spot_img

ಭಾರತೀಯರು ಕಳೆದ ವರ್ಷ ಸ್ಮಾರ್ಟ್‌ಫೋನ್‌ನೊಂದಿಗೆ 1.1 ಲಕ್ಷ ಕೋಟಿ ತಾಸು ಕಳೆದಿದ್ದಾರೆ !

Date:

ಹೊಸದಿಲ್ಲಿ: ಭಾರತದ ಜನತೆ ಕಳೆದ ವರ್ಷ ಒಟ್ಟು 1.1 ಲಕ್ಷ ಕೋಟಿ ತಾಸುಗಳನ್ನು ಸ್ಮಾರ್ಟ್‌ಫೋನ್‌ ವೀಕ್ಷಣೆಯಲ್ಲಿ ಕಳೆದಿದ್ದಾರೆ ಎಂದು ಅರ್ನೆಸ್ಟ್ ಆ್ಯಂಡ್ ಯಂಗ್ (E&Y) ಸಂಸ್ಥೆಯ 2024ರ ಮನೋರಂಜನೆ ಮತ್ತು ಮಾಧ್ಯಮ ವರದಿ ತಿಳಿಸಿದೆ.

ಅತ್ಯಲ್ಪ ದರದಲ್ಲಿ ಡೇಟಾ ಲಭ್ಯವಾಗುತ್ತಿರುವುದರಿಂದ, ಡಿಜಿಟಲ್ ಮನೋರಂಜನೆ, ಗೇಮಿಂಗ್ ಮತ್ತು ಸೋಶಿಯಲ್ ಮೀಡಿಯಾ ಬಳಕೆ ಸಾಕಷ್ಟು ಹೆಚ್ಚಾಗಿದೆ.

ವರದಿ ಪ್ರಕಾರ, ಒಬ್ಬ ಭಾರತೀಯ ದಿನಕ್ಕೆ ಸರಾಸರಿ 5 ತಾಸು ಮೊಬೈಲ್‌ ಫೋನ್ ಬಳಸಿ ವ್ಯತೀತ ಮಾಡುತ್ತಿದ್ದಾನೆ.ಈ ಪೈಕಿ 70% ಸಮಯ ಸೋಶಿಯಲ್ ಮೀಡಿಯಾ, ಗೇಮಿಂಗ್ ಮತ್ತು ವೀಡಿಯೋ ವೀಕ್ಷಣೆಗೆ ಮೀಸಲಾಗಿರುವುದು ಗಮನಾರ್ಹ.ಭಾರತದ ಜನರು ಮೊಬೈಲ್‌ ಫೋನ್‌ ಬಳಕೆಯಲ್ಲಿ ಇಂಡೋನೇಷ್ಯಾ ಮತ್ತು ಬ್ರೆಜಿಲ್ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.ಭಾರತದ ಮೊಬೈಲ್ ಬಳಕೆದಾರರು ಪ್ರತಿ ವರ್ಷ ತಾವು ಬಳಸುವ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ.

ಡಿಜಿಟಲ್ ಸ್ಮಾರ್ಟ್‌ಫೋನ್ ಬಳಕೆಯ ಹೆಚ್ಚಳದೊಂದಿಗೆ, ಮಾನಸಿಕ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಮತ್ತು ಸಮಯದ ಸಮತೋಲನ ಮತ್ತು ಸ್ಮಾರ್ಟ್‌ಫೋನ್ ಬಳಕೆಯ ಬಗ್ಗೆ ಜಾಗೃತಿಯ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇಂದಿರಾನಗರ ಕೊರಗಜ್ಜ ಕ್ಷೇತ್ರದಲ್ಲಿ ಏಪ್ರಿಲ್ 27ರಂದು ಅಗೆಲು ಸೇವೆ

ಹೆಬ್ರಿಯ ಇಂದಿರಾನಗರದಲ್ಲಿರುವ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಇದೇ ಬರುವ ಏಪ್ರಿಲ್ 27, 2025ರಂದು (ಆದಿತ್ಯವಾರ) ಭಕ್ತಿಪೂರ್ಣವಾಗಿ ಅಗೆಲು ಸೇವೆ ನಡೆಯಲಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತೀವ್ರ ಖಂಡನೆ: ದುಃಖಿತ ಕುಟುಂಬಗಳಿಗೆ ಶ್ರೀ ಪ್ರಮೋದ್ ಮಧ್ವರಾಜ್ ಸಾಂತ್ವನ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ರವರು " ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ದಿನ ವಿಶೇಷ – ಇಂಗ್ಲಿಷ್ ದಿನ

ಪ್ರಪಂಚದ ಬಹುತೇಕ ಭಾಗವನ್ನು ಈ ಭಾಷೆ ಬಸವಾಗಿಸಿಕೊಂಡಿದೆ. ಅಷ್ಟರಮಟ್ಟಿಗೆ ಪ್ರಸಿದ್ಧವಾಗಿದೆ ಹಾಗೂ ಸಂವಹನನಕ್ಕೆ ಮಾಧ್ಯಮವಾಗಿದೆ.

ಹಿರಿಯಡ್ಕದ ಡಾ. ಶೋಭಿತಾ ಅವರಿಗೆ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ!

ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಗಾಗಿ ಹಿರಿಯಡ್ಕದ ಸೌಮ್ಯ ಕ್ಲಿನಿಕ್ ನ ಡಾ. ಶೋಭಿತಾ ಅವರು ಈ ವರ್ಷ 'ಕರ್ನಾಟಕ ಮಹಿಳಾ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.