spot_img

ಅಮೆರಿಕದ ಆರ್ಥಿಕ ಧಮ್ಕಿಗೆ ಕ್ಯಾರೆ ಎನ್ನದ ಭಾರತ , ರಷ್ಯಾದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ

Date:

spot_img

ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಬೆದರಿಕೆ ಹಾಕಿದ ನಡುವೆಯೇ, ಭಾರತ ಮತ್ತು ರಷ್ಯಾ ದೇಶಗಳು ತಮ್ಮ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಮೂಲಕ, ಟ್ರಂಪ್ ಅವರ ಆರ್ಥಿಕ ಒತ್ತಡಕ್ಕೆ ಭಾರತವು ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ.

ಅಲ್ಯೂಮಿನಿಯಂ, ರಸಗೊಬ್ಬರ, ರೈಲ್ವೇ ಸಾರಿಗೆ, ಗಣಿಗಾರಿಕೆ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ಈ ಒಪ್ಪಂದ ಸಹಿ ಮಾಡಲಾಗಿದೆ. ದೆಹಲಿಯ ವಾಣಿಜ್ಯ ಭವನದಲ್ಲಿ ನಡೆದ ಭಾರತ-ರಷ್ಯಾ ಆಧುನೀಕರಣ ಮತ್ತು ಔದ್ಯಮಿಕ ಸಹಕಾರ ಕಾರ್ಯಕಾರಿ ಗುಂಪಿನ 11ನೇ ಅಧಿವೇಶನದಲ್ಲಿ ಈ ಒಡಂಬಡಿಕೆಗೆ ಅಂತಿಮ ರೂಪ ನೀಡಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಭಾರತದ ರೈತರ ಹಿತಾಸಕ್ತಿಯನ್ನು ಕಾಪಾಡಲು ಯಾವುದೇ ನಷ್ಟವನ್ನು ಭರಿಸಲು ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ಟ್ರಂಪ್ ಅವರ ಬೆದರಿಕೆಗೆ ತಿರುಗೇಟು ನೀಡಿದ್ದಾರೆ. ಈ ಕ್ರಮವು ಭಾರತವು ತನ್ನ ವ್ಯಾಪಾರ ತಂತ್ರಗಳನ್ನು ವೈವಿಧ್ಯಗೊಳಿಸುತ್ತಿದ್ದು, ರಷ್ಯಾದಂತಹ ಪ್ರಮುಖ ಮಿತ್ರ ರಾಷ್ಟ್ರಗಳೊಂದಿಗೆ ತನ್ನ ಆರ್ಥಿಕ ಮತ್ತು ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುತ್ತಿದೆ ಎಂಬುದನ್ನು ತೋರಿಸುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಕ್ಷಾಬಂಧನ

ರಕ್ಷಾಬಂಧನ, ಪ್ರೀತಿ ಮತ್ತು ವಿಶ್ವಾಸದ ಸಂಕೇತವಾಗಿರುವ ಈ ಹಬ್ಬ, ಸಹೋದರ-ಸಹೋದರಿಯರ ನಡುವಿನ ಪವಿತ್ರ ಬಂಧವನ್ನು ಬಲಪಡಿಸುತ್ತದೆ

“ಪ್ರತಿಶತ ನೂರರಷ್ಟು ನೋಂದಣಿ ಆಗಬೇಕು”: ಜನನ-ಮರಣ ದಾಖಲೆ ನಿರ್ವಹಣೆಗೆ ಡಿಸಿ ಸೂಚನೆ

ನಾಗರಿಕರ ಜನನ ಮತ್ತು ಮರಣ ದಾಖಲೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

165.9 ಕೋಟಿ ನಿಮಿಷ ವೀಕ್ಷಣೆ ಕಂಡ ಸ್ಮೃತಿ ಇರಾನಿ ಧಾರಾವಾಹಿಯ ಹೊಸ ದಾಖಲೆ

ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅಭಿನಯದ ಧಾರಾವಾಹಿ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಯ ಎರಡನೇ ಆವೃತ್ತಿಯು ಪ್ರಸಾರವಾದ ಮೊದಲ ವಾರದಲ್ಲೇ ಭಾರಿ ಯಶಸ್ಸು ಗಳಿಸಿದೆ.

ಧರ್ಮಸ್ಥಳ ಹೋರಾಟಗಾರರಿಗೂ ಎಸ್‌ಡಿಪಿಐಗೂ ಏನು ಸಂಬಂಧ? ಏನಿದರ ಮರ್ಮ? : ವಿ.ಸುನಿಲ್ ಕುಮಾರ್ ಪ್ರಶ್ನೆ

ಧರ್ಮಸ್ಥಳ ಹೋರಾಟಗಾರರಿಗೂ ಎಸ್‌ಡಿಪಿಐಗೂ ಏನು ಸಂಬಂಧ? ಏನಿದರ ಮರ್ಮ? ಎಂದು ವಿ.ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.