ಭಾರತ-ಇಂಗ್ಲೆಂಡ್ 2ನೇ T20ಗೆ ಸಜ್ಜು, ಪ್ರಶಂಸನೀಯ ಪ್ರದರ್ಶನಕ್ಕೆ ನಿರೀಕ್ಷೆ

Date:

spot_img

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಚಾಂಪಿಯನ್ಸ್ ರ ಆಟವಾಡಿ 7 ವಿಕೆಟ್‌ಗಳಿಂದ ಇಂಗ್ಲೆಂಡ್‌ ವಿರುದ್ಧ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಶನಿವಾರ ಚೆನ್ನೈ T20 ಪಂದ್ಯದಲ್ಲೂ ಅದೇ ಲಯ ಕಾಪಾಡಲು ದೃಢಸಂಕಲ್ಪಗೊಂಡಿದೆ. 5 ಪಂದ್ಯಗಳ ಸುದೀರ್ಘ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಿರುಗಿಬೀಳಲು ಸಾಧ್ಯತೆಯಿದ್ದು, ಸ್ಪರ್ಧೆ ಕಠಿಣವಾಗಲಿದೆ.

ಶಮಿ ಗೈರಲ್ಲೂ ಉತ್ತಮ ಪ್ರದರ್ಶನ
ಮೊಹಮ್ಮದ್ ಶಮಿ ತವರಿನ ಕೋಲ್ಕತಾದಲ್ಲಿ ಆಡಲಿಲ್ಲದಿದ್ದರೂ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಅವರ ಬೌಲಿಂಗ್ ಮೂಲಕ ಭಾರತ ಬಲಿಷ್ಠ ಪ್ರದರ್ಶನ ನೀಡಿತು. ಚಕ್ರವರ್ತಿ ಒಂದು ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಇಂಗ್ಲೆಂಡ್ ತಂಡವನ್ನು ಸಂಕಷ್ಟಕ್ಕೆ ಸಿಕ್ಕಿಸಿದರು.

ಅಭಿಷೇಕ್ ಗಾಯ, ಸ್ಯಾಮ್ಬನ್‌ಫಾರ್ಮ್ ಗಮನಕ್ಕೆ
ಬ್ಯಾಟಿಂಗ್‌ನಲ್ಲಿ ಅಭಿಷೇಕ್ ಶರ್ಮ ಅವರ 232ರಷ್ಟು ಸ್ಟ್ರೈಕ್‌ರೇಟ್ ಮಿಂಚಿಸಿತ್ತು, ಆದರೆ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಸಂಜು ಸ್ಯಾಮ್ಬನ್ ಸಿಡಿದು ನಿಂತರೂ ಇನ್ನಿಂಗ್ಸ್‌ ಅನ್ನು ಆಳಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು. ನಾಯಕ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಖಾತೆ ತೆರೆಯುವ ನಿರೀಕ್ಷೆಯಿದೆ.

ಚೆಪಾಕ್ ಅಂಗಳದಲ್ಲಿ ಸ್ಪಿನ್ನರ್‌ಗಳಿಗೆ ಮೇಲುಗೈ
ಚೆಪಾಕ್ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ನಿರೀಕ್ಷೆಯಿದ್ದು, ಭಾರತ ತಂಡವು ವಿವಿಧತೆ ಹೊಂದಿರುವ ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿರುವುದರಿಂದ ಕಮಾಲಿನ ಆಟದ ನಿರೀಕ್ಷೆಯಿದೆ. ಶಮಿ ತಂಡಕ್ಕೆ ಮರಳಿದರೆ, ನಿತೀಶ್ ಕುಮಾರ್ ರೆಡ್ಡಿ ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.

ಪುನರ್‌ಪ್ರದರ್ಶನದ ನಿರೀಕ್ಷೆ
ಬಟ್ಲರ್, ಲಿವಿಂಗ್‌ಸ್ಟೋನ್, ಬ್ರೂಕ್ ಮುಂತಾದ ಟT20 ಸ್ಪೆಷಲಿಸ್ಟ್ ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ತಂಡ ಚೆನ್ನೈಯಲ್ಲಿ ತಿರುಗಿಬೀಳಲು ಪ್ರಯತ್ನಿಸಲಿದೆ. ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಎಡವಟ್ಟನು ಮರೆತು, ಇಂಗ್ಲೆಂಡ್ ತಂಡ ಉತ್ತಮ ಆಟವನ್ನು ನೀಡಲು ಸಜ್ಜಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಿಮ್ಮ ಅಡುಗೆಮನೆಯಲ್ಲಿರುವ ಈ ಒಂದು ಎಣ್ಣೆ ನೂರಾರು ಕಾಯಿಲೆಗಳಿಗೆ ಮನೆಮದ್ದು: ಕ್ಯಾಸ್ಟರ್ ಆಯಿಲ್ ಬಳಸುವ ಸರಿಯಾದ ವಿಧಾನ ಇಲ್ಲಿದೆ.

ಹರಳೆಣ್ಣೆಯ ಆರೋಗ್ಯಕರ ಪ್ರಯೋಜನಗಳು, ಕೂದಲ ರಕ್ಷಣೆ ಮತ್ತು ಮಲಬದ್ಧತೆಗೆ ಇದನ್ನು ಬಳಸುವ ಸರಿಯಾದ ವಿಧಾನಗಳ ಕುರಿತು ಇಲ್ಲಿದೆ ಪೂರ್ಣ ಮಾಹಿತಿ.

ಉದ್ಯಮಿ ಸಂಪತ್‌ ಶೆಟ್ಟಿಗೆ ಪ್ರತಿಷ್ಠಿತ ಧರ್ಮಯೋಗಿ ಪುರಸ್ಕಾರ

ಗ್ರಾಮೀಣ ಉದ್ಯಮಿ ಮಂದಾರ್ತಿ ಸಂಪತ್ ಶೆಟ್ಟಿ ಅವರಿಗೆ ಮುದ್ರಾಡಿಯಲ್ಲಿ ಧರ್ಮಯೋಗಿ ಸನ್ಮಾನ ಪ್ರಶಸ್ತಿ ಘೋಷಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ 2 ಸೇತುವೆಗೆ 5 ಕೋಟಿ ಅನುದಾನ ಬಿಡುಗಡೆ

ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ನಾಡ್ಪಾಲು ಹಾಗೂ ಹೆರ್ಮುಂಡೆ ಸೇತುವೆ ನಿರ್ಮಾಣಕ್ಕೆ 5 ಕೋಟಿ ಅನುದಾನ ಮಂಜೂರಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್ ಅಕ್ರಮ: ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಅಣ್ಣಾಮಲೈ

ನೀಟ್ ಪರೀಕ್ಷೆ ಸೋರಿಕೆ ಹಾಗೂ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಬಿಜೆಪಿ ನಾಯಕ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.