
ಉಡುಪಿ : ಭಾರತದ ಸಮುದ್ರ ಗಡಿಯನ್ನು ಅಕ್ರಮವಾಗಿ ದಾಟಿದ ಆರೋಪದ ಮೇಲೆ ಓಮನ್ ನೌಕೆಯ ಮೂವರು ಪ್ರಯಾಣಿಕರಿಗೆ ಉಡುಪಿ ನ್ಯಾಯಾಲಯವು ₹80,000 ದಂಡ ವಿಧಿಸಿದೆ. ಆರೋಪಿಗಳಿಗೆ ಈ ದಂಡ ಮಂಜೂರಾಗಿ, ತೀವ್ರ ಎಚ್ಚರಿಕೆ ನೀಡಲಾಗಿದೆ.
ಈ ಘಟನೆ ಫೆಬ್ರವರಿ ತಿಂಗಳಲ್ಲಿ ನಡೆದಿದ್ದು, ಮಂಗಳೂರು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದ ವೇಳೆ ಓಮನ್ ನಿಂದ ಬಂದ ದೋಣಿಯನ್ನು ಪತ್ತೆ ಹಚ್ಚಿದರು. ಅನುಮತಿಯಿಲ್ಲದೇ ಭಾರತೀಯ ಜಲಪ್ರದೇಶದಲ್ಲಿ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೇಮ್ಸ್ ಫ್ರಾಂಕ್ಲಿನ್, ರಾಬಿನ್ ಸ್ಟನ್ ಮತ್ತು ಟಿರೋಸ್ ಯಾನೆ ಡಿರೋಜ್ ಎಂಬಾತರು ಮೀನುಗಾರಿಕಾ ಉದ್ಯೋಗಕ್ಕಾಗಿ ಓಮನ್ಗೆ ತೆರಳಿದ್ದರು. ಆದರೆ, ಅಲ್ಲಿ ಅವರು ಎದುರಿಸಿದ ಕಷ್ಟಗಳ ಕಾರಣದಿಂದ ಭಾರತಕ್ಕೆ ಮರಳಲು ಕಾನೂನುಬದ್ಧ ಮಾರ್ಗಗಳು ಲಭ್ಯವಾಗಿಲ್ಲ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ವಿಚಾರಣೆ ನಡೆಸಿದ ಉಡುಪಿ ನ್ಯಾಯಾಲಯ, ಯಾವುದೇ ಪ್ರಮಾಣಿತ ದಾಖಲೆ ಅಥವಾ ಪ್ರವೇಶ ಅನುಮತಿ ಇಲ್ಲದೆ ಭಾರತೀಯ ಜಲಗಡಿಯನ್ನು ಅಕ್ರಮವಾಗಿ ಪ್ರವೇಶಿಸಿರುವ ಕಾರಣ ಈ ಮೂವರಿಗೆ ಒಟ್ಟು ₹80,000 ದಂಡ ವಿಧಿಸಿ ಪ್ರಕರಣಕ್ಕೆ ಅಂತಿಮ ತೀರ್ಪು ನೀಡಿದೆ.