spot_img

ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅವಮಾನ : 6 ತಿಂಗಳಿಗೆ 18 ಬಿಜೆಪಿ ಶಾಸಕರ ಅಮಾನತು

Date:

ಬೆಂಗಳೂರು: ವಿಧಾನಸಭೆಯಲ್ಲಿ ನಡೆದ ಗದ್ದಲದ ಬೆನ್ನಲ್ಲೇ ಸ್ಪೀಕರ್‌ ಯು.ಟಿ. ಖಾದರ್ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಿದ್ದಾರೆ.

ಹನಿಟ್ರಾಪ್ ಪ್ರಕರಣದ ಕುರಿತು ನಡೆದ ಚರ್ಚೆಯ ವೇಳೆ, ಬಿಜೆಪಿಯ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದು, ಸ್ಪೀಕರ್ ಪೀಠಕ್ಕೆ ಪೇಪರ್‌ಗಳನ್ನೆಸೆದಿದ್ದಾರೆ. ಸ್ಪೀಕರ್‌ಗೆ ಅವಮಾನ ತೋರಿದ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡು ಅವರನ್ನು ಅಮಾನತು ಮಾಡಲಾಗಿದೆ.

ಅಮಾನತುಗೊಂಡ ಶಾಸಕರ ಪಟ್ಟಿಯಲ್ಲಿ ದೊಡ್ಡನಗೌಡ ಪಾಟೀಲ್, ಅಶ್ವಥ್ ನಾರಾಯಣ್, ಭರತ್ ಶೆಟ್ಟಿ, ಶರಣು ಸಲಗರ್, ಬಿ. ಸುರೇಶ್ ಗೌಡ, ಮುನಿರತ್ನ, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಬಿ.ಪಿ. ಹರೀಶ್, ಧೀರಜ್ ಮುನಿರಾಜು, ಶೈಲೆಂದ್ರ ಬೆಲ್ದಾಳೆ, ಬಸವರಾಜ್ ಮತ್ತಿಮೂಡ್, ಯಶ್ ಪಾಲ್ ಸುವರ್ಣ, ಚಂದ್ರು ಲಮಾಣಿ, ಭೈರತಿ ಬಸವರಾಜ್ ಸೇರಿದ್ದಾರೆ.

ಶಾಸಕರ ಅಮಾನತಿನ ನಂತರ, ಕಲಾಪವನ್ನು ಕೆಲಕಾಲ ಮುಂದೂಡಲಾಗಿದ್ದು, ನಂತರ ಸ್ಪೀಕರ್ ಆದೇಶದಂತೆ ಮಾರ್ಷಲ್ಸ್ ಮೂಲಕ ಅವರನ್ನು ಹೊರಹಾಕಲಾಯಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕದ 15+ ಜಿಲ್ಲೆಗಳಿಗೆ ಗುಡುಗು-ಮಿಂಚು ಸಹಿತ ಮಳೆ

ಕರ್ನಾಟಕದಲ್ಲಿ ಮಳೆಗಾಲದ ಸಂಭವವಿದೆ. ಜೂನ್ 11ರಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಆರಂಭವಾಗುವ ಸಾಧ್ಯತೆ ಇದೆ

ಮಣಿಪುರದಲ್ಲಿ ನಾಯಕನ ಬಂಧನದಿಂದ ಪ್ರತಿಭಟನೆಗಳು ಉಗ್ರರೂಪ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮತ್ತು ಪ್ರತಿಭಟನೆಗಳು ತಲೆದೋರಿದ್ದು, ಸರ್ಕಾರವು ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದೆ.

ಜೋಳದಿಂದ ಹಾಲಿನ ಪ್ಯಾಕ್! ಬಮೂಲ್ನ ಅದ್ಭುತ ತಂತ್ರಜ್ಞಾನ

ಪ್ಲಾಸ್ಟಿಕ್‌ ಮಾಲಿನ್ಯವನ್ನು ಕಡಿವಾಣ ಹಾಕುವ ದಿಶೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ (ಬಮೂಲ್‌) ಒಂದು ಹೊಸ ಹಂತಕ್ಕೆ ಪಾದಾರ್ಪಣೆ ಮಾಡಿದೆ

ಜೂನ್ 9ರಂದು ಮೋದಿ ಸರ್ಕಾರಕ್ಕೆ 11 ವರ್ಷ – ದೇಶಾದ್ಯಂತ ವಿಶೇಷ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರದಲ್ಲಿ 11 ವರ್ಷಗಳನ್ನು ಪೂರ್ಣಗೊಳಿಸಲಿದೆ