್ರಮ್‌ ಸೋ’ ಅಲ್ಲ, ಇದು ‘ಬಿ ಫ್ರಮ್‌ ಸಿ’: ಸರ್ಕಾರದ ವಿರುದ್ಧ ಶಾಸಕ ಸುನಿಲ್‌ ಕುಮಾರ್‌ ವಾಗ್ದಾಳಿ

Date:

spot_img

ಬೆಂಗಳೂರು : ಕಾರ್ಕಳ ಶಾಸಕ ಮತ್ತು ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಅವರು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸರ್ಕಾರದ ಆಡಳಿತಾವಧಿಯಲ್ಲಿ ಅನುದಾನಗಳ ಕೊರತೆಯಿಂದಾಗಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ ಎಂದು ಆರೋಪಿಸಿದ್ದಾರೆ.

‘ಬೋಗಸ್‌ ಫ್ರಮ್‌ ಕಾಂಗ್ರೆಸ್‌’ ಎಂದು ಟೀಕೆ

ನಿಯಮ 69ರ ಅಡಿಯಲ್ಲಿ ಅನುದಾನದ ಬಗ್ಗೆ ಮಾತನಾಡಿದ ಸುನಿಲ್‌ ಕುಮಾರ್‌, ಜನಪ್ರಿಯ ಸಿನಿಮಾ ‘ಸು ಫ್ರಮ್‌ ಸೋ’ ಹೆಸರನ್ನು ಬಳಸಿಕೊಂಡು ಸರ್ಕಾರವನ್ನು ವ್ಯಂಗ್ಯವಾಡಿದರು. “ಈ ಸರ್ಕಾರವನ್ನು ನಾನು ‘ಬಿ ಫ್ರಮ್‌ ಸಿ’ (B from C) ಎಂದು ಕರೆಯುತ್ತೇನೆ. ಇದರರ್ಥ ‘ಬೋಗಸ್‌ ಫ್ರಮ್‌ ಕಾಂಗ್ರೆಸ್’‌. ಕಳೆದ ಎರಡು ವರ್ಷದಲ್ಲಿ ಬೋಗಸ್‌ ಎಂದು ಹೇಳಿದ್ದನ್ನು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ” ಎಂದು ಟೀಕಿಸಿದರು.

ಅಭಿವೃದ್ಧಿ ಇಲ್ಲ, ಶಾಸಕರಿಗೆ ತಲೆ ಎತ್ತಲು ಸಾಧ್ಯವಿಲ್ಲ

ಈ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಸುನಿಲ್‌ ಕುಮಾರ್‌ ಆರೋಪಿಸಿದರು. “ರಸ್ತೆಗೆ ಮಣ್ಣು ಹಾಕಲೂ ಈ ಸರ್ಕಾರ ಹಣ ಕೊಟ್ಟಿಲ್ಲ. ಒಂದೇ ಒಂದು ಕಿಲೋಮೀಟರ್‌ ಹೊಸ ರಸ್ತೆ ನಿರ್ಮಾಣವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ವಸತಿ ಯೋಜನೆಗಳ ಬಗ್ಗೆಯೂ ಮಾತನಾಡಿದ ಅವರು, “ಮಾತೆತ್ತಿದರೆ ಬಡವರ ಪರ ಎನ್ನುತ್ತಾರೆ, ಆದರೆ ಕಳೆದ ಎರಡು ವರ್ಷದಲ್ಲಿ ಒಂದೇ ಒಂದು ಮನೆ ಕೂಡ ಕೊಟ್ಟಿಲ್ಲ” ಎಂದು ಪ್ರಶ್ನಿಸಿದರು.

ಇದೇ ವೇಳೆ, ಮುಖ್ಯಮಂತ್ರಿಯನ್ನು ನೇರವಾಗಿ ಪ್ರಶ್ನಿಸಿದ ಸುನಿಲ್‌ ಕುಮಾರ್‌, “ಈಗ ಅಧಿಕಾರದಲ್ಲಿರುವಾಗಲೇ ಶಾಸಕರಿಗೆ ಅನುದಾನ ನೀಡುತ್ತೀರೋ ಅಥವಾ ನವೆಂಬರ್ ನಂತರ ಬದಲಾಗುವ ಮುಖ್ಯಮಂತ್ರಿಯಿಂದ ಅನುದಾನ ನೀಡುತ್ತೀರೋ?” ಎಂದು ಕೇಳಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಿ.ಎಲ್.ಸಂತೋಷ್ ವಿರುದ್ಧದ ಹೇಳಿಕೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ನ್ಯಾಯಾಂಗ ಬಂಧನ

ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ದಿನ ವಿಶೇಷ – ವಿಶ್ವ ಸಸ್ಯ ಹಾಲು ದಿನ

ಮಾನವನ ಆಹಾರ ಪದ್ಧತಿಯಲ್ಲಿ ಇತ್ತೀಚೆಗೆ ಸಸ್ಯ ಆಧಾರಿತ ಆಹಾರಗಳು ಮಹತ್ವ ಪಡೆಯುತ್ತಿವೆ

ಪರಶುರಾಮ ಪ್ರತಿಮೆ ಮರುಸ್ಥಾಪನೆ ಪಿಐಎಲ್‌: ಅರ್ಜಿದಾರ 5 ಲಕ್ಷ ರೂ. ಠೇವಣಿ ಇಡಲು ಹೈಕೋರ್ಟ್ ಸೂಚನೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನ ಪ್ರತಿಮೆಯನ್ನು ಮರು ಸ್ಥಾಪಿಸಲು ಸರ್ಕಾರದ ನಿರ್ದೇಶನ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್ ₹5 ಲಕ್ಷ ಠೇವಣಿ ಇರಿಸುವಂತೆ ಸೂಚಿಸಿದೆ.

ಆಪಲ್ ಇತಿಹಾಸದಲ್ಲೇ ಅತ್ಯಂತ ತೆಳ್ಳನೆಯ ಫೋನ್: ಐಫೋನ್ 17 ಏರ್ ಬಿಡುಗಡೆಗೆ ಸಿದ್ಧತೆ

2025ರ ಸೆಪ್ಟೆಂಬರ್‌ನಲ್ಲಿ ಆಪಲ್ ತನ್ನ ಬಹುನಿರೀಕ್ಷಿತ ಐಫೋನ್ 17 ಸರಣಿಯನ್ನು ಬಿಡುಗಡೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ.