
ನ್ಯೂ ದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತೀರ್ವ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಭಾರಿ ಪರಿಣಾಮ ಉಂಟುಮಾಡಿದ್ದು, ಲಷ್ಕರ್ ಎ ತೊಯ್ಬಾ ಮತ್ತು ಜೈಶ್ ಎ ಮೊಹಮ್ಮದ್ ಸಂಘಟನೆಗಳ ಪ್ರಮುಖ ಉಗ್ರರು ಸೇರಿ ಹಲವರು ಹತರಾಗಿದ್ದಾರೆ ಎನ್ನಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಲಾಹೋರ್ನಿಂದ 400 ಕಿಮೀ ದೂರದಲ್ಲಿರುವ ಬಹಾವಲ್ಲುರ್ ಪ್ರದೇಶದಲ್ಲಿರುವ ಜೈಶ್ ಎ ಮೊಹಮ್ಮದ್ನ 18 ಎಕರೆ ಪ್ರದೇಶವಿರುವ ಪ್ರಧಾನ ಕಚೇರಿಯೇ ಗುರಿಯಾಗಿದ್ದು, ಇಲ್ಲಿ ಭಯೋತ್ಪಾದಕರ ನೇಮಕಾತಿ, ದೇಣಿಗೆ ಸಂಗ್ರಹ ಹಾಗೂ ಉಗ್ರ ಚಟುವಟಿಕೆಗಳು ನಡೆಯುತ್ತಿದ್ದುದು ವರದಿಯಾಗಿದೆ.
ಮೌಲಾನಾ ಮಸೂದ್ ಅಜರ್ ಈ ಭಾಗದಲ್ಲಿಯೇ ವಾಸಿಸುತ್ತಿದ್ದನೆಂಬ ಮಾಹಿತಿ ಇದ್ದು, ಈ ದಾಳಿಯಲ್ಲಿ ಹಫೀಜ್ ಸಯೀದ್ ಮತ್ತು ಅಜರ್ ಸಹ ಹತರಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಭಾರತ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ನೀಡಿಲ್ಲವಾದರೂ, ಭದ್ರತಾ ಮೂಲಗಳು ಈ ದಾಳಿಯ ಮಾಹಿತಿ ಪರಿಶೀಲಿಸುತ್ತಿವೆ.