spot_img

ಪಹಲ್ಗಾಮ್ ದಾಳಿ ವೇಳೆ ತಲ್ವಾರ್ ತೋರಿಸಿದ್ದರೆ ಕಥೆ ಬೇರೆಯಾಗುತ್ತಿತ್ತು,ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇಟ್ಟುಕೊಳ್ಳಿ : ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ

Date:

ಮಂಗಳೂರು, ಏಪ್ರಿಲ್ 29 – ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಹೊಸ ಹೇಳಿಕೆ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಪಹಲ್ಗಾಮ್ ಉಗ್ರ ದಾಳಿ ಸಂದರ್ಭದಲ್ಲಿ ಹಿಂದೂಗಳು ತಲ್ವಾರ್ ತೋರಿಸಿದ್ದರೆ, ಕಥೆಯೇ ಬೇರೆಯಾಗುತ್ತಿತ್ತು ಎಂಬ ಹೇಳಿಕೆಯ ಜೊತೆಗೆ, ಹೆಣ್ಣುಮಕ್ಕಳು ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿ ಇಟ್ಟುಕೊಳ್ಳಬೇಕು ಎಂಬ ಸಲಹೆ ಕೂಡ ನೀಡಿದ್ದಾರೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಅಕ್ರಮಣದ ಸಂದರ್ಭ ‘ಬೇಡ’ ಎಂದು ಕೋರಿದರೆ ನಿಮ್ಮ ಕಥೆ ಮುಗಿಯಿತು. ಬದಲಾಗಿ ಚೂರಿ ತೋರಿಸಿ, ‘ಬಾ’ ಎಂದು ಸವಾಲು ಹಾಕಿ, ಆಕ್ರಮಣಕಾರಿಗಳು ಹೆದರಿ ಓಡುತ್ತಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಮುಂದುವರೆದು, “ವ್ಯಾನಿಟಿ ಬ್ಯಾಗ್‌ನಲ್ಲಿ ಪೌಡರ್, ಬಾಚಣಿಗೆ ಮಾತ್ರವಲ್ಲ, 6 ಇಂಚಿನ ಚೂರಿಯನ್ನೂ ಇಡಬಹುದು. ಅದಕ್ಕೆ ಲೈಸೆನ್ಸ್ ಬೇಕಾಗಿಲ್ಲ. ಈ ಮೂಲಕ ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬಹುದಾಗಿದೆ” ಎಂದು ಹೇಳಿದರು.

ಪ್ರಭಾಕರ ಭಟ್ ಅವರು ಪಹಲ್ಗಾಮ್ ದಾಳಿಯ ಕುರಿತು ಹೇಳಿದ, “ಆ ಸಮಯದಲ್ಲಿ ಹಿಂದೂಗಳು ತಲ್ವಾರ್ ತೋರಿಸಿದ್ದರೆ, ಕಥೆಯೇ ಬೇರೆಯಾಗುತ್ತಿತ್ತು” ಎಂಬ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದೆ. ಕೆಲವರು ಈ ಹೇಳಿಕೆಯನ್ನು ಸ್ವರಕ್ಷಣೆಯ ಹಿತದೃಷ್ಟಿಯಿಂದ ನೋಡಿ ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಅದನ್ನು ದ್ವೇಷ ಸೃಷ್ಟಿಸುವ ಹಾಗೂ ಸಾಮಾಜಿಕ ಉದ್ವಿಗ್ನತೆಯ ಮಾತು ಎಂದು ತೀವ್ರವಾಗಿ ಖಂಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚಿಕ್ಕೂ ಹಣ್ಣು: ಆರೋಗ್ಯ, ಬೆಳೆ ಮತ್ತು ಉಪಯೋಗಗಳ ಸಂಪೂರ್ಣ ಮಾಹಿತಿ

ಚಿಕ್ಕೂ (ಸಪೋಟಾ) ಹಣ್ಣು ಕೇವಲ ರುಚಿಕರವಾಗಿರುವುದಲ್ಲ, ಅದರ ಆರೋಗ್ಯ ಪ್ರಯೋಜನಗಳು ಅದನ್ನು ಒಂದು "ಸೂಪರ್ ಫ್ರೂಟ್" ಆಗಿ ಮಾಡಿವೆ.

ಅಮೇರಿಕಾದಲ್ಲಿ ಮೈಸೂರಿನ ಉದ್ಯಮಿಯೊಬ್ಬರು ಪತ್ನಿ ಮತ್ತು ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ

ಅಮೆರಿಕಾದ ನ್ಯೂ ಕ್ಯಾಸಲ್ ನಲ್ಲಿ ಮೈಸೂರಿನ ಉದ್ಯಮಿಯೊಬ್ಬರು ತನ್ನ ಪತ್ನಿ ಮತ್ತು ಹಿರಿಯ ಪುತ್ರನನ್ನು ಗುಂಡಿಕ್ಕಿ ಹತ್ಯೆಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಚಿತ್ರದುರ್ಗ SSLC ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಹಿರಂಗ: 10 ಶಿಕ್ಷಕರ ಅಮಾನತು, ಅಧಿಕಾರಿಗಳಿಗೆ ಶೋಕಾಸ್

ವಾಸವಿ ಪ್ರೌಢಶಾಲೆಯಲ್ಲಿ ನಡೆದ SSLC ಪರೀಕ್ಷಾ ಕೇಂದ್ರದಲ್ಲಿ ಉಂಟಾದ ಗಂಭೀರ ಅಕ್ರಮ ಘಟನೆ ರಾಜ್ಯ ಶಿಕ್ಷಣ ವ್ಯವಸ್ಥೆಯ ನೈತಿಕತೆಯ ಮೇಲಿನ ನಂಬಿಕೆಗೆ ಆಘಾತ ನೀಡಿದೆ.

18 ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸಬೇಕು: ರಾಜ್ಯಪಾಲರಿಗೆ ಬಿಜೆಪಿ ಮನವಿ

ವಿಧಾನಸಭೆಯಲ್ಲಿ ಅಮಾನತುಗೊಂಡಿರುವ 18 ಶಾಸಕರ ಅಮಾನತು ಆದೇಶವನ್ನು ರದ್ದುಗೊಳಿಸಲು ಆಗ್ರಹಿಸಿ, ಬಿಜೆಪಿ ನಿಯೋಗ ಇಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.