
ಹಿರಿಯಡ್ಕ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ತನ್ನ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ವ್ಯಕ್ತಿಯನ್ನು ಹಿರಿಯಡ್ಕ ಪೊಲೀಸರು ಜೂನ್ 10ರಂದು ಬಂಧಿಸಿದ್ದಾರೆ. ಈ ವೇಳೆ ಸುಮಾರು ₹1,27,880 ಮೌಲ್ಯದ 55.60 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ವಾಸುದೇವ ಪ್ರಭು (56) ಎಂದು ಗುರುತಿಸಲಾಗಿದೆ.ಅವರು ಮಾಂಬೆಟ್ಟು ಪ್ರದೇಶದಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದರು. ಅಲ್ಲಿಯೇ ಅಕ್ರಮ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ದಾಳಿಯ ಮಾಹಿತಿ:
ಅಹಿತಕರ ಮಾಹಿತಿ ಪಡೆದ ಉಡುಪಿ ಆಹಾರ ನಿರೀಕ್ಷಕರ ತಂಡ, ಹಿರಿಯಡ್ಕ ಠಾಣೆ ಪಿಎಸ್ಐ ಪುನಿತ್ ಕುಮಾರ್ ಬಿ.ಇ. ಹಾಗೂ ಸಿಬ್ಬಂದಿಗಳಾದ ಆದರ್ಶ್ ಮತ್ತು ಕಾರ್ತಿಕ್ ಜತೆಗೂಡಿ ಅಂಗಡಿಗೆ ದಾಳಿ ನಡೆಸಿದ್ದಾರೆ.
ಅಂಗಡಿಯ ಸಿಟೌಟ್ನಲ್ಲಿ 131 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿಯನ್ನು ದಾಸ್ತಾನು ಇಡಲಾಗಿದ್ದು, ಪರಿಶೀಲನೆಯ ನಂತರ ಅದು ಅನ್ನಭಾಗ್ಯ ಯೋಜನೆಯ ಅಕ್ಕಿಯಾಗಿರುವುದು ದೃಢವಾಗಿದೆ.
ಆರೋಪಿ ವಾಸುದೇವ ಪ್ರಭುರವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.